ಮಂಕುತಿಮ್ಮನ ಕಗ್ಗ: ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? | KAGGA EXPLAINED

 CLICK HERE FOR EXPLANATION (ವ್ಯಾಖ್ಯಾನ)

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ?

ಓಲೆಗಳನವರವರಿಗೈದಿಸಿರೆ ಸಾಕು

ಸಾಲಗಳೋ ಶೂಲಗಳೋ ನೋವುಗಳೋ ನಗುವುಗಳೋ

ಕಾಲೋಟವವನೂಟ ಮಂಕುತಿಮ್ಮ ॥

 

ಅಂಚೆಯಾಳಿಗೆ ಬರೆದ ಸುದ್ದಿಯ ಚಿಂತೆ ಕೂಡದು .  ಓಲೆಗಳನ್ನು ಮುಟ್ಟಬೇಕಾದವರಿಗೆ ಮುಟ್ಟಿಸಿದರೆ ಸಾಕು .  ಸಾಲವೋ, ಶೂಲವೋ, ನೋವೋ, ನಲಿವೋ ಚಿಂತೆ ಏಕೆ ? ಓಡಾಟವೇ ಅಂಚೆಯಾಳಿಗೆ ಊಟವಾಗಿದೆ.

.............................................................................................................................................

ತೂಗಿ ತೂಗಿ ಮರಗಳೇ | ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್ | ಪರಿಸರ ಗೀತೆ | environmental song in kannada |TOOGI TOOGI MARAGALE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್

 

ತೂಗಿ ತೂಗಿ ಮರಗಳೇ ಇಳೆಗೆ ಇಳಿದೆ ವರಗಳೇ

ನೆಲದ ಮಧುರ ಗಾನದಲ್ಲಿ ಮೂಡಿ ಬಂದ ಸ್ವರಗಳೇ ॥

ಆ ಆ ಆ ಆ ಆ .. ಆ ಆ ಆ ಆ..  ಆ ಆ ಆ ಆ ಆ .. ಆ ಆ ಆ ಆ

 

ಮಾತಾಡದೆ ದುಡಿಯುವ ಪ್ರೀತಿ ಪಡೆದ ಕರಗಳೇ

ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ

ಸಾಲು ಹಸಿರ ಮಾಲೆಯೇ ಜೀವ ರಸದ ನಾಲೆಯೇ

ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೆ ॥೧॥

 

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ

ಮೈಯ ತುಂಬ ಚಿಗುರಿನ ರೋಮಾಂಚನವ ತಳೆವಿರಿ

ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ

ಔದಾರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ ॥೨॥

---------------------------------------------------------------------------------------------------------------

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು | ಕುವೆಂಪು | MUCCHU MARE YILLADEYE | KANNADA BHAVAGEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕುವೆಂಪು

 

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಹೇ ಗುರುವೆ ಅಂತರಾತ್ಮ ।

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೆ ಅಂತರಾತ್ಮ ॥

 

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ

ನರಕ ತಾನುಳಿಯುವುದೆ ನರಕವಾಗಿ ॥೧॥

 

ಶಾಂತ ರೀತಿಯಲೊಮ್ಮೆ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೋ ಓ ಅನಂತ ।

ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ

ನಿನ್ನ ನೀತಿಯ ಬೆಳಕಿನಾನಂದಕೈ ॥೨॥

----------------------------------------------------------------------------


ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು |DEVA NINNA MAAYEGANJI | ಕನ್ನಡ ಭಾವಗೀತೆ | ಕೆ ಎಸ್ ನರಸಿಂಹಸ್ವಾಮಿ

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ ಎಸ್ ನರಸಿಂಹಸ್ವಾಮಿ

ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು

ನಿನ್ನ ಇಚ್ಛೆಯಂತೆ ನಡೆವೆ ನಡ್ದಿ ಮಾಡೆನು ॥

 

ಮುಕ್ತಿ ಮುಕ್ತಿ ನನ್ನ ನಾನು ತಿಳಿದುಕೊಳ್ವುದೋ

ಸಾವಿಗಂಜಿ ನಿನ್ನಡಿಯಲಿ ಅಡಗಿಕೊಳ್ವುದೋ ।

ಶಕಿಯಿತ್ತೆ ಮುಕ್ತಿಯನ್ನು ಗಳಿಸಿಕೊಳ್ಳಲು

ನೀರನೆರೆದೆ ಬಳ್ಳಿಯನ್ನು ಬೆಳೆಸಿಕೊಳ್ಳಲು ॥೧॥

 

ಜ್ಞಾನ ರವಿಯನಿತ್ತೆ ಎದೆಯ ನೋಡಿಕೊಳ್ಳಲು

ಗೀತೆಯನ್ನು ಕೊಟ್ಟೆ ಕೊಳಲನೂದಿಕೊಳ್ಳಲು ।

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ

ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ ॥೨॥

ವಿಶೇಷ್ಯ -ವಿಶೇಷಣ in Sanskrit with example | विशेष्य: - विशेषण:

 

1. ಯಾವ ವಸ್ತುವಿನ ವಿಶೇಷತೆಯನ್ನು ಹೇಳಲು ಹೊರಟಿದ್ದೇವೋ ಶಬ್ದ ವಿಶೇಷ್ಯ.

ವಸ್ತುವಿನ ವಿಶೇಷತೆಯನ್ನು ಸೂಚಿಸುವ ಶಬ್ದ ವಿಶೇಷಣ.

2. ವಿಶೇಷಣವು ವಿಶೇಷ್ಯದ ಲಿಂಗ, ವಿಭಕ್ತಿ ಹಾಗೂ ವಚನ ರೂಪವನ್ನು ಪಡೆಯುತ್ತದೆ.

यल्लिङ्गं यद्वचनं या च विभक्तिर्विशेष्यस्य |

तल्लिङ्गं तद्वचनं सैव विभक्तिर्विशेषणस्यापि ||

3. ಭೇದಗಳು :  1. ಗುಣವಾಚಕ

                      2.ಸಂಖ್ಯಾವಾಚಕ

                     3. ಸಂಕೇತ ಬೋಧಕ

                     4. ಪರಿಮಾಣ ವಾಚಕ

 

विशेषण:  विशेष्य:

विशेषण:

विशेष्य:

सुन्दर:

बालक:

सुन्दरी

बालिका

सुन्दरम्

पुष्पम्

श्रेष्ठा:

पर्वता:

पवित्रा:

नद्य:

रुचिकराणि 

फलानि

निर्मले

आकाशे

सुन्दरेण

वस्त्रेण

उन्नतात्

वृक्षात्

सुन्दर्या

सीतया

विशालस्य

भवनस्य

सुन्दराय

रामाय

विशालम्

नगरम्

भव्यम्

गृहम्

भव्य:

आलय:

एक:

छात्र:

एका

छात्रा

एकम्

भवनम्

प्रथम:

बालक:

प्रथमा

बालिका

प्रथमम्

पुस्तकम्

चथुर्थ:

वासर:

चथुर्थी

महिला

चथुर्थम्

दिनम्

चत्वार:

वेदा:

इयं

सीता

स:

बालक:

ते

नगरे

स्वल्पम्

अन्नम्

प्रभूतं

धनम्

बहव:

जना:

बहूनि

मित्राणि

 

 


गङ्गा जलं मधुरम् अस्ति |

गज: स्थूल: अस्ति |

अयं श्लोक: मनोहर: अस्ति |

स: बालक: गायति |

सा बालिका  नृत्यति |

तत् वाहनं चलति |

राम: दशरथस्य ज्यष्ठ: पुत्र: |

सीता जनकस्य ज्य्ष्ठा पुत्री |

कालिदास: श्रेष्ठ: कवि: |

सुन्दराय रामाय नम: |

रमेश: उत्तम: छात्र: अस्ति |

लक्ष्मी उत्तमा छात्रा अस्ति |

गणेश: मम उत्तमं मित्रम् अस्ति |

कृष्ण: सुन्दरीभि: तरुणीभि: आवृत: |

वाटिके मधुराणि फलानि सन्ति |

गीता नूतनानि वस्त्राणि क्रीणाति |

पात्रे स्वल्पम् दुग्धम् अवशिष्टम् |

भिक्षुक: प्रभूतं धनम् इच्छति|

 


ಮಂಕುತಿಮ್ಮನ ಕಗ್ಗ: ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? | KAGGA EXPLAINED

  CLICK HERE FOR EXPLANATION (ವ್ಯಾಖ್ಯಾನ) ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? ಓಲೆಗಳನವರವರಿಗೈದಿಸಿರೆ ಸಾಕು ಸಾಲಗಳೋ ಶೂಲಗಳೋ ನೋವುಗಳೋ ನಗುವುಗಳೋ ...