Showing posts with label ದಾಸರ ಪದಗಳು. Show all posts
Showing posts with label ದಾಸರ ಪದಗಳು. Show all posts

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ | mella mellane bandane song lyrics | purandara dasa |

 

ಮೆಲ್ಲ ಮೆಲ್ಲನೆ ಬಂದನೆ , ಗೋಪಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||||

ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ ||.||

ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || 1||

ಮೊಸರ ಮಾರಲು ಪೋದರೆ, ನಿನ್ನಯ ಕಂದ ಪೆಸರೇನೆಂದೆಲೆ ಕೇಳಿದ
ಹಸನಾದ ಹೆರಳ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ ಕೃಷ್ಣ ||2||

ಪೋಗಿರೆ ರಂಗಯ್ಯನ, ಮೇಲೆ ನೀವು , ದೂರೇನು ಕೊಂಡು ಬಂದಿರೆ
ಸೃಷ್ಟೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ || 3||

 ----------------------------------------------------------------------------------------


ಪಂಢರಾಪುರವೆಂಬ ದೊಡ್ಡ ನಗರ LYRICS IN KANNADA |PANDARAPURAVAMBA DODDA NAGARA |PURANDARA DASA SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ

ವಿಠೋಬನೆಂಬ ದೊಡ್ಡ ಸಾಹುಕಾರ || ||

ವಿಠೋಬನಿರುವದು ನದಿ ತೀರ

 ಅಲ್ಲಿ ಪಂಢರೀಭಜನೆ ವ್ಯಾಪಾರ ||.||

ತಂದೆ ನೀನೆ ತಾಯಿ ನೀನೆ ಪಾಂಡುರಂಗ

ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ

ಭಕ್ತರ ಪೋಷಕ ಪಾಂಡುರಂಗ

ನಮ್ಮ ಮುಕ್ತಿದಾಯಕ ಪಾಂಡುರಂಗ ||||

ವಿಠೋಬನಿಗೆ ಪ್ರಿಯ ತುಳಸಿಹಾರ

ಅಲ್ಲಿ ಭಕ್ತ ಜನರ ವ್ಯಾಪಾರ

ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ

ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||||

ಶ್ರೀಹರಿ ವಿಠ್ಠಲ ಪಾಂಡುರಂಗ

ಜಯ ಹರಿ ವಿಠ್ಠಲ ಪಾಂಡುರಂಗ

ವಿಠ್ಠಲ ವಿಠ್ಠಲ ಪಾಂಡುರಂಗ

ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||||

...................................................................................

ದುಗ್ಗಾಣಿ ಎಂಬುವುದು ದುರ್ಜನರ ಸಂಗ SONG LYRICS | PURANDARA DASA SONGS | DUGGANI EMBUVUDU DURJAN SANGA |

 

ದುಗ್ಗಾಣಿ ಎಂಬುವುದು ದುರ್ಜನರ ಸಂಗ

ದುಗ್ಗಾಣಿ ಬಲು ಕೆಟ್ಟದ್ದಣ್ಣಾ ॥

 

ಆಚಾರ ಹೇಳೋದು ದುಗ್ಗಾಣಿ ।ಬಹು।

ನೀಚರನೊಲಿಸೋದು ದುಗ್ಗಾಣಿ

ನಾಚಿಕೆಯಿಲ್ಲದೆ ಮನೆ ಮನೆ ತಿರುಗಿಸಿ

ಛೀ ಛೀ ಎನಿಸೋದು ದುಗ್ಗಾಣಿ ॥೧॥

 

ನೆಂಟತನ ಹೇಳೋದು ದುಗಾಣಿ । ಬಹು ।

ನೆಂಟರನೊಲಿಸೋದು ದುಗ್ಗಾಣಿ

ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು

ಕುಂಟನೆನಿಸೋದು ದುಗ್ಗಾಣಿ ॥೨॥

 

ಮಾನವಾಗಿರಿಸೋದು ದುಗ್ಗಾಣಿ ।ಬಹು ।

ಮಾನ ಹದಗೆಡಿಸೋದು ದುಗ್ಗಾಣಿ

ಬಹುಮಾನ ನಿಧಿ ಶ್ರೀ ಪುರಂದರ ವಿಠಲನ

ಕಾಣಿಸದಿರುವುದು ದುಗ್ಗಾಣಿ ॥೩॥

------------------------------------------------------------------------------------


ರಾಮ ರಾಮ ರಾಮ ರಾಮ ರಾಮ ಎನ್ನಿರೋ | RAMA RAMA RAMA SEETHA RAMA ENNIRO SONG LYRICS IN KANNADA |LORD RAMA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಾಗ: ತಿಲಂಗ್

ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|

ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೊ

 

ಭರದಿ ಯಮನ ಭಟರು ಬಂದು ಹೊರಡಿರೆಂದು  ಮೆಟ್ಟಿ ಮುರಿಯೆ

ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದೋ ||

 

ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ

ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದೋ ||

 

ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು

ಕಂಗಳಿಗಾತ್ಮ ಸೇರಿದಾಗ  ರಂಗನ ನಾಮ ಒದಗದೋ ||

 

ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ

ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದೋ||

 

ಶ್ರೇಷ್ಠ ಜನ್ಮದಲ್ಲಿ ಹುಟ್ಟಿ ದುಷ್ಟ ಮಾಡಿ ದೇಹ

ಬಿಟ್ಟು ಹೋಗುವಾಗ ಪುರಂದರ ವಿಠ್ಠಲ ನಾಮ ಬಾರದೋ||

.......................................................................................................................................................

ಪುರಂದರ ದಾಸರು – ಕವಿ ಕಾವ್ಯ ಪರಿಚಯ | Purandara Dasa – Kavi Kavya Parichaya

 


ಪೂರ್ವ ನಾಮ : ಶ್ರೀನಿವಾಸ ನಾಯಕ /ನವಕೋಟಿ ನಾರಾಯಣ (ಬಿರುದು)

ಕಾಲ : 1484 - 1564

ಜನ್ಮಸ್ಥಳ : ಆರಗ, ತೀರ್ಥಹಳ್ಳಿ ತಾಲ್ಲೂಕು ,ಶಿವಮೊಗ್ಗ ಜಿಲ್ಲೆ

ತಂದೆ : ವರದಪ್ಪ ನಾಯಕ

ತಾಯಿ: ಲಕ್ಷ್ಮೀದೇವಿ

ಹೆಂಡತಿ : ಸರಸ್ವತೀ

ಪೂರ್ವಕಸುಬು : ಹಣದ ಲೇವಾದೇವಿ

ಅಂಕಿತ :ಪುರಂದರ ವಿಠಲ

ಬಿರುದು: ಕರ್ಣಾಟಕ ಸಂಗೀತ ಪಿತಾಮಹ

ಪ್ರಮುಖ ಕೃತಿಗಳು: ಜಗದೊದ್ಧಾರನ, ಕೃಷ್ಣಾ ನೀ ಬೇಗನೆ ಬಾರೊ, ಭಾಗ್ಯದ ಲಕ್ಷ್ಮಿ ಬಾರಮ್ಮ


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | NEE MAAYEYOLAGO NINNOLU MAAYEYO | KANAKADASA SONG

ಹಾಡಲು ಕಲಿಯಿರಿ(CLICK HERE TO LEARN THIS SONG) 

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ| 


ಬಯಲೊಳಗೆ ಆಲಯವೂ ಆಲಯದಿ ಬಯಲೊ 

ಬಯಲು ಆಲಯವೆರಡು ನಯನದೊಳಗೂ 

ನಯನ ಬುದ್ಧಿಯವೊಳಗೂ ಬುದ್ಧಿ ನಯನದೊಳಗೂ

ನಯನ ಬುದ್ಧಿಗಳೆರಡೂ ನಿನ್ನೊಳಗೊ ಹರಿಯೆ |1| 


ಸವಿಯು ಸಕ್ಕರೆಯೊಳಗೂ ಸಕ್ಕರೆಯು ಸವಿಯೊಳಗೂ 

ಸವಿಯು ಸಕ್ಕರೆ ಎರಡು ಜೀಹ್ವೆಯೊಳಗೂ 

ಜೀಹ್ವೆ ಮನಸಿನವೊಳಗೋ ಮನಸು ಜೀಹ್ವೆಯವೊಳಗೂ

ಜೀಹ್ವೆ ಮನಸುಗಳೆರಡೂ ನಿನ್ನೊಳಗೊ ಹರಿಯೆ |2| 


ಕುಸುಮದಲಿ  ಗಂಧವೋ ಗಂಧದಲಿ ಕುಸುಮವೊ

ಕುಸುಮ ಗಂಧಗಳೆರಡು ಆಗ್ರಾಣದೊಳಗೂ

ಅಸಮಭವ ಕಾಗಿನೆಲೆ ಆದಿಕೇಶವರಾಯ

ಉಸುರಲೆನ್ನೊಳವಲ್ಲ ಎಲ್ಲ ನಿನ್ನೊಳಗೊ ಹರಿಯೆ

...............................................................................................................

ಬಾ ರಂಗ ಎನ್ನ ನಾಲಿಗೆಯಲಿ ಸದಾ BAA RANGA ENNA NALIGEYALI SADA | LORD VISHNU SONG LYRICS |PURANDARA DASA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾ ರಂಗ ಎನ್ನ ನಾಲಿಗೆಯಲಿ ಸದಾ

ಹರಿ ನಾರಾಯಣ ನಾಮದ ಸ್ಮರಣೆ

ಬಾ ರಂಗ ಶ್ರೀ ರಂಗ ||

 

ಕುಳಿತಿರುವಾಗಲು ನಿಂತಿರುವಾಗಲು

ಹಾಡುವಾಗಲು ನಲಿದಾಡುವಾಗಲು

ಕೇಡುಗ ತನದಿಂದ ನೋಡಿದ ಭಾವದೊಳ್

ನಾ ಮಾಡಿದಾ ಪಾಪ ಓಡುವ ಹಾಗೆ ||1||

 

ಕನಸಿನೊಳಾಗಲಿ ಮನಸಿನೊಳಾಗಲಿ

ಕನಸು ಮನಸಿನಲಿ ನಿನ್ನ ನೆನಪಿರಲಿ

ಸಂತಸ ವರದ ಶ್ರೀ ಪುರಂದರ ವಿಠಲನೆ

ಅಂತ್ಯಕಾಲಕು ನಿನ್ನ ಚಿಂತಿಸುವ ಹಾಗೆ ||2||

....................................................................................................


ಜಯ ಜಯ ಮೃತ್ಯುಂಜಯ ಮಹದೇವ SONG LYRICS IN KANNADA | ಪ್ರಸನ್ನ ವೇಂಕಟದಾಸರು | JAYA JAYA MRATYUNJAYA SONG | LORD SHIVA

click here to learn this song 

ರಚನೆ: ಪ್ರಸನ್ನ ವೇಂಕಟದಾಸರು

ಜಯ ಜಯ ಮೃತ್ಯುಂಜಯ ಮಹದೇವ

ಕಾಯೋ ಕರುಣದಿ ಮಹಾನುಭಾವ॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಫಾಲ ನಯನ ಕಪಾಲೀ ಶೂಲಿ

ಮಲ್ಲಿಕಾಜಯ ಮಹಾಲಯ ಮೌಲಿ।

ಫುಲ್ಲನಾಭನ ಬಲ್ಲಿದ ಭಕುತಗೆ

ಒಲ್ಲೆನದೇ ಒಲಿವ ಅತಿ ಸುಲಭಾ॥೧॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಮದನ ಮರ್ದನ ಪಂಚಾಕ್ಷರಿ ಕೈಲಾಸ

ಸದನ ಸದಾಶಿವ ಸಾಂಬ ರಮಣ ।

ದುರ್ದಶಾದಕ ಮರ್ದಕ ಶಿವ ಶಿವ

ಸ್ವರ್ದುಣಿ ಸಹಿತ ಕಪರ್ದಿತ ಪೂರ್ಣ ॥೨॥

ಜಯ ಜಯ ಜಯ ಜಯ ಶಿವ ಶಿವ ಶಿವ ಶಿವ

ಹರ ಹರ ಹರ ಹರ ಶಿವ ಶಿವ ಶಿವ ಶಿವ


ಓಂಕಾರ ಭುಜಗಾಲಂಕಾರ ಗೌರೀ ವರ

ಶಂಕರ ಸಕಲ ಸಂಕಟ ಹರ ಹರ ಹರ

ಕಿಂಕರ ಮನೋಹರ ವಾಂಛಿತಾನ್ವರ

ಸಂಕರುಷಣ ಪ್ರಸನ್ವೆಂಕಟ ಪ್ರೀಯ॥೩॥

 ..............................................................................

ನಾರಾಯಣನೆಂಬ ನಾಮವೇ ಮೂಲಮಂತ್ರ SONG LYRICS | VADIRAJA SONGS | NARAYANANEMBA NAMAVE SONG LYRICS

CLICK HERE TO LEARN THIS SONG 

ನಾರಾಯಣನೆಂಬ ನಾಮವೇ ಮೂಲಮಂತ್ರ

ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ||


ಆರ ಬಿಡುವೆನು ಮತ್ತಾರ ಕೂಡುವೆನು

ಆರಾರಿಗೊಡಲನೀವೆ

ಆರಂಘ್ರಿಗೆರಗುವೆ ಆರಾರ ಮನ್ನಿಸುವೆ

ಆರಿಂದ ಉದರ ಪೂರ್ತಿ ||1||


ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆ

ಹಬ್ಬವಾವನ ಕಂಡರೆ

ಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆ

ಅಭ್ಯಕ್ಷ ಹಯವದನ ||2||

....................................................................

ಜೈ ಜೈ ಹನುಮಾನ್ ಜಯ ಹನುಮಾನ್

ಯಾಕೆ ನಿರ್ದಯನಾದೆ ಎಲೋ ದೇವನೇ SONG LYRICS | PURANDARA DASA SONG LYRICS| YAKE NIRDAYANAADEYO |

CLICK HERE TO LEARN THIS SONG 

ಯಾಕೆ ನಿರ್ದಯನಾದೆ ಎಲೋ ದೇವನೇ

ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ॥


ಕಂಗೆಟ್ಟು ಕಂಬದಲಿ  ಒಡೆದು ಬಳಲಿ ಬಂದು 

ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ।

ಮಂಗಳಾ ಪದವಿತ್ತು ಮನ್ನಿಸಿದೆ ಅವ ನಿನಗೆ

ಬಂಗಾರವೆಷ್ಟು ಕೊಟ್ಟನೋ ಪೇಳೋ ಹರಿಯೆ ॥೧॥


ಸಿರಿದೇವಿಗ್ ಹೇಳದೇ ಸೆರಗು ಸಂವರಿಸಿದೆ

ಗರುಡನ ಮೇಲೆ ಗಮನವ ಮಾಡಿದೆ

ಭರದಿಂದ ನೀ ಬಂದು ಕರಿಯನುದ್ದರಿಸಿದೆ

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ॥೨॥


ಅಜಮಿಳನು ಅಣ್ಣನೆ ವಿಬೀಷಣನು ತಮ್ಮನೇ 

ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ ।

ಭಜನೆಗವರೇ ಹಿತರೇ ನಾ ನಿನಗೆ ಅನ್ಯನೇ

ತ್ರಿಜಗ ಪತಿ ಸಲಹಯ್ಯ ಪುರಂದರ ವಿಠಲ ॥೩॥

......................................................................................


ತಲ್ಲಣಿಸದಿರು ಕಂಡ್ಯ ತಾಳು ಮನವೇ SONG LYRICS | TALLAnISADIRU KANDYA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯಬೇಡ ||

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ  ಸಂಶಯಬೇಡ||1||

ಕಲ್ಲೊಳಗೆ  ಹುಟ್ಟಿರುವ ಕ್ರಿಮಿ ಕೀಟಗಳಿಗೆಲ್ಲ
ಅಲ್ಲಲ್ಲಿಗಾಹಾರ ಇತ್ತವರು ಯಾರೋ
ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯಬೇಡ||2||
......................................................................................


ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ SONG LYRICS | ಕನಕದಾಸರು |BAGILANU TEREDU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕನಕದಾಸರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ||1||

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ ||2||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ||3||
.........................................................................................................


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ SONG LYRICS | SADA ENNA HRADAYADALLI SONG LYRICS |

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ : ವಿಜಯದಾಸರು

ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ
ನಾದ ಮೂರ್ತಿ ನಿನ್ನ ಚರಣ, ಮೋದದಿಂದ ಭಜಿಸುವೆನೋ ||

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ||1||

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ||2||

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ||3||

.............................................................................................................................................................

ಹೊನ್ನು ತಾ ಗುಬ್ಬಿ

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...