ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ |ಕೆ ಎಸ್ ನಿಸಾರ್ ಅಹಮದ್| SADA URIYUTIRUVA HAAGE |PATRIOTIC SONG IN KANNADA

 CLICK HERE TO LEARN THIS SONG          CLICK HERE TO LEARN THIS SONG(SCHOOL POEM)

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ

 ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದ ಜನತೆ

 ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ||

 

 ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?

ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ

ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ.||1||

 

 ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ

 ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ;

ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ||2||

 

ಸಾಗಿದಂತೆ ಸಲ್ಲುತಿರಲು ಸಾಧನೆಯೆಡೆ ಗಮನ

 ಪ್ರಾಣವನ್ನೇ ಪಗಡೆಯಾಡಿದವಿರಿಗೆಮ್ಮ ನಮನ;

ತಾಯಮುಡಿಗೆ ದಿನವು ಏರುತಿರಲಿ ಹೂವು ದವನ.||3||

---------------------------------------------------------------------------------

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

CLICK HERE TO LEARN THIS SONG

ಹೂವು ಚೆಲುವೆಲ್ಲ ನಂದೆಂದಿತು

ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು

ಹೂವು ಚೆಲುವೆಲ್ಲ ನಂದೆಂದಿತು. ||

 

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು

ಕೊಳಲಿನ ದನಿ, ವೀಣೆಯ ಖನಿ ಕೊರಳಲಿ ಇದೆಯೆಂತು

ಕೊಳಲಿನ ದನಿ, ವೀಣೆಯ ಖನಿ ಕೊರಳಲಿ ಇದೆಯೆಂತು

ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು ||1||

 

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು

ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು

ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು

ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆoದಿತು ||2||

 

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು

ನೀಡುವೆ ಮಳೆ, ತೊಳೆಯುವೆ ಕೊಳೆ ಸಮನಾರೆನಗೆಂತು

ನೀಡುವೆ ಮಳೆ, ತೊಳೆಯುವೆ ಕೊಳೆ ಸಮನಾರೆನಗೆಂತು

ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆoದಿತು ||3||

-----------------------------------------------------------------------------------------------

ದುಗ್ಗಾಣಿ ಎಂಬುವುದು ದುರ್ಜನರ ಸಂಗ SONG LYRICS | PURANDARA DASA SONGS | DUGGANI EMBUVUDU DURJAN SANGA |

 

ದುಗ್ಗಾಣಿ ಎಂಬುವುದು ದುರ್ಜನರ ಸಂಗ

ದುಗ್ಗಾಣಿ ಬಲು ಕೆಟ್ಟದ್ದಣ್ಣಾ ॥

 

ಆಚಾರ ಹೇಳೋದು ದುಗ್ಗಾಣಿ ।ಬಹು।

ನೀಚರನೊಲಿಸೋದು ದುಗ್ಗಾಣಿ

ನಾಚಿಕೆಯಿಲ್ಲದೆ ಮನೆ ಮನೆ ತಿರುಗಿಸಿ

ಛೀ ಛೀ ಎನಿಸೋದು ದುಗ್ಗಾಣಿ ॥೧॥

 

ನೆಂಟತನ ಹೇಳೋದು ದುಗಾಣಿ । ಬಹು ।

ನೆಂಟರನೊಲಿಸೋದು ದುಗ್ಗಾಣಿ

ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು

ಕುಂಟನೆನಿಸೋದು ದುಗ್ಗಾಣಿ ॥೨॥

 

ಮಾನವಾಗಿರಿಸೋದು ದುಗ್ಗಾಣಿ ।ಬಹು ।

ಮಾನ ಹದಗೆಡಿಸೋದು ದುಗ್ಗಾಣಿ

ಬಹುಮಾನ ನಿಧಿ ಶ್ರೀ ಪುರಂದರ ವಿಠಲನ

ಕಾಣಿಸದಿರುವುದು ದುಗ್ಗಾಣಿ ॥೩॥

------------------------------------------------------------------------------------


ಮಂಕುತಿಮ್ಮನ ಕಗ್ಗ: ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? | KAGGA EXPLAINED

 CLICK HERE FOR EXPLANATION (ವ್ಯಾಖ್ಯಾನ)

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ?

ಓಲೆಗಳನವರವರಿಗೈದಿಸಿರೆ ಸಾಕು

ಸಾಲಗಳೋ ಶೂಲಗಳೋ ನೋವುಗಳೋ ನಗುವುಗಳೋ

ಕಾಲೋಟವವನೂಟ ಮಂಕುತಿಮ್ಮ ॥

 

ಅಂಚೆಯಾಳಿಗೆ ಬರೆದ ಸುದ್ದಿಯ ಚಿಂತೆ ಕೂಡದು .  ಓಲೆಗಳನ್ನು ಮುಟ್ಟಬೇಕಾದವರಿಗೆ ಮುಟ್ಟಿಸಿದರೆ ಸಾಕು .  ಸಾಲವೋ, ಶೂಲವೋ, ನೋವೋ, ನಲಿವೋ ಚಿಂತೆ ಏಕೆ ? ಓಡಾಟವೇ ಅಂಚೆಯಾಳಿಗೆ ಊಟವಾಗಿದೆ.

.............................................................................................................................................

ತೂಗಿ ತೂಗಿ ಮರಗಳೇ | ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್ | ಪರಿಸರ ಗೀತೆ | environmental song in kannada |TOOGI TOOGI MARAGALE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ್

 

ತೂಗಿ ತೂಗಿ ಮರಗಳೇ ಇಳೆಗೆ ಇಳಿದೆ ವರಗಳೇ

ನೆಲದ ಮಧುರ ಗಾನದಲ್ಲಿ ಮೂಡಿ ಬಂದ ಸ್ವರಗಳೇ ॥

ಆ ಆ ಆ ಆ ಆ .. ಆ ಆ ಆ ಆ..  ಆ ಆ ಆ ಆ ಆ .. ಆ ಆ ಆ ಆ

 

ಮಾತಾಡದೆ ದುಡಿಯುವ ಪ್ರೀತಿ ಪಡೆದ ಕರಗಳೇ

ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ

ಸಾಲು ಹಸಿರ ಮಾಲೆಯೇ ಜೀವ ರಸದ ನಾಲೆಯೇ

ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೆ ॥೧॥

 

ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ

ಮೈಯ ತುಂಬ ಚಿಗುರಿನ ರೋಮಾಂಚನವ ತಳೆವಿರಿ

ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ

ಔದಾರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ ॥೨॥

---------------------------------------------------------------------------------------------------------------

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು | ಕುವೆಂಪು | MUCCHU MARE YILLADEYE | KANNADA BHAVAGEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕುವೆಂಪು

 

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಹೇ ಗುರುವೆ ಅಂತರಾತ್ಮ ।

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೆ ಅಂತರಾತ್ಮ ॥

 

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ

ನರಕ ತಾನುಳಿಯುವುದೆ ನರಕವಾಗಿ ॥೧॥

 

ಶಾಂತ ರೀತಿಯಲೊಮ್ಮೆ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೋ ಓ ಅನಂತ ।

ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ

ನಿನ್ನ ನೀತಿಯ ಬೆಳಕಿನಾನಂದಕೈ ॥೨॥

----------------------------------------------------------------------------


ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು |DEVA NINNA MAAYEGANJI | ಕನ್ನಡ ಭಾವಗೀತೆ | ಕೆ ಎಸ್ ನರಸಿಂಹಸ್ವಾಮಿ

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ ಎಸ್ ನರಸಿಂಹಸ್ವಾಮಿ

ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು

ನಿನ್ನ ಇಚ್ಛೆಯಂತೆ ನಡೆವೆ ನಡ್ದಿ ಮಾಡೆನು ॥

 

ಮುಕ್ತಿ ಮುಕ್ತಿ ನನ್ನ ನಾನು ತಿಳಿದುಕೊಳ್ವುದೋ

ಸಾವಿಗಂಜಿ ನಿನ್ನಡಿಯಲಿ ಅಡಗಿಕೊಳ್ವುದೋ ।

ಶಕಿಯಿತ್ತೆ ಮುಕ್ತಿಯನ್ನು ಗಳಿಸಿಕೊಳ್ಳಲು

ನೀರನೆರೆದೆ ಬಳ್ಳಿಯನ್ನು ಬೆಳೆಸಿಕೊಳ್ಳಲು ॥೧॥

 

ಜ್ಞಾನ ರವಿಯನಿತ್ತೆ ಎದೆಯ ನೋಡಿಕೊಳ್ಳಲು

ಗೀತೆಯನ್ನು ಕೊಟ್ಟೆ ಕೊಳಲನೂದಿಕೊಳ್ಳಲು ।

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ

ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ ॥೨॥

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ |ಕೆ ಎಸ್ ನಿಸಾರ್ ಅಹಮದ್| SADA URIYUTIRUVA HAAGE |PATRIOTIC SONG IN KANNADA

  CLICK HERE TO LEARN THIS SONG            CLICK HERE TO LEARN THIS SONG(SCHOOL POEM) ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ   ದುಡಿ...