Showing posts with label KANNADA FILM SONGS(ಕನ್ನಡ ಚಿತ್ರಗೀತೆಗಳು). Show all posts
Showing posts with label KANNADA FILM SONGS(ಕನ್ನಡ ಚಿತ್ರಗೀತೆಗಳು). Show all posts

ಆಲಾರೆ ಆಲಾರೆ, ಮುಕುಂದ ಮುರಾರೆ SONG LYRICS IN KANNADA | ALARW ALARW MUKUNDA MURARE SONG LYRICS

 

ಆಲಾರೆ ಆಲಾರೆ, ಮುಕುಂದ ಮುರಾರೆ

ಗೋಪಾಲ ಬಾರಯ್ಯ.. ಬಾರೋ ಶ್ರೀ ಕೃಷ್ಣ ನೀ ಬೇಗ ಬಾರೋ||


ನನ್ನ ಕಣ್ಣಲ್ಲಿ ನೋಡು ನಿನ್ನ ಬಿಂಬವೆ

ನನ್ನ ಮನದಲ್ಲಿ ಇಂದು ನಿನ್ನ ರೂಪವೆ,

ಬಲ್ಲೆಯಾ ಕೃಷ್ಣನೇ

ನೆನ್ನೆ ಕನಸಲ್ಲೂ ನಾನು ನಿನ್ನೇ ಕಂಡೆನೇ

ನಿನ್ನ ನೋಡೊ ಆಸೆ ನಾ ತಾಳಲಾರೆನೆ

ಕೇಶವಾ ಮಾಧವಾರಾ ಧಾ ಲೋ ||1||


ಪ್ರೇಮವೆ ದೈವ ಎಂದೂ ಪ್ರೇಮವೆ ಜೀವಾ

ಪ್ರೇಮದ ಕೂಗು ಇನ್ನು ಕೇಳದೆ ದೇವ,

ತಾಮಸಾ ಏತಕೇ

ನನ್ನ ಹೃದಯದ ಪ್ರೇಮ ಗಾನ ಕೇಳದೆ

ಜೀವ ನಿಲ್ಲದು ಕೃಷ್ಣ ನಿನ್ನ ನೋಡದೆ

ಕೇಶವಾಮಾಧವಾ, ರಾ ಧಾ ಲೋ ||2||

------------------------------------------------------------------------------------------------------------------------

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

CLICK HERE TO LEARN THIS SONG

ಹೂವು ಚೆಲುವೆಲ್ಲ ನಂದೆಂದಿತು

ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು

ಹೂವು ಚೆಲುವೆಲ್ಲ ನಂದೆಂದಿತು. ||

 

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು

ಕೊಳಲಿನ ದನಿ, ವೀಣೆಯ ಖನಿ ಕೊರಳಲಿ ಇದೆಯೆಂತು

ಕೊಳಲಿನ ದನಿ, ವೀಣೆಯ ಖನಿ ಕೊರಳಲಿ ಇದೆಯೆಂತು

ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು ||1||

 

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು

ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು

ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು

ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆoದಿತು ||2||

 

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು

ನೀಡುವೆ ಮಳೆ, ತೊಳೆಯುವೆ ಕೊಳೆ ಸಮನಾರೆನಗೆಂತು

ನೀಡುವೆ ಮಳೆ, ತೊಳೆಯುವೆ ಕೊಳೆ ಸಮನಾರೆನಗೆಂತು

ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆoದಿತು ||3||

-----------------------------------------------------------------------------------------------

ನೀ ನಮ್ಮ ಗೆಲುವಾಗಿ ಬಾ SONG LYRICS | NEE NAMMA GELUVAGI BAA SONG LYRICS | PRAYER SONGS

 

ನೀ ನಮ್ಮ ಗೆಲುವಾಗಿ ಬಾ,

ನೀ ನಮ್ಮ ಗೆಲುವಾಗಿ ಬಾ ಗಜಮುಖನೇ

ನೀ ನಮ್ಮ ಗೆಲುವಾಗಿ ಬಾ ||

ಗುರುಕುಲಕೆ ವರವಾಗಿ ಗುರಿ ತೋರೋ ಗುರುವಾಗಿ

ಪೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು ‌‌ ||ನೀ ನಮ್ಮ||

 

 ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ

ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||

 

 ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ

 ಹಿರಿಯಾದ ಸಿರಿ ನೀನು ಬಾಳ ಸವಿ ಜೇನು

ದಯೆಯಿರಲಿ ನಮಲ್ಲಿ ಗತಿ ನೀನೆ ಆದಿಯಲಿ ||ನೀ ನಮ್ಮ||


ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು SONG LYRICS | NINNOLUMEYINDALE BAALU SONG LYRICS | ರಚನೆ: ಕೆ ಎಸ್ ನರಸಿಂಹಸ್ವಾಮಿ

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ: ಕೆ ಎಸ್ ನರಸಿಂಹಸ್ವಾಮಿ 

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ? ||

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ ಕೈಗೊಳುವ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ ||1||

ನಿನ್ನಕಿರುನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ ||2||
....................................

ಹದಿನಾಲ್ಕು ವರ್ಷ ವನವಾಸದಿಂದ SONG LYRICS IN KANNADA | ಶರಪಂಜರ MOVIE SONG | HADINALKU VARUSH VANAVASA SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ.ಸುಶೀಲ

ಹದಿನಾಲ್ಕು ವರ್ಷ ವನವಾಸದಿಂದ
 ಮರಳಿ ಬಂದಳು ಸೀತೇ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
 ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.||

ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ
 ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...
ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
 ನ್ಯಾಯವಾದಿ ರಾಮಾ...||1||

ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..
ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
 ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ.....||2||
..........................................


ಯಾರೇ ನೀನು ಚೆಲುವೆ SONG LYRICS | ನಾನು ನನ್ನ ಹೆಂಡ್ತಿ MOVIE SONG LYRICS | RAVICHANDRAN SONGS LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ
ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||

ಮು೦ಜಾನೆ ಹೊತ್ತೀನಲಿ ನಮ್ಮೂರಿನ ದಿಬ್ಬದಲಿ

ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ದಾಳಿ೦ಬೆ ಹಣ್ಣ೦ತೆ ನೀನು ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೆ ನಾಚಿಕೊ೦ಡಾನು
ಯಾರೇ ಯಾರೇ ಯಾರೇ

ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||1||

ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ನೀನೆ ನಿ೦ತಿದ್ದೆ ಅಲ್ಲಿ ಹಾಲಿನ೦ತ ನಗುವನ್ನು ಚೆಲ್ಲಿ
ಚ೦ದ್ರನಿಲ್ಲ ಬಾನಿನಲ್ಲಿ ನೀನಿದ್ದೆ ನನ್ನ ಕಾವ್ಯದಲ್ಲಿ
ಯಾರೇ ಯಾರೇ ಯಾರೇ

ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||2||
...........................................

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ SONG LYRICS | ರಚನೆ: ಸು ರಂ ಎಕ್ಕುಂಡಿ | KANNADA NAADINA KARAVALI SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ:  ಸು ರಂ ಎಕ್ಕುಂಡಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ


 ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ ||1||


 ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಧರ್ಮವ ಸಾರುವ ಧರ್ಮಸ್ಠಳ

ಉಡುಪಿಯೇ ವೈಕು೦ಠ …..ಗೋಕರ್ಣ ಕೈಲಾಸ ||2||

 

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಮ೦ಗೇಶರಾಯರು ಗೋವಿ೦ದ ಪೈಗಳು

ಜನಿಸಿದ ಕವಿಗಳ ಸಿರಿನಾಡು

ದಾಸರ ವಾಣಿಯ ಮ೦ಗಳ ಬೀಡು ||3||

  

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಶರಾವತಿ ……..ನೇತ್ರಾವತಿ

ಪಾವನ ನದಿಗಳ ಸಾಗರ ಸ೦ಗಮ  ||4||

.......................................................................................................................................

ಕರುನಾಡೇ ಕೈ ಚಾಚಿದೆ ನೋಡೆ SONG LYRICS |RAVICHANDRAN SONGS | KARUNAADE KAI CHAACHIDE SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕರುನಾಡೇ……ಕೈ ಚಾಚಿದೆ ನೋಡೆ
ಹಸಿರುಗಳೇ……ಆ ತೋರಣಗಳೇ

ಬೀಸೋ ಗಾಳಿ ಚಾಮರ ಬೀಸಿದೆ  ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ ಎದೆ ಹಾಸಿದೆ ನೋಡೆ
ಹೂವುಗಳೇ ಶುಭ ಕೋರಿವೆ ನೋಡೆ ||

 

ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ

ಸಂಪಿಗೆ  ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……. ||1||

 

ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ

ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……||2||

........................................................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...