ವಂದೇ ಓಂಕಾರ ಚಾಮರ ಕರ್ಣನೇ |ONDE OMKARA CHAMARA | LORD GANESHA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ವಂದೇ ಓಂಕಾರ ಚಾಮರ ಕರ್ಣನೇ  ಶಂಕರ ಸುತ ಶರಣು ವಿನಾಯಕ

ಮಂಗಳ ವರ ಶರಣು ।।

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।।

 

ವಿಕಟನೆ ವಿಮಲನೆ ಏಕದಂತನೆ  ಶುಭವರ್ಣ ಗೌರಿ ಸುತನೆ

ವಿಕಟನೆ ವಿಮಲನೆ ಏಕದಂತನೆ  ಶುಭವರ್ಣ ಗೌರಿ ಸುತನೆ

ನೀನಲ್ಲದೆನಗಾರು ಸಖರಿಲ್ಲವೋ ಬಾಂಧವರಿಲ್ಲವೋ ಕಾಯುವರಿಲ್ಲವೋ

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।। 1||

 

ಸುಮುಖನೆ ಕಪಿಲನೆ ಧೂಮ್ರವರ್ಣನೆ  ಗಣನಾಥ ನಿನಗೆ ವಂದನೆ

ಸುಮುಖನೆ ಕಪಿಲನೆ ಧೂಮ್ರವರ್ಣನೆ  ಗಣನಾಥ ನಿನಗೆ ವಂದನೆ

ಎಂದೆಂದೂ ನಿನ್ನನು ಸ್ತುತಿ ಮಾಡುವೆ ಹಾಡಿ ಕೊಂಡಾಡುವೆ ಪೂಜೆ ವ್ರತ ಮಾಡುವೆ

ಮಧೂರ ಗಣಪತಿ ಶರವು ಗಣಪತಿ  ಕುಂಭಾಶಿ ಗಣಪತಿ ಶರಣು

 ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣು ।। 2||

……………………………………………………………………………………………………………

 


ರಾಮ ರಾಮ ರಾಮ ರಾಮ ರಾಮ ಎನ್ನಿರೋ | RAMA RAMA RAMA SEETHA RAMA ENNIRO SONG LYRICS IN KANNADA |LORD RAMA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಾಗ: ತಿಲಂಗ್

ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|

ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೊ

 

ಭರದಿ ಯಮನ ಭಟರು ಬಂದು ಹೊರಡಿರೆಂದು  ಮೆಟ್ಟಿ ಮುರಿಯೆ

ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದೋ ||

 

ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ

ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದೋ ||

 

ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು

ಕಂಗಳಿಗಾತ್ಮ ಸೇರಿದಾಗ  ರಂಗನ ನಾಮ ಒದಗದೋ ||

 

ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ

ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದೋ||

 

ಶ್ರೇಷ್ಠ ಜನ್ಮದಲ್ಲಿ ಹುಟ್ಟಿ ದುಷ್ಟ ಮಾಡಿ ದೇಹ

ಬಿಟ್ಟು ಹೋಗುವಾಗ ಪುರಂದರ ವಿಠ್ಠಲ ನಾಮ ಬಾರದೋ||

.......................................................................................................................................................

ಪುರಂದರ ದಾಸರು – ಕವಿ ಕಾವ್ಯ ಪರಿಚಯ | Purandara Dasa – Kavi Kavya Parichaya

 


ಪೂರ್ವ ನಾಮ : ಶ್ರೀನಿವಾಸ ನಾಯಕ /ನವಕೋಟಿ ನಾರಾಯಣ (ಬಿರುದು)

ಕಾಲ : 1484 - 1564

ಜನ್ಮಸ್ಥಳ : ಆರಗ, ತೀರ್ಥಹಳ್ಳಿ ತಾಲ್ಲೂಕು ,ಶಿವಮೊಗ್ಗ ಜಿಲ್ಲೆ

ತಂದೆ : ವರದಪ್ಪ ನಾಯಕ

ತಾಯಿ: ಲಕ್ಷ್ಮೀದೇವಿ

ಹೆಂಡತಿ : ಸರಸ್ವತೀ

ಪೂರ್ವಕಸುಬು : ಹಣದ ಲೇವಾದೇವಿ

ಅಂಕಿತ :ಪುರಂದರ ವಿಠಲ

ಬಿರುದು: ಕರ್ಣಾಟಕ ಸಂಗೀತ ಪಿತಾಮಹ

ಪ್ರಮುಖ ಕೃತಿಗಳು: ಜಗದೊದ್ಧಾರನ, ಕೃಷ್ಣಾ ನೀ ಬೇಗನೆ ಬಾರೊ, ಭಾಗ್ಯದ ಲಕ್ಷ್ಮಿ ಬಾರಮ್ಮ


ಶ್ಲೋಕ- ಪದಚ್ಛೇದ-ಅರ್ಥ सरस्वति नमस्तुभ्यम् ಸರಸ್ವತಿ ನಮಸ್ತುಭ್ಯಮ್ |sanskrit learning through kannada

 

सरस्वति नमस्तुभ्यम्

वरदे कामरूपिणि |

विद्यारंभं करिष्यामि

सिद्दिर्भवतु मे सदा ||

ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ

ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ

ಪದಚ್ಛೇದ

सरस्वति नम: तुभ्यम् वरदे, काम-रुपिणिविद्या-आरम्भं करिष्यामि सिद्दि: भवतु मे सदा |

ಅನ್ವಯ

सरस्वति, वरदे, काम-रुपिणि,तुभ्यम् नम: |  विद्या-आरम्भं करिष्यामि मे सदा सिद्दि: भवतु   |


सरस्वति = ಹೇ ಸರಸ್ವತಿ

वरदे = ವರಗಳನ್ನು ಕೊಡುವವಳೇ

काम-रुपिणि= ಇಷ್ಟಬಂದಂತಹ ರೂಪಗಳನ್ನು ಧರಿಸುವವಳೇ

तुभ्यम् = ನಿನಗೆ

 नम: =ನಮಸ್ಕಾರ

विद्या-आरम्भं =ವಿದ್ಯೆ ಕಲಿಯುವ ಆರಂಭ

करिष्यामि =ಮಾಡಲಿದ್ದೇನೆ

मे =ನನಗೆ

सदा =ಯಾವಾಗಲೂ

सिद्दि: = ಯಶಸ್ಸು

भवतु = ಸಿಗಲಿ/ಆಗಲಿ

ಹೇ ಸರಸ್ವತಿ, ಬೇಡಿದ ವರಗಳನ್ನು ಕೊಡುವವಳೇ,  ಇಷ್ಟಬಂದ ರೂಪಗಳನ್ನು ಧರಿಸುವವಳೇ, ನಿನಗೆ ನಮಸ್ಕಾರ.

 ವಿದ್ಯೆಯನ್ನು ಕಲಿಯಲು ಪ್ರಾರಂಭಿಸುತ್ತಿರುವ ನನಗೆ  ಯಾವಾಗಲೂ ಯಶಸ್ಸು ಸಿಗಲಿ ಎಂದು ಆಶೀರ್ವದಿಸು.

..........................................................................................................................................................


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | NEE MAAYEYOLAGO NINNOLU MAAYEYO | KANAKADASA SONG

ಹಾಡಲು ಕಲಿಯಿರಿ(CLICK HERE TO LEARN THIS SONG) 

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ| 


ಬಯಲೊಳಗೆ ಆಲಯವೂ ಆಲಯದಿ ಬಯಲೊ 

ಬಯಲು ಆಲಯವೆರಡು ನಯನದೊಳಗೂ 

ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ

ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1| 


ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ 

ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ 

ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ

ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2| 


ಕುಸುಮದಲಿ  ಗಂಧವೋ ಗಂಧದಲಿ ಕುಸುಮವೊ

ಕುಸುಮ ಗಂಧಗಳೆರಡು ಆಗ್ರಾಣದೊಳಗೂ

ಅಸಮಭವ ಕಾಗಿನೆಲೆ ಆದಿಕೇಶವರಾಯ

ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ

...............................................................................................................

ಶಿವ ಅಪರಾಧಕ್ಷಮಾಪಣಾ ಸ್ತೋತ್ರ ಕನ್ನಡ ಅನುವಾದ | ರಚನೆ:ಮಧು ಕೋಡನಾಡು | SHIVA APARADHA KSHAMAPANA STOTRA KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ:ಮಧು ಕೋಡನಾಡು

ಪೂರ್ವ ಕರ್ಮದ ಫಲವ ಹೊತ್ತು, ಅಮ್ಮನುದರದಿ ಜನಿಸಿದೆ

ಅಲ್ಲಿ ಕಲ್ಮಶದಲ್ಲಿ ಹೊರಳುತ, ಜಠರಾಗ್ನಿಲಿ ದಹಿಸಿದೆ

ಕಷ್ಟದಲಿ ನಾ ಬಿದ್ದು ಎದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧ ||


ಬಾಲ್ಯದಲಿ ನಾ ದುಃಖದಿಂದಲಿ, ಸ್ತನ್ಯಪಾನಕೆ ತಪಿಸಿದೆ 

ದೇಹದಲಿ ನಾ ತ್ರಾಣವಿಲ್ಲದೇ, ಜಂತುಬಾಧೆಯ ಸಹಿಸಿದೆ

ರೋಗ ರುಜಿನದಿ ನರಳುತಿದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೨ ||


ಪ್ರೌಢನಾದೊಡೆ ಪಂಚ ಮೋಹದಿ, ವಿಷಯ ಲಂಪಟ ಎನಿಸಿದೆ

ಹೆಣ್ಣು, ಹೊನ್ನು, ಪುತ್ರ ಮೋಹವು, ಎನ್ನ ಬುದ್ಧಿಯ ಭ್ರಮಿಸಿದೆ

ಸ್ವಾರ್ಥ ಲೋಭ ಗರ್ವದಿಂದಲಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೩ ||


ಮುಪ್ಪು ಅಡರಲು ಮನದ ಒಳಗೆ, ಮತ್ತೆ ಮತಿ ಗತಿ ತಪ್ಪಿದೆ

ರೋಗ ರುಜಿನ ವಿಯೋಗದಿಂದ, ದೇಹ ತಪಿಸುತ ಬತ್ತಿದೆ 

ಸುಳ್ಳು ಮೋಹದ ಭ್ರಮೆಗೆ ಸಿಲುಕಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೪ ||


ಜೀವನದ ಪ್ರತಿ ಹೆಜ್ಜೆಯಲ್ಲೂ, ಅಡ್ಡಿ ಎದುರಿಸಿ ನಿಂತೆನು

ದ್ವಿಜನೇ ಆದರೂ ಬ್ರಹ್ಮ ಕರ್ಮವ, ಮಾಡಲಾರದೆ ಹೋದೆನು

ಶ್ರವಣ ಮನನವ ಮಾಡದೇ ನಾ, ಮಾಡಲೆಂತೋಪಾಸನೇ ? 

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೫ ||


ಉಷೆಯಲೆದ್ದು ನಿನ್ನ ಪೂಜೆಗೆ, ಗಂಗೆ ತಾರದೇ ಹೋದೆನು 

ನಿನ್ನ ಅರ್ಚನೆಗೊಂದು ಬಿಲ್ವದ, ದಳವ ತಂದುದ ಕಾಣೆನು

ಪುಷ್ಪ ಮಾಲಿಕೆ, ಗಂಧಲೇಪನ, ಕೆರೆಯ ಕಮಲವ ತಾರದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೬ ||


ಹಾಲು, ಮೊಸರು, ಜೇನು, ತುಪ್ಪ, ಶರ್ಕರಂಗಳ ತಾರದೇ

ಚಂದನಾದಿ ಸುಗಂಧ ದ್ರವ್ಯದಿ, ನಿನಗೆ ಲೇಪನ ಗೈಯದೇ

ಧೂಪ ದೀಪದ ಜೊತೆಗೆ ಮರೆತೆ, ಹಣ್ಣು ಭಕ್ಷ ನಿವೇದನೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೭ ||


ಮನದಿ ಶಿವನನು ನೆನೆದು ದ್ವಿಜರಿಗೆ, ದಾನ ಧರ್ಮವಗೈಯದೇ

ಬೀಜಮಂತ್ರದ ಸಹಿತ ಅಗ್ನಿಗೆ, ಲಕ್ಷ ಹೋಮವ ಮಾಡದೇ

ಗಂಗೆ ತಟದಲಿ ನಿನ್ನ ಜಪಿಸಿ, ವ್ರತವಗೈಯದೇ ಹೋದೆನು

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೮ ||


ನಾಸಿಕಾಗ್ರದಿ ದೃಷ್ಟಿಯುಳ್ಳವ, ತ್ರಿಗುಣ ರಹಿತನೇ ಏಕನೇ,

ಸರ್ವಶುದ್ಧನೇ ನಿನ್ನ ದರುಶನ, ನಾನು ಮಾಡದೇ ಹೋದೆನು

ಏಕಚಿತ್ತದಿ ನಿನ್ನ ಸ್ಮರಣೆಯ, ಮಾಡದಾದೆನು ಶಂಕರ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ನಿರಂತರ || ೯ ||


ಪದ್ಮಾಸನದಲಿ ಕುಳಿತು ಪ್ರಣವ, ಮಂತ್ರೋಚ್ಚಾರಣೆ ಗೈಯದೇ

ಅಂತರಂಗದ ಒಳಗೆ ನಿನ್ನನು, ಲಿಂಗರೂಪದಿ ನಿಲಿಸದೇ

ಜ್ಯೋತಿರೂಪನೆ ಬ್ರಹ್ಮರೂಪನೇ, ನಿನ್ನ ಧ್ಯಾನವ ಗೈಯದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೦ ||


ಹೃತ್ಪ್ರಕಾಶನೇ ಹೃದಯವಾಸನೇ, ಸಕಲ ವೇದದಿ ವೇದ್ಯನೇ

ಮುನಿಗಳರಿವಿಗೆ ಮಾತ್ರ ತಿಳಿಯುವ, ಸತ್ಯ ಶಾಂತ ಸ್ವರೂಪನೇ

ನಿದಿರೆ ಎಚ್ಚರ ಸ್ವಪ್ನದಲ್ಲೂ  ತ್ರಿಗುಣ ರಹಿತನ ಸ್ಮರಿಸದಾ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೧ ||


ಮನ್ಮಥನ ಸಂಹರಿಸಿದವನೇ, ನಿಟಿಲ ನೇತ್ರದ ರುದ್ರನೇ

ಶಿರದಿ ಗಂಗೆ ಚಂದ್ರ ಧರಿಸಿದ, ಸರ್ಪಭೂಷಿತ ದೇವನೇ

ಗಜದ ಚರ್ಮವ ಧರಿಸಿ ನಿಂದಿಹ, ಮೂರು ಲೋಕದ ಒಡೆಯನೆ

ಮೋಕ್ಷ ಮಾರ್ಗಕೆ ನನ್ನ ಮನವನು, ನಿನ್ನಲಿರಿಸು ಶಂಭುವೇ || ೧೨ ||


ವಸ್ತು ವಾಹನ ರಾಜ್ಯ ಮೋಹ, ಧನ ಕನಕಗಳ ಮೋಹದಿ

ಬಂಧು ಬಾಂಧವ ಪಶುಗಳಿಂದ, ಎನಿತು ಲಾಭವು ಆತ್ಮಕೆ?

ನೀರ ಮೇಲಿನ ಗುಳ್ಳೆಯಂತಹ, ಕ್ಷಣಿಕ ಆಸೆಯ ಬಿಡಿಸುತ

ಗುರುವ ನೆನೆದು ಪಾರ್ವತಿ ಪತಿ, ನಿನ್ನ ಭಜನೆಯ ಮಾಡಿಸು || ೧೩ ||


ದಿನವು ಕಳೆದೊಡೆ ಆಯು ಯವ್ವನ, ಕೊಂಚ ಕೊಂಚವೇ ಕಳೆವುದು

ಕಳೆದು ಕಣ್ಮರೆಯಾದ ಜೀವನ, ಮತ್ತೆ ಹಿಂದಕೆ ಬಾರದು

ಧನವು ಅಲೆಗಳ ಏರು ಇಳಿತದ, ಹಾಗೆ ಎಂದಿಗೂ ನಶ್ವರ

ಮಿಂಚಿನಂತೆ ಕ್ಷಣಿಕ ಜೀವನ, ರಕ್ಷಿಸೆನ್ನನು ಈಶ್ವರ || ೧೪ ||


ವಿಶ್ವಕಾರಣ ಸ್ವಪ್ರಕಾಶನೇ, ಪಾರ್ವತೀ ಪತಿ ವಂದನೆ

ಸರ್ಪಭೂಷಣ ಜಗದ ಸಕಲ, ಜೀವದೊಡಯನೇ ವಂದನೆ 

ಸೂರ್ಯ ಚಂದ್ರ ಅಗ್ನಿ ನೇತ್ರನೇ, ವಿಷ್ಣು ಪ್ರಿಯನೇ ವಂದನೆ

ಭಕ್ತ ಪೋಷಣೆಗೈವ ಶಿವನೇ, ಶಂಕರನೇ ನಿನಗೊಂದನೆ  || ೧೫ ||


ಶ್ವೇತ ದಂತನೆ, ಮಂದಸ್ಮಿತನೇ, ಶ್ವೇತ ಭಸ್ಮದ ಲೇಪನೇ

ಶ್ವೇತವರ್ಣದ ಕರ ಕಪಾಲ, ಶೂಲ ಕುಂಡಲ ಧಾರನೇ

ಶಿರದ ಚಂದಿರ, ಕುಳಿತ ನಂದಿ, ಜಟೆಯ ಗಂಗಾ ಜಲದಲಿ

ಶ್ವೇತವರ್ಣದಿ ಶೋಭೆಗೈವನೇ, ಕ್ಷಮೆಯ ಮಳೆಯನೇ ಸುರಿಸು ನೀ  || ೧೬ ||


ಪೌರೋಹಿತ್ಯ, ರಜನಿ ಚರಿತ, ಮಠದ ಅಧಿಪತಿ ಕಾರ್ಯವ,

ಗ್ರಾಮ ಪ್ರತಿನಿಧಿ, ಸುಳ್ಳು ಸಾಕ್ಷ, ದುರ್ಜನಂಗಳ ಸಂಘವ,

ಬ್ರಹ್ಮ ದ್ವೇಷ, ಭಿಕ್ಷಾ ವೃತ್ತಿ, ಪಶುಗಳಲ್ಲಿ ನಿರ್ದಯ,

ಇಂತ ದುಸ್ಥಿತಿ ಜನ್ಮ ಜನ್ಮಕೂ ನೀಡಬೇಡವೋ ಪಶುಪತೇ  || ೧೭ ||


ಕರದಿ ಚರಣದಿ, ಮಾತು, ಶ್ರವಣದಿ, ಮಾಡಿದೆನ್ನಪರಾಧವ

ತಿಳಿದೋ ತಿಳಿಯದೋ, ಗೈದ, ಗೈಯದ, ಎನ್ನ ಸಾವಿರ ಪಾಪವ

ಕರುಣಾ ಸಾಗರನಾದ ದೇವನೇ, ಕ್ಷಮಿಸು ಎಲ್ಲವನಿಂದು ನೀ

ಜಯತು ಜಯತು, ಜಯತು ದೇವನೆ ಜಯತು ಶಂಭೋ ಶಂಕರ || ೧೮ ||

ಬಾ ರಂಗ ಎನ್ನ ನಾಲಿಗೆಯಲಿ ಸದಾ BAA RANGA ENNA NALIGEYALI SADA | LORD VISHNU SONG LYRICS |PURANDARA DASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾ ರಂಗ ಎನ್ನ ನಾಲಿಗೆಯಲಿ ಸದಾ

ಹರಿ ನಾರಾಯಣ ನಾಮದ ಸ್ಮರಣೆ

ಬಾ ರಂಗ ಶ್ರೀ ರಂಗ ||

 

ಕುಳಿತಿರುವಾಗಲು ನಿಂತಿರುವಾಗಲು

ಹಾಡುವಾಗಲು ನಲಿದಾಡುವಾಗಲು

ಕೇಡುಗ ತನದಿಂದ ನೋಡಿದ ಭಾವದೊಳ್

ನಾ ಮಾಡಿದಾ ಪಾಪ ಓಡುವ ಹಾಗೆ ||1||

 

ಕನಸಿನೊಳಾಗಲಿ ಮನಸಿನೊಳಾಗಲಿ

ಕನಸು ಮನಸಿನಲಿ ನಿನ್ನ ನೆನಪಿರಲಿ

ಸಂತಸ ವರದ ಶ್ರೀ ಪುರಂದರ ವಿಠಲನೆ

ಅಂತ್ಯಕಾಲಕು ನಿನ್ನ ಚಿಂತಿಸುವ ಹಾಗೆ ||2||

....................................................................................................


ವಂದೇ ಓಂಕಾರ ಚಾಮರ ಕರ್ಣನೇ |ONDE OMKARA CHAMARA | LORD GANESHA SONG LYRICS |

  ಹಾಡಲು ಕಲಿಯಿರಿ(CLICK HERE TO LEARN THIS SONG) ವಂದೇ ಓಂಕಾರ ಚಾಮರ ಕರ್ಣನೇ   ಶಂಕರ ಸುತ ಶರಣು ವಿನಾಯಕ ಮಂಗಳ ವರ ಶರಣು ।। ಮಧೂರ ಗಣಪತಿ ...