Showing posts with label LORD ANJANEYA (ಆಂಜನೇಯ). Show all posts
Showing posts with label LORD ANJANEYA (ಆಂಜನೇಯ). Show all posts

ಜೈ ಜೈ ಹನುಮಾನ್ ಜಯ ಹನುಮಾನ್ SONG LYRICS | JAI JAI HANUMAN SONG LYRICS | ANJANEYA SONGS LYRICS

 CLICK HERE TO LEARN THIS SONG

ಜೈ ಜೈ ಹನುಮಾನ್ ಜಯ ಹನುಮಾನ್

ಜೈ ಜೈ ಹನುಮಾನ್ ಜಯ ಹನುಮಾನ್ ॥

 

ವಾಯುಪುತ್ರ ಜಯ ಹನುಮಾನ್

ವಾನರ ವೀರ ಜಯ ಹನುಮಾನ್

ವೀರಾಧಿ ವೀರ ಜಯ ಹನುಮಾನ್

ಶೂರಾಧಿ ಶೂರ ಜಯ ಹನುಮಾನ್ ॥೧॥

 

ಅಂಜನಿ ಪುತ್ರ ಜಯ ಹನುಮಾನ್

ಅತಿ ಬಲವಂತ ಜಯ ಹನುಮಾನ್

ಶ್ರೀ ರಾಮ ದೂತ ಜಯ ಹನುಮಾನ್

ಶ್ರೀ ರಾಮ ಭಕ್ತ ಜಯ ಹನುಮಾನ್ ॥೨॥

 

ಲಂಕೆಗೆ ಹಾರಿದ ಜಯ ಹನುಮಾನ್

ಸೀತೆಯ ಕಂಡ ಜಯ ಹನುಮಾನ್

ಮುದ್ರೆಯ ತೋರಿದ ಜಯ ಹನುಮಾನ್

ಅಭಯವ ನೀಡಿದ ಜಯ ಹನುಮಾನ್॥೩॥

...............................................................................................................................................

KALISU GURUVE KALISU SONG LYRICS

ಅಂಜನಾ ನಂದನ ಆಂಜನೇಯ ನಮೋ ನಮೋ (ANJANA NANDANA AANJANEYA )SONG LYRICS IN KANNADA AND ENGLISH

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂಜನಾ ನಂದನ ಆಂಜನೇಯ ನಮೋ ನಮೋ

ಪವನ ತನಯ ನಮೋ ನಮೋ ಪತಿತ ಪಾವನ ನಮೋ ನಮೋ||

 

ರಾಮ ದೂತ ನಮೋ ನಮೋ ರಮ್ಯ ಚರಿತ ನಮೋ ನಮೋ

ಕಾಮ ದುಃಖ ಕಲುಷವಿಘ್ನ ನಾಶಕಾಯ ನಮೋ ನಮೋ||1||

 

ಜ್ಞಾನದಾತ ನಮೋ ನಮೋ ಜ್ಞಾನ ಸಿಂಧು ನಮೋ ನಮೋ

ಸಂಗೀತ ಶಾಸ್ತ್ರ ನಿಪುಣ ಶಂಕರಾಕ್ಷ ನಮೋ ನಮೋ||2||

 

ಬುದ್ಧಿ ದಾತ ನಮೋ ನಮೋ ಯಶೋದಾತ ನಮೋ ನಮೋ

ಶಕ್ತಿದಾತ ನಮೋ ನಮೋ ಶೌರ್ಯದಾತ ನಮೋ ನಮೋ||3||

.........................................................................................................

ANJANA NANDANA AANJANEYA NAMO NAMO

PAVANA TANAYA NAMO NAMO 

PATHITHA PAAVANA NAMO NAMO||


RAMA DOOTHA NAMO NAMO

RAMYA CHARITHA NAMO NAMO

KAAMA DUKHA KALUSHA VIGHNA

NAASHAKAAYA NAMO NAMO||1||


JNAANA DAATHA NAMO NAMO

JNAANA SINDHU NAMO NAMO

SANGEETHA SHAASTRA NIPUNA

SHNKARAAKSHA NAMO NAMO||2||


BUDHIDAATHA NAMO NAMO

YASHODAATHA NAMO NAMO

SHAKTHI DAATHA NAMO NAMO 

SHOURYA DAATHA NAMO NAMO||3||

..........................................................................................................................

Also See:


ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ | KOOSINA KANDIRA SONG LYRICS IN KANNADA

 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ


ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ

ಬಾಲನ ಕಂಡೀರಾ ಬಲವಂತನ ಕಂಡೀರಾ||

 

ಅಂಜನೆಯುದರದಿ ಜನಿಸಿತು ಕೂಸು

ರಾಮನ ಪಾದಕ್ಕೆರಗಿತು ಕೂಸು

ಸೀತೆಗೆ ಉಂಗುರ ಕೊಟ್ಟಿತು ಕೂಸು

ಲಂಕಾ ಪುರವನೇ ಸುಟ್ಟಿತು ಕೂಸು||1||


 ಬಂಡಿ ಅನ್ನವನುಂಡಿತು ಕೂಸು

ಬಕನ ಪ್ರಾಣವ ಕೊಂದಿತು ಕೂಸು

ವಿಷದ ಲಡ್ಡುಗೆ ಮೆದ್ದಿತು ಕೂಸು

ಮಡದಿಗೆ ಪುಷ್ಪವ ಕೊಟ್ಟಿತು ಕೂಸು||2||


 ಮಾಯಾವೆಲ್ಲ ಗೆದ್ದಿತು ಕೂಸು

ಮಧ್ವ ಮತವನುದ್ಧರಿಸಿತು ಕೂಸು

ಪುರಂದರ ವಿಠಲನ ದಯದಿಂದ ಕೂಸು

ಸುಮ್ಮನೆ ಉಡುಪಿಲಿ ನಿಂತಿತು ಕೂಸು||3||

.................................................................................

Also see:

ರಾಮ ರಾಮ ರಾಮ್ ರಾಮ್ ರಾಮ್(RAMA RAMA RAM RAM RAM LYRICS IN KANNADA)

ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ) | NAANU SAINYA SERUVE, KIDS' RHYMES IN KANNADA

ಪವಮಾನ ಜಗದಾ ಪ್ರಾಣಾ (ಸಾಹಿತ್ಯ)(PAVAMANA JAGADA PRANA) -LYRICS IN KANNADA

 ಪವಮಾನ ಜಗದಾ ಪ್ರಾಣಾ

ಪವಮಾನ ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನಾ... ದಹನಾ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನ ಪ್ರಿಯ||

 

ಹೇಮ ಕಚ್ಚುಟ ಉಪವೀತ ಧರಿಪ ಮಾರುತ

ಕಾಮಾದಿ ವರ್ಗ ರಹಿತ....ಕಾಮಾದಿ ವರ್ಗ ರಹಿತ|

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

ರಾಮಚಂದ್ರನ ನಿಜದೂತ ....ರಾಮಚಂದ್ರನ ನಿಜದೂತ|

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು||1||

 

ವಜ್ರ ಶರೀರ ಗಂಭೀರ ಮುಕುಟಧರ

ದುರ್ಜನವನ ಕುಠಾರ.....ದುರ್ಜನವನ ಕುಠಾರ|

ನಿರ್ಜರ ಮಣಿ ದಯಪಾರ ವಾರ ಉದಾರ

ಸಜ್ಜನರಘ ಪರಿಹಾರ....ಸಜ್ಜನರಘ ಪರಿಹಾರ|

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

ಮೂರ್ಜಗವರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪದದ ಧೂಳಿ

ಮರ್ಜನದಲಿ ಭವ ವರ್ಜಿತವೆನಿಸೋ||2||

 

ಪ್ರಾಣ ಅಪಾನ ವ್ಯಾನೋದಾನ ಸಮಾನ

ಆನಂದ ಭಾರತಿ ರಮಣ....ಆನಂದ ಭಾರತಿ ರಮಣ|

ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ

ಜ್ಞಾನಧನ ಪಾಲಿಪ ವರೇಣ್ಯ....ಜ್ಞಾನಧನ ಪಾಲಿಪ ವರೇಣ್ಯ|

ನಾನು ನಿರುತದಲಿ ಏನೇನೆಸಗುವೆ

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಸಿರಿ ವಿಜಯ ವಿಠ್ಠಲನ

ಕಾಣಿಸಿ ಕೊಡುವುದು ಭಾನುಪ್ರಕಾಶ||3||

.............................................................................................

ಹಾಡಲು ಕಲಿಯಿರಿ(LEARN HOW TO SING THIS SONG)


Also see:

ಬಾಲಬೋಧೆ(ಮಕ್ಕಳ ಬಾಯಿಪಾಠ):ನವ ಗ್ರಹಗಳು |KIDS BYHEART: 9 GRAHAS


ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA

ಆಂಜನೇಯ ಶ್ಲೋಕಗಳು((ಅರ್ಥ ಸಹಿತ) | LORD ANJANEYA /HANUMAN SHLOKAS LYRICS WITH MEANING IN KANNADA

  ಆಂಜನೇಯ ಶ್ಲೋಕಗಳು

(ಅರ್ಥ ಸಹಿತ)


1 . ಮನೋಜವಂ ಮಾರುತ ತುಲ್ಯ ವೇಗ೦ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|

    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶರಣಂ ಪ್ರಪದ್ಯೇ||

  ಅರ್ಥ: ಮನಸ್ಸಿನ  ಆಲೋಚನೆಯಂತೆ ಚುರುಕಾದ, ಗಾಳಿಗಿಂತ ಹೆಚ್ಚು ವೇಗವುಳ್ಳ,ಇಂದ್ರಿಯಗಳನ್ನು ಜಯಿಸಿದವನು, ಬುದ್ಧಿವಂತರಲ್ಲಿ ಉತ್ತಮನಾದ, ವಾಯುವಿನ ಮಗನಾದ, ವಾನರ ಸೇನೆ  ಮುಖ್ಯಸ್ಥನಾದ,ಶ್ರೀ ರಾಮ ದೂತನಾದ ಆಂಜನೇಯ ಸ್ವಾಮಿಯನ್ನು ನಾನು ವಂದಿಸುತ್ತೇನೆ.


2. ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ

   ಅಜಾಡ್ಯಂ ವಾಕ್ಪಟುತ್ವಂ ಹನುಮತ್ ಸ್ಮರಣಾದ್ ಭವೇತ್||

ಅರ್ಥ: ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿ ಕೊಳ್ಳುವ ಬುದ್ಧಿವಂತಿಕೆ, ಶಕ್ತಿ, ಒಳ್ಳೆಯ ವ್ಯಕ್ತಿತ್ವ, ಧೈರ್ಯ, ನಿರ್ಭಯತೆ, ಆರೋಗ್ಯ, ಚುರುಕುತನ, ಮಾತಿನ ಕೌಶಲ್ಯ, ಇವೆಲ್ಲವೂ ಹನುಮಂತ ಸ್ಮರಣೆಯಿಂದ ಲಭಿಸುತ್ತದೆ.


ಹಾಡಲು ಕಲಿಯಿರಿ(LEARN HOW TO SING THIS SONG)

Also See:

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

GURU STOTRAM: ಗುರು ಸ್ತೋತ್ರಮ್ |SHLOKAS WITH MEANING

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...