Showing posts with label STOTRAS (ಸ್ತೋತ್ರಗಳು). Show all posts
Showing posts with label STOTRAS (ಸ್ತೋತ್ರಗಳು). Show all posts

ಶಿವ ಅಪರಾಧಕ್ಷಮಾಪಣಾ ಸ್ತೋತ್ರ ಕನ್ನಡ ಅನುವಾದ | ರಚನೆ:ಮಧು ಕೋಡನಾಡು | SHIVA APARADHA KSHAMAPANA STOTRA KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ:ಮಧು ಕೋಡನಾಡು

ಪೂರ್ವ ಕರ್ಮದ ಫಲವ ಹೊತ್ತು, ಅಮ್ಮನುದರದಿ ಜನಿಸಿದೆ

ಅಲ್ಲಿ ಕಲ್ಮಶದಲ್ಲಿ ಹೊರಳುತ, ಜಠರಾಗ್ನಿಲಿ ದಹಿಸಿದೆ

ಕಷ್ಟದಲಿ ನಾ ಬಿದ್ದು ಎದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧ ||


ಬಾಲ್ಯದಲಿ ನಾ ದುಃಖದಿಂದಲಿ, ಸ್ತನ್ಯಪಾನಕೆ ತಪಿಸಿದೆ 

ದೇಹದಲಿ ನಾ ತ್ರಾಣವಿಲ್ಲದೇ, ಜಂತುಬಾಧೆಯ ಸಹಿಸಿದೆ

ರೋಗ ರುಜಿನದಿ ನರಳುತಿದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೨ ||


ಪ್ರೌಢನಾದೊಡೆ ಪಂಚ ಮೋಹದಿ, ವಿಷಯ ಲಂಪಟ ಎನಿಸಿದೆ

ಹೆಣ್ಣು, ಹೊನ್ನು, ಪುತ್ರ ಮೋಹವು, ಎನ್ನ ಬುದ್ಧಿಯ ಭ್ರಮಿಸಿದೆ

ಸ್ವಾರ್ಥ ಲೋಭ ಗರ್ವದಿಂದಲಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೩ ||


ಮುಪ್ಪು ಅಡರಲು ಮನದ ಒಳಗೆ, ಮತ್ತೆ ಮತಿ ಗತಿ ತಪ್ಪಿದೆ

ರೋಗ ರುಜಿನ ವಿಯೋಗದಿಂದ, ದೇಹ ತಪಿಸುತ ಬತ್ತಿದೆ 

ಸುಳ್ಳು ಮೋಹದ ಭ್ರಮೆಗೆ ಸಿಲುಕಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೪ ||


ಜೀವನದ ಪ್ರತಿ ಹೆಜ್ಜೆಯಲ್ಲೂ, ಅಡ್ಡಿ ಎದುರಿಸಿ ನಿಂತೆನು

ದ್ವಿಜನೇ ಆದರೂ ಬ್ರಹ್ಮ ಕರ್ಮವ, ಮಾಡಲಾರದೆ ಹೋದೆನು

ಶ್ರವಣ ಮನನವ ಮಾಡದೇ ನಾ, ಮಾಡಲೆಂತೋಪಾಸನೇ ? 

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೫ ||


ಉಷೆಯಲೆದ್ದು ನಿನ್ನ ಪೂಜೆಗೆ, ಗಂಗೆ ತಾರದೇ ಹೋದೆನು 

ನಿನ್ನ ಅರ್ಚನೆಗೊಂದು ಬಿಲ್ವದ, ದಳವ ತಂದುದ ಕಾಣೆನು

ಪುಷ್ಪ ಮಾಲಿಕೆ, ಗಂಧಲೇಪನ, ಕೆರೆಯ ಕಮಲವ ತಾರದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೬ ||


ಹಾಲು, ಮೊಸರು, ಜೇನು, ತುಪ್ಪ, ಶರ್ಕರಂಗಳ ತಾರದೇ

ಚಂದನಾದಿ ಸುಗಂಧ ದ್ರವ್ಯದಿ, ನಿನಗೆ ಲೇಪನ ಗೈಯದೇ

ಧೂಪ ದೀಪದ ಜೊತೆಗೆ ಮರೆತೆ, ಹಣ್ಣು ಭಕ್ಷ ನಿವೇದನೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೭ ||


ಮನದಿ ಶಿವನನು ನೆನೆದು ದ್ವಿಜರಿಗೆ, ದಾನ ಧರ್ಮವಗೈಯದೇ

ಬೀಜಮಂತ್ರದ ಸಹಿತ ಅಗ್ನಿಗೆ, ಲಕ್ಷ ಹೋಮವ ಮಾಡದೇ

ಗಂಗೆ ತಟದಲಿ ನಿನ್ನ ಜಪಿಸಿ, ವ್ರತವಗೈಯದೇ ಹೋದೆನು

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೮ ||


ನಾಸಿಕಾಗ್ರದಿ ದೃಷ್ಟಿಯುಳ್ಳವ, ತ್ರಿಗುಣ ರಹಿತನೇ ಏಕನೇ,

ಸರ್ವಶುದ್ಧನೇ ನಿನ್ನ ದರುಶನ, ನಾನು ಮಾಡದೇ ಹೋದೆನು

ಏಕಚಿತ್ತದಿ ನಿನ್ನ ಸ್ಮರಣೆಯ, ಮಾಡದಾದೆನು ಶಂಕರ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ನಿರಂತರ || ೯ ||


ಪದ್ಮಾಸನದಲಿ ಕುಳಿತು ಪ್ರಣವ, ಮಂತ್ರೋಚ್ಚಾರಣೆ ಗೈಯದೇ

ಅಂತರಂಗದ ಒಳಗೆ ನಿನ್ನನು, ಲಿಂಗರೂಪದಿ ನಿಲಿಸದೇ

ಜ್ಯೋತಿರೂಪನೆ ಬ್ರಹ್ಮರೂಪನೇ, ನಿನ್ನ ಧ್ಯಾನವ ಗೈಯದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೦ ||


ಹೃತ್ಪ್ರಕಾಶನೇ ಹೃದಯವಾಸನೇ, ಸಕಲ ವೇದದಿ ವೇದ್ಯನೇ

ಮುನಿಗಳರಿವಿಗೆ ಮಾತ್ರ ತಿಳಿಯುವ, ಸತ್ಯ ಶಾಂತ ಸ್ವರೂಪನೇ

ನಿದಿರೆ ಎಚ್ಚರ ಸ್ವಪ್ನದಲ್ಲೂ  ತ್ರಿಗುಣ ರಹಿತನ ಸ್ಮರಿಸದಾ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೧ ||


ಮನ್ಮಥನ ಸಂಹರಿಸಿದವನೇ, ನಿಟಿಲ ನೇತ್ರದ ರುದ್ರನೇ

ಶಿರದಿ ಗಂಗೆ ಚಂದ್ರ ಧರಿಸಿದ, ಸರ್ಪಭೂಷಿತ ದೇವನೇ

ಗಜದ ಚರ್ಮವ ಧರಿಸಿ ನಿಂದಿಹ, ಮೂರು ಲೋಕದ ಒಡೆಯನೆ

ಮೋಕ್ಷ ಮಾರ್ಗಕೆ ನನ್ನ ಮನವನು, ನಿನ್ನಲಿರಿಸು ಶಂಭುವೇ || ೧೨ ||


ವಸ್ತು ವಾಹನ ರಾಜ್ಯ ಮೋಹ, ಧನ ಕನಕಗಳ ಮೋಹದಿ

ಬಂಧು ಬಾಂಧವ ಪಶುಗಳಿಂದ, ಎನಿತು ಲಾಭವು ಆತ್ಮಕೆ?

ನೀರ ಮೇಲಿನ ಗುಳ್ಳೆಯಂತಹ, ಕ್ಷಣಿಕ ಆಸೆಯ ಬಿಡಿಸುತ

ಗುರುವ ನೆನೆದು ಪಾರ್ವತಿ ಪತಿ, ನಿನ್ನ ಭಜನೆಯ ಮಾಡಿಸು || ೧೩ ||


ದಿನವು ಕಳೆದೊಡೆ ಆಯು ಯವ್ವನ, ಕೊಂಚ ಕೊಂಚವೇ ಕಳೆವುದು

ಕಳೆದು ಕಣ್ಮರೆಯಾದ ಜೀವನ, ಮತ್ತೆ ಹಿಂದಕೆ ಬಾರದು

ಧನವು ಅಲೆಗಳ ಏರು ಇಳಿತದ, ಹಾಗೆ ಎಂದಿಗೂ ನಶ್ವರ

ಮಿಂಚಿನಂತೆ ಕ್ಷಣಿಕ ಜೀವನ, ರಕ್ಷಿಸೆನ್ನನು ಈಶ್ವರ || ೧೪ ||


ವಿಶ್ವಕಾರಣ ಸ್ವಪ್ರಕಾಶನೇ, ಪಾರ್ವತೀ ಪತಿ ವಂದನೆ

ಸರ್ಪಭೂಷಣ ಜಗದ ಸಕಲ, ಜೀವದೊಡಯನೇ ವಂದನೆ 

ಸೂರ್ಯ ಚಂದ್ರ ಅಗ್ನಿ ನೇತ್ರನೇ, ವಿಷ್ಣು ಪ್ರಿಯನೇ ವಂದನೆ

ಭಕ್ತ ಪೋಷಣೆಗೈವ ಶಿವನೇ, ಶಂಕರನೇ ನಿನಗೊಂದನೆ  || ೧೫ ||


ಶ್ವೇತ ದಂತನೆ, ಮಂದಸ್ಮಿತನೇ, ಶ್ವೇತ ಭಸ್ಮದ ಲೇಪನೇ

ಶ್ವೇತವರ್ಣದ ಕರ ಕಪಾಲ, ಶೂಲ ಕುಂಡಲ ಧಾರನೇ

ಶಿರದ ಚಂದಿರ, ಕುಳಿತ ನಂದಿ, ಜಟೆಯ ಗಂಗಾ ಜಲದಲಿ

ಶ್ವೇತವರ್ಣದಿ ಶೋಭೆಗೈವನೇ, ಕ್ಷಮೆಯ ಮಳೆಯನೇ ಸುರಿಸು ನೀ  || ೧೬ ||


ಪೌರೋಹಿತ್ಯ, ರಜನಿ ಚರಿತ, ಮಠದ ಅಧಿಪತಿ ಕಾರ್ಯವ,

ಗ್ರಾಮ ಪ್ರತಿನಿಧಿ, ಸುಳ್ಳು ಸಾಕ್ಷ, ದುರ್ಜನಂಗಳ ಸಂಘವ,

ಬ್ರಹ್ಮ ದ್ವೇಷ, ಭಿಕ್ಷಾ ವೃತ್ತಿ, ಪಶುಗಳಲ್ಲಿ ನಿರ್ದಯ,

ಇಂತ ದುಸ್ಥಿತಿ ಜನ್ಮ ಜನ್ಮಕೂ ನೀಡಬೇಡವೋ ಪಶುಪತೇ  || ೧೭ ||


ಕರದಿ ಚರಣದಿ, ಮಾತು, ಶ್ರವಣದಿ, ಮಾಡಿದೆನ್ನಪರಾಧವ

ತಿಳಿದೋ ತಿಳಿಯದೋ, ಗೈದ, ಗೈಯದ, ಎನ್ನ ಸಾವಿರ ಪಾಪವ

ಕರುಣಾ ಸಾಗರನಾದ ದೇವನೇ, ಕ್ಷಮಿಸು ಎಲ್ಲವನಿಂದು ನೀ

ಜಯತು ಜಯತು, ಜಯತು ದೇವನೆ ಜಯತು ಶಂಭೋ ಶಂಕರ || ೧೮ ||

ಓಂ ನಮ: ಶಿವಾಯ್ ಓಂ ನಮ: ಶಿವಾಯ್ OM NAMA SHIVAY SONG LYRICS IN KANNADA |LORD SHIVA STOTRA LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 


ಓಂ ನಮ: ಶಿವಾಯ್ ಓಂ ನಮ: ಶಿವಾಯ್ 

ಹರ ಹರ ಭೋಲೇ ನಮ: ಶಿವಾಯ್

ಓಂ ನಮ: ಶಿವಾಯ್ ಓಂ ನಮ: ಶಿವಾಯ್

 ಹರ ಹರ ಭೋಲೇ ನಮ: ಶಿವಾಯ್

 

ಮಹಾ ಕಾಲೇಶ್ವರಾಯ್ ಮಹಾ ಕಾಲೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್

ಮಹಾ ಕಾಲೇಶ್ವರಾಯ್ ಮಹಾ ಕಾಲೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್ ||1||

 

ಓಂ ಸೋಮೇಶ್ವರಾಯ್ ಶಿವ ಸೋಮೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್

ಓಂ ಸೋಮೇಶ್ವರಾಯ್ ಶಿವ ಸೋಮೇಶ್ವರಾಯ್

 ಹರ ಹರ ಭೋಲೇ ನಮ: ಶಿವಾಯ್ ||2||

 

ಜಟಾಧರಾಯ್ ಶಿವ ಜಟಾಧರಾಯ್

 ಹರ ಹರ ಭೋಲೇ ನಮ: ಶಿವಾಯ್

ಜಟಾಧರಾಯ್ ಶಿವ ಜಟಾಧರಾಯ್

 ಹರ ಹರ ಭೋಲೇ ನಮ: ಶಿವಾಯ್ ||3||

............................................................................................... 

 


ಮಂತ್ರವರಿಯೆ ನಾ ಯಂತ್ರವರಿಯೆ - ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ) LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ)

 

ಮಂತ್ರವರಿಯೆ ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।

ಆಹ್ವಾನವರಿಯೆ ನಾ ಧ್ಯಾನವರಿಯೆ ನಾನರಿಯೆ ಶ್ರುತಿಯ ಕಥೆಯಾ।।

ಮುದ್ರೆಗಿದ್ರೆಗಳ ಅರಿಯೆ ನಾನು ಕೂಸಾಗಿ ತೆರೆವೆ ಬಾಯಿ|

ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ||1||

 

ಗೊತ್ತಿಲ್ಲ ವಿಧಿಯು ಮೈಗಳ್ಳ ನಾನು ಕೈಯ್ಯಲ್ಲಿ ಕಾಸು ఇల్ల

ನಡೆಯಲಾರೆ ಒಳಗಾಗಿ ಚರಣ ಕೈಬಿಟ್ಟು ಜಾರಿತಲ್ಲ

ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ

ಹುಟ್ಟಬಹುದಲಾ ಕೆಟ್ಟಮಗುವು  ಇರಲಾಸ ಕೆಟ್ಟ ತಾಯಿ||2||

 

ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |

ವಿರಲತರಲ ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ|

 ಬಿಡಬೇಡ ಕೈಯ ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।

ಕೆಟ್ಟ ಮಗುವು ಹೋ! ಹುಟ್ಟಬಹುದು ಇರಬಹುದೆ ಕೆಟ್ಟ ತಾಯಿ?||3||

 

ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ ।

ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ

ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ

ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ ಇವಳೆ ತಾಯೆ 4||

 

ಎಷ್ಟಂತ ಪೂಜೆ ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ

ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ|

 ಓ ತಾಯಿ ನಿನ್ನ ಕೃಪೆ ಸಾಕು ಉಳಿದವರು ಹಿಡಿಯಲೆನ್ನ ಬಿಡಲಿ

ಆಧಾರವಿರದೆ ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ||5||

 

ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ|

ಬಾಯಿಬಡಕ ನಾಯಡಗತಿಂಬ ಜನವಾಣಿ ಅಮೃತಧಾಮ|

 ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ

 ಜನನಿ ನಿನ್ನ ಜಪ ಮಹಿಮೆಯರಿಯದವ ಹೌದು ತೀರ ಬಡವll6||

 

ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ

ಜಡೆಯ ಕಟ್ಟಿ ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ

ತಲೆಯ ಬುರುಡೆ ಕೈಯಲ್ಲಿ  ಭೂತಗಣ ಸುತ್ತಿಕೊಂಡೆ ಇರುವ

ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||7||

 

ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ

ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ|

 ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ

 ಓ ಭವಾನಿ ರುದ್ರಾಣಿ ಶಿವೆಶಿವೇ ಎಂದು ಜಪಿಸುತಿರಲಿ||8||

 

ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ|

ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ|

ಓ ಶ್ಯಾಮೆ  ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ

 ಅದು ನಿನಗೆ ಸಹಜ ಇದು ನನಗೆ ಸಹಜ ಕರುಣೆಯನೆ ಬೇಡುತಿರುವೆ||9||

 

ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ

ಹೇ ದುರ್ಗೆ ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ

ಇದು ಢೋಂಗು ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।

ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?10||

 

ಜಗದಂಬೆ ಬೇರೆ ವೈಚಿತ್ರ್ಯ ಬೇಕೆ ಕರುಣೆಯಲಿ ಮಾಡು ಎಲ್ಲ

ಅಪರಾಧವೆಷ್ಟೆ ಮಾಡಿದರು ಮಗುವು  ತಾಯೇನೂ ಬಿಡುವದಿಲ್ಲ

ಪಾಪಘ್ನಿ ನಿನ್ನ ಸಮರಿಲ್ಲ ಪಾಪದಲಿ ನನಗೆ ಇಲ್ಲ ಜೋಡು |

ಮಹದೇವಿ ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು ||11||

 ...................................................................................................................


ಗರುಡ ಗಮನ ತವ GARUDA GAMANA TAVA |POPULAR SONG ON LORD VISHNU lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಗರುಡ ಗಮನ ತವ ಚರಣಕಮಲಮಿಹ

ಮನಸಿ ಲಸತು ಮಮ ನಿತ್ಯಂ |

ಮನಸಿ ಲಸತು ಮಮ ನಿತ್ಯಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ಜಲಜನಯನ ವಿಧಿನಮುಚಿಹರಣಮುಖ

ವಿಬುಧ ವಿನುತ ಪದಪದ್ಮ |

ವಿಬುಧ ವಿನುತ ಪದಪದ್ಮ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಭುಜಗಶಯನ ಭವ ಮದನಜನಕ ಮಮ

ಜನನಮರಣಭಯಹಾರಿ |

ಜನನಮರಣಭಯಹಾರಿ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಶಂಖಚಕ್ರಧರ ದುಷ್ಟದೈತ್ಯಹರ

ಸರ್ವಲೋಕಶರಣ |

ಸರ್ವಲೋಕಶರಣ |


ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ಅಗಣಿತಗುಣಗಣ ಅಶರಣಶರಣದ

ವಿದಳಿತಸುರರಿಪುಜಾಲ |

ವಿದಳಿತಸುರರಿಪುಜಾಲ |
ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

 

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಭಕ್ತವರ್ಯಮಿಹ ಭೂರಿಕರುಣಯಾ

ಪಾಹಿ ಭಾರತೀತೀರ್ಥಂ |

ಪಾಹಿ ಭಾರತೀತೀರ್ಥಂ |

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ

ಮಮ ತಾಪಮಪಾಕುರು ದೇವ, ಮಮ ಪಾಪಮಪಾಕುರು ದೇವ || ||

..........................................................................................................................

 


ಮುದಾಕರಾತ್ತ ಮೋದಕಂ LYRICS | GANESHA PANCHARATNA LYRICS IN KANNADA| KANNADA SAVIGANA|

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ

ಕಲಾವಧಾರತಂಸಕಂ ವಿಲಾಸಿಲೋಕ ರಕ್ಷಕಮ್।

ಅನಾಯಕೈಕ ನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್॥೧॥

 

ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಂ

ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್।

ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ

ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತತಮ್॥೨॥

 

ಸಮಸ್ತಲೋಕ ಶಂಕರಂ ನಿರಸ್ತದೈತ್ಯ ಕುಂಜರಮ್

ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್।

ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ

ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್॥೩॥

 

ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಂ

ಪುರಾರಿಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್।

ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಮ್

ಕಪೋಲದಾನ ವಾರಣಂ ಭಜೇ ಪುರಾಣ ವಾರಣಮ್॥೪॥

 

ನಿತಾಂತ-ಕಾಂತ ದಂತ-ಕಾಂತಿಮಂತಕಾಂತಕಾತ್ಮಜಮ್

ಅಚಿಂತ್ಯರೂಪಮಂತಹೀನಮಂತರಾಯ ಕೃಂತನಮ್।

ಹೃದಂತರೇ ನಿರಂತರಂ ವಸಂತಮೇವ ಯೋಗಿನಾಮ್

ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್॥೫॥

 

ಮಹಾಗಣೇಶಪಂಚರತ್ನಮಾದರೇಣ ಯೋನ್ವsಹಮ್

ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ।

ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ

ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋsಚಿರಾತ್॥

......................................................................................................................................................

ಮಾಣಿಕ್ಯವೀಣಾಮುಫಲಾಲಯಂತೀಂ | KAVIRATNA KALIDASA |MANIKYA VEENA SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಮಾಣಿಕ್ಯವೀಣಾಮುಫಲಾಲಯಂತೀಂ, ಮದಾಲಸಾಂ ಮಂಜುಲವಾಗ್ವಿಲಾಸಾಂ

ಮಾಹೇಂದ್ರನೀಲದ್ಯುತಿಕೋಮಲಾಂಗೀಂ, ಮಾತಂಗಕನ್ಯಾಂ ಮನಸಾಸ್ಮರಾಮಿ ||

 

ಚತುರ್ಭುಜೇ ಚಂದ್ರಕಲಾವತಂಸೇ

ಕುಚೋನ್ನತೇ ಕುಂಕುಮರಾಗಶೋಣೇ

ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣಹಸ್ತೇ

ನಮಸ್ತೇ  ಜಗದೇಕಮಾತಃ. ||

 

ಮಾತಾಮರಕತಶ್ಯಾಮಾ ಮಾತಂಗೀ ಮಧುಶಾಲಿನೀ

ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ

ಜಯ ಮಾತಂಗತನಯೇಜಯ ನೀಲೋತ್ಪಲದ್ಯುತೇ

ಜಯ ಸಂಗೀತರಸಿಕೇಜಯ ಲೀಲಾಶುಕಪ್ರಿಯೇ

 

ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ

ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ

ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ

ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ

ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ

 

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ

ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ

ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ

ಪುರುಚಿನನವರತ್ನ ಪೀಠಸ್ತಿತೆಸುಸ್ತಿತೇ

ಶಂಖ ಪದ್ಮದ್ವಯೋಪಾಶ್ರಿತೇಆಶ್ರಿತೇ

ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ

ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ

 

ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ

ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ

ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ

ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ

ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

…………………………………………………………………………………………………………………