Showing posts with label ಆರ್. ಕೆ. ಪದ್ಮನಾಭ(R.K PADMANABHA). Show all posts
Showing posts with label ಆರ್. ಕೆ. ಪದ್ಮನಾಭ(R.K PADMANABHA). Show all posts

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ| POET ಆರ್. ಕೆ. ಪದ್ಮನಾಭ R.K PADMANABHA |SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಹೇಗೆ ಅರ್ಚಿಸಲಿ ಹೇಗೆ ಮೆಚ್ಚಿಸಲಿ

ಹೇಗೆ ಪ್ರಾರ್ಥಿಸಲಿ ಗುರುವೇ ಸದ್ಗುರುವೇ॥

 

ಜ್ಞಾನ ಸಂಪತ್ತಿಲ್ಲ ಗಾನದಲಿ ಗುಣವಿಲ್ಲ

ಮಾತಿನಲಿ ಮಂದ್ರವಿಲ್ಲ ತತ್ವದಲಿ ತಾರವಿಲ್ಲ॥೧॥

 

ಸ್ವರ ಷಡ್ಜಕೆ ಎಂದೂ ನೆಮ್ಮದಿ ಕೊಡಲಿಲ್ಲ

ಸ್ವರ ಪಂಚಮದಂತೆ ಸ್ಠಿರವಿಲ್ಲ ಚಿಂತನೆಯು

ರಾಗಾಲಾಪದಂತೆ ದಿವ್ಯ ರೂಪವಿಲ್ಲ

ರೆಕ್ಕೆಯಿಲ್ಲದ ಪಕ್ಷಿ ಪದಮನಾಭ ದಾಸ ನಾ॥೨॥

..................................................................................


ನಿದ್ರೆ ಬಾರದೋ ಶ್ರೀ ರಾಘವೇಂದ್ರ (ಭಕ್ತಿಗೀತೆ) ಸಾಹಿತ್ಯ | NIDRE BAARADO SHRI RAGHAVENDRA(DEVOTIONAL SONG)

 ಹಾಡಲು ಕಲಿಯಿರಿ(CLICK HERE TO LEARN THIS SONG)


ನಿದ್ರೆ ಬಾರದೋ ಶ್ರೀ ರಾಘವೇಂದ್ರ ದ್ವೇಷಾಸೂಯೆಗಳ ಕಾಡಿನಲ್ಲಿ|

 

ಚಿಗುರಿಲ್ಲದ ಮರ ಜಲವಿಲ್ಲದ ಕೆರೆ

ಕೂಗದ ಕೋಗಿಲೆ ಬೆಳೆಯದ ಭೂಮಿಯ ಕಂಡು||1||

 

ಮಾತು ಬೇಡ ಮೌನ ಬೇಕು । ಕತ್ತಲು ಬೇಡ ಬೆಳಕು ಬೇಕು

ದುರಾಸೆ ಬೇಡ ಆಸೆ ಬೇಕು। ವ್ಯಸನ ಬೇಡ ವಸನ ಬೇಕು

ದ್ವೇಷ ಬೇಡ ಧರ್ಮ ಬೇಕು||2||

 

ಪಾಪ ಬೇಡ ಪುಣ್ಯ ಬೇಕು।ಗದ್ದಲ ಬೇಡ ಗಾನ ಬೇಕು

ನಾನು ಬೇಡ ನೀನು ಬೇಕು।ರಾಜ ಬೇಡ ಗುರುರಾಜ ಬೇಕು

ಎಂದೆಂದೂ ನೀ ಬೇಕು ಪದ್ಮನಾಭ ದಾಸಗೆ||3||

Other songs of R.K Padmanaabha:

Manasa Vandipe ಮನಸಾ ವಂದಿಪೆ ಗಣನಾಯಕ| LORD GANESHA SONG LYRICS

bandhisenna nee : ಬಂಧಿಸೆನ್ನ ನೀ ನಾದ ಕೋಟೆಯಲ್ಲಿ SONG ON LORD SARASWATI



Manasa Vandipe ಮನಸಾ ವಂದಿಪೆ ಗಣನಾಯಕ| LORD GANESHA SONG LYRICS



    ಮನಸಾ ವಂದಿಪೆ ಗಣನಾಯಕ




ರಚನೆ : ಆರ್ ಕೆ ಪದ್ಮನಾಭ
ರಾಗ : ಮಾಯಾ ಮಾಳವ ಗೌಳ
ತಾಳ : ಆದಿ ತಾಳ

ಮನಸಾ ವಂದಿಪೆ ಗಣನಾಯಕ
ಶಿರಬಾಗಿ ನಮಿಸುವೆ ಸಿದ್ದಿ ವಿನಾಯಕ ||

ಸಂಗೀತ ಸೌಧದ ಬಾಗಿಲು ತೆರೆದು
ಪ್ರಣವ ನಾದದ ಉಪದೇಶ ಕೊಡು ತಂದೆ ||||

ರಾಗ ಲಯ ಜ್ಞಾನ ಷೋಡಶ ಶ್ರುತಿ ಜ್ಞಾನ
ವರ್ಣಾಲಂಕಾರ ಜ್ಞಾನ ಕೃತಿ ಕೀರ್ತನ ಜ್ಞಾನ
ಭಕ್ತಿ ಭಾವ ಜ್ಞಾನ ಬಹುಭಾಷಾ ಜ್ಞಾನ
ಕೊಟ್ಟು ಸಲಹಬೇಕು ಪದ್ಮನಾಭ ದಾಸಗೆ || ||

...,....,.,.......,..................................... 

Manasa vandipe gananayaka
Manasa vandipe gananayaka |
Shirabaagi namisuve sidhi vinayaka ||

Sangeetha soudhada baagilu theredu
Pranava naadada upadesha kodu thande||

Raaga laya jnaana shodasha shruti jnaana
Varnaalankaara jnaana kriti keerthana jnaana |
Bhakthi bhaava jnaana bahubhaashaa jnaana
Kottu salahabeko padmanaabha daasage ||

................ .............................................. .......... 


ಹಾಡಲು ಕಲಿಯಿರಿ(LEARN HOW TO SING THIS SONG)



bandhisenna nee : ಬಂಧಿಸೆನ್ನ ನೀ ನಾದ ಕೋಟೆಯಲ್ಲಿ SONG ON LORD SARASWATI



ಬಂಧಿಸೆನ್ನ ನೀ ನಾದ ಕೋಟೆಯಲ್ಲಿ 



ರಚನೆ : ಆರ್ ಕೆ ಪದ್ಮನಾಭ
ರಾಗ : ಅಭೇರಿ
ತಾಳ : ಆದಿ ತಾಳ
.....................

ಬಂಧಿಸೆನ್ನ  ನೀ ನಾದ ಕೋಟೆಯಲ್ಲಿ
ನಾದ ದೇವತೇ ಶ್ರೀ ಮಾತೇ  ।।

ಸಂಗೀತದಾಅಂತರ್ಯ ಎಟುಕದಾಗಿದೆ ಎನಗೆ
ಶಾಸ್ತ್ರ ಜಟಿಲತೆಯ  ಬಿಡಿಸಲಾಗದು ತಾಯೆ  ।।

ಸಕಲ ಸಾಧನೆಯನು ಮಾಡುತಿಹೆ ಮಾತೆ
ಲಯ ಖಚಿತವಾದರೂ ನಾದ ಸೌಖ್ಯ ಸಿಗಲಿಲ್ಲ  ।।
ಮಾತು ನೀನೆ ಧಾತುವು ನೀನೆ  ।।
ಸ್ವರವೂ ನೀನೆ ಲಯವೂ ನೀನೆ  ।।
ಕೃಪಾಹೀನನಾದ ಪದ್ಮನಾಭ ದಾಸಗೆ
ಗೀತೋಪದೇಶ ನೀಡಿ ....
ಸಂಗೀತೋಪದೇಶ ನೀಡಿ
ಪೊರೆಯೆ ಬೇಡವೆ ತಾಯೆ ।।ಪ।।

..................................................


Also See:


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...