Showing posts with label SUBHASHITAS(ಸುಭಾಷಿತಗಳು -ಅರ್ಥ). Show all posts
Showing posts with label SUBHASHITAS(ಸುಭಾಷಿತಗಳು -ಅರ್ಥ). Show all posts

ಸುಭಾಷಿತ ಪದಚ್ಛೇದ: ಹಸ್ತಸ್ಯ ಭೂಷಣಂ ದಾನಂ | SUBHASHITA: HASTASYA BHOOsHANAM DAANAM WITH ANVAYA AND MEANING

 CLICK HERE TO LEARN THIS SUBHASHITA (YOUTUBE)

हस्तस्य भूषणं दानं सत्यं कण्ठस्य भूषणम्।

   श्रोत्रस्य भूषणं शास्त्रं भूषणै: किं प्रयोजनम्॥


ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।

ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈಕಿ೦ ಪ್ರಯೋಜನಮ್॥

हस्तस्य = ಹಸ್ತದ(ಪು. ಷಷ್ಠಿ.ಏಕ) 

भूषणं = ಭೂಷಣವು (ನ. ಪ್ರ.ಏಕ)

दानं = ದಾನವು (ನ.ಪ್ರ.ಏಕ).

सत्यं = ಸತ್ಯವು (ಪು. ಪ್ರ.ಏಕ) 

कण्ठस्य = ಕಂಠದ (ಪು.ಷಷ್ಠೀ.ಏಕ) 

 श्रोत्रस्य = ಕಿವಿಯ (ಪು. ಷಷ್ಠೀ.ಏಕ)

शास्त्रं = ಶಾಸ್ತ್ರಗಳನ್ನು ಕೇಳುವುದು ( ನ.ಪ್ರ.ಏಕ)

 भूषणै: = ಭೂಷಣಗಳಿಂದ (ನ.ತೃತೀಯಾ.ಏಕ)

 किं  = ಏನು

प्रयोजनम् = ಪ್ರಯೋಜನವು( ನ.ಪ್ರ.ಏಕ)


ಅರ್ಥ:

ಕೈಗಳಿಗೆ ದಾನವೇ ಆಭರಣ,

ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ.

 ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ.

ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?

..............................................................................................

ಸುಭಾಷಿತ ಪದಚ್ಛೇದ: ಯತ್ರ ನಾರ್ಯಸ್ತು ಪೂಜ್ಯಂತೆ |यत्र नार्यस्तु पूज्यन्ते | YATRA NAARYASTU - ANVAYA AND MEANING

 CLICK HERE TO LEARN THIS SUBHASHITA(YOUTUBE)

यत्र नार्यस्तु पूज्यन्ते रमन्ते तत्र देवताः 

यत्रैतास्तु  पूज्यन्ते सर्वास्तत्राफलाः क्रियाः ।।

 …………………………………………………………………………

ಯತ್ರ ನಾರ್ಯಸ್ತು ಪೂಜ್ಯಂತೆ

ರಮಂತೇ ತತ್ರ ದೇವತಾ: |

ಯತ್ರೈತಾಸ್ತು  ಪೂಜ್ಯಂತೆ

 ಸರ್ವಾಸ್ತತ್ರಾಫಲಾಕ್ರಿಯಾ:| |

......................................................................

यत्र = ಎಲ್ಲಿ (ಅವ್ಯಯ)

नार्य: = ನಾರಿಯರು (नारी ಶಬ್ದದ ಪ್ರ.ಬಹುವಚನ)

 तु ನಿಶ್ಚಯವಾಗಿ (ಅವ್ಯಯ)

पूज्यन्तॆ = ಪೂಜಿಸಲ್ಪಡುತ್ತಾರೆ (ಕ್ರಿಯಾಪದ, पूज् ಧಾತು ,ಉಭಯಪದಿ, ಪ್ರಥಮ ಪುರುಷ,ಬಹುವಚನ)

 रमन्तॆ ಆನಂದಿಸು (ಕ್ರಿಯಾಪದ ,रम्  ಧಾತು, ಆತ್ಮನೆಪದಿ, ಪ್ರಥಮ ಪುರುಷ,ಬಹುವಚನ)

तत्र ಅಲ್ಲಿ(ಅವ್ಯಯ)

दॆवता: = ದೇವತೆಗಳು (दॆवता ಶಬ್ದದ ಪ್ರ.ಬಹುವಚನ)

ऎता: = ಇವರು (ನಾರಿಯರು)

  = ಇಲ್ಲ(ಅವ್ಯಯ)

 सर्वाಎಲ್ಲಾ (ಸ್ತ್ರೀ, ಪ್ರ, ಬಹು)

अफलाನಿಷ್ಫಲ (ಸ್ತ್ರೀ, ಪ್ರ, ಬಹು)

क्रिया: = ಕ್ರಿಯೆಗಳು (ಕೆಲಸಗಳುಸ್ತ್ರೀ, ಪ್ರ, ಬಹು)

भवन्ति = ಆಗುತ್ತವೆ (ಅಧ್ಯಾಹಾರ)

..............................................

ಅರ್ಥ:

ಎಲ್ಲಿ ನಾರಿಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಆನಂದದಿಂದ ಇರುತ್ತಾರೆ.

ಆದರೆ ಎಲ್ಲಿ ನಾರಿಯರಿಗೆ ಗೌರವ ಇರುವುದಿಲ್ಲವೋಅಲ್ಲಿ ಮಾಡಿದ ಯಾಗ ,ಯಜ್ಞಜಪತಪಹೋಮಗಳು ಎಲ್ಲವು ನಿಷ್ಪಲಗಳು.

..................................................................................................................................................

ಸುಭಾಷಿತ ಪದಚ್ಛೇದ: ಉದ್ಯಮೇನೈವ ಸಿದ್ಧ್ಯಂತಿ | SUBHASHITA :UDYAMENAIVA SIDHYANTI | WITH ANVAYA AND MEANING

 click here to learn this subhashita(youtube)

उद्यमेनैव सिध्यन्ति कार्याणि  मनोरथै: |

 हि सुप्तस्य सिम्हस्य प्रविषन्ति मुखे मृगाः ||

 

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ  ಮನೋರಥೈಃ

ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: ||


उद्यमेन =  ಕೆಲಸದಿಂದ (ಪುಲ್ಲಿಂಗ; ತೃತೀಯ ವಿಭಕ್ತಿ, ಏಕವಚನ) 

  एव= ಮಾತ್ರ (ಅವ್ಯಯ)  

सिध्यन्ति=  ಸಿದ್ಧಿಸುತ್ತವೆ(ಕ್ರಿಯಾಪದ, ಪ್ರಥಮ ಪುರುಷ ,ಬಹುವಚನ)

 कार्याणि=  ಕಾರ್ಯಗಳು (ನ. ಪ್ರ. ಬ)

 न =  ಇಲ್ಲ(ಅವ್ಯಯ) 

 मनोरथै: =ಮನಸ್ಸಿನಲ್ಲಿ ಆಸೆ ಪಡುವುದರಿಂದ (ಪು,ತೃ,ಬ) 

हि = ಖಂಡಿತ (ಅವ್ಯಯ)

सुप्तस्य =   ಮಲಗಿರುವ( ಪು. ಷ. ಏಕ, ವಿಶೇಷಣ)

सिम्हस्य=  ಸಿಂಹದ (ಪು. ಷ.ಏಕ)

 प्रविशन्ति= ಪ್ರವೇಶಿಸುತ್ತವೆ (ಕ್ರಿಯಾ. ಉ. ಬಹು)

 मुखे=    ಬಾಯಿ (ನ. ಸ. ಏಕ) 

मृगा:=  ಪ್ರಾಣಿಗಳು( ಪು. ಪ್ರ. ಬ)


ಅರ್ಥ:

ಬರಿ ಆಸೆ ಪಡುವುದರಿಂದ ಅಥವಾ ಕನಸು ಕಾಣುವುದರಿಂದ ಕಾರ್ಯಗಳು ಕೈಗೂಡುವುದಿಲ್ಲ.

ಕೆಲಸವನ್ನು ಮಾಡಿದರಷ್ಟೇ ಕಾರ್ಯಗಳು ಕೈಗೂಡುವುವು.

ಮಲಗಿರುವ ಸಿಂಹದ ಬಾಯಿಗೆ ಯಾವ ಪ್ರಾಣಿಯೂ (ಇಲ್ಲಿ ಮೃಗ ಎಂದರೆ ಜಿಂಕೆತಾನಾಗಿಯೇ ಹೋಗಿ ಬೀಳುವುದಿಲ್ಲಕಾಡಿನ ರಾಜನಾದರೂ ಕೂಡ ಸಿಂಹವು ತನ್ನ ಪ್ರಯತ್ನದಿಂದ ಬೇಟೆಯನ್ನು ಪಡೆಯಬೇಕು.

...........................................................................................................................

Also see: 

वासर:/ವಾರಗಳು | WEEK NAMES IN SANSKRIT 


ಸರಳ ಸುಭಾಷಿತ: ಅಲಂಕಾರ ಪ್ರಿಯೋ ವಿಷ್ಣು: | ಬ್ರಾಹ್ಮಣೋ ಭೋಜನ ಪ್ರಿಯ: | BRAHMANO BHOJANA PRIYA MEANING

    CLICK HERE FOR THE EXPLAINATION

अलङ्कारप्रियॊ विष्णु: अभिषेकप्रिय: शिव: ।

नमस्कारप्रियो भानु: ब्राह्मणो भोजन: प्रिय: ॥


ಅಲಂಕಾರ ಪ್ರಿಯೋ ವಿಷ್ಣು: ಅಭಿಷೇಕ ಪ್ರಿಯ: ಶಿವ: ।

ನಮಸ್ಕಾರಪ್ರಿಯೋ ಭಾನು:  ಬ್ರಾಹ್ಮಣೋ ಭೋಜನ ಪ್ರಿಯ: ॥


ವಿಷ್ಣುವು ಅಲಂಕಾರ ಪ್ರಿಯನು, ಶಿವನು ಅಭಿಷೇಕ ಪ್ರಿಯನು, ಸೂರ್ಯನು ನಮಸ್ಕಾರ ಪ್ರಿಯನು, ಬ್ರಾಹ್ಮಣನು ಭೋಜನ ಪ್ರಿಯನು.

ಪ್ರತಿಯೊಬ್ಬನಿಗೂ ಮುಖ್ಯವಾಗಿ ಬೇಕಾದದ್ದು ಸಂತೃಪ್ತಿ.

.............................................................................................................................................


ಸರಳ ಸುಭಾಷಿತ - "ನಾರಾಯಣ" ಶಬ್ದದ ಅರ್ಥ| MEANING OF THE WORD "NARAYANA" |SANSKRIT SUBHASHITA

 

CLICK HERE TO LEARN THIS SUBHASHITA


आपो नारा इति प्रॊक्ता आपो वै नरसूनव:

ता यदस्यायनं पूर्वं तेन नारायण: स्मृत:

ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರ ಸೂನವ:

ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣ: ಸ್ಮೃತ:

 

ನೀರಿಗೆ 'ನಾರಾ' ಎಂದೂ ಕರೆಯುತ್ತಾರೆ. ಜೀವಿಗಳೆಲ್ಲ ನೀರಿನಿಂದಲೇ ಹುಟ್ಟುತ್ತವೆ. ಜಲವೇ ಪೂರ್ವ ಕಾಲದಲ್ಲಿ ಭಗವಂತನ ಆಶ್ರಯ ಸ್ಥಾನವಾಗಿದ್ದರಿಂದ ಭಗವಂತನಿಗೆ ನಾರಾಯಣ ಎಂದು ಕರೆಯುತ್ತಾರೆ.

Water is also called  'Nara'. All living things are born from this water. As this water was the refuge of the Lord in ancient times, the Lord is called Narayana.

........................................................................................

ಸರಳ ಸುಭಾಷಿತ - ಹಸಿತು೦ ಭ್ರಮಿತು೦ ದ್ರಷ್ಟು೦| SUBHASHITA ON KIDS | HASITUM BHRAMITUM

 


हसितुं भ्रमितुं द्रष्टुं खेलितुं खादितुं तथा।

कथां श्रोतुं स्वप्तुं रोचते शैशवे सदा॥

 

ಹಸಿತು೦ ಭ್ರಮಿತು೦ ದ್ರಷ್ಟು೦  ಖೇಲಿತು೦ ಖಾದಿತು೦ ತಥಾ।

ಕಥಾ೦ ಶ್ರೋತು೦ ಸ್ವಪ್ತು೦ ರೋಚತೇ ಶೈಶವೇ ಸದಾ॥

 

ಮಗು ಯಾವಾಗಲೂ  ನಗಲು, ನಡೆಯಲು, ನೋಡಲು, ಆಟವಾಡಲು, ತಿನ್ನಲು,

ಕಥೆಗಳನ್ನು ಕೇಳಲು ಮತ್ತು ಮಲಗಲು ಆನಂದಿಸುತ್ತದೆ.

........................................................................................


ಕಾವ್ಯದ ರಮಣೀಯತೆಯ ಕುರಿತಾದ ಸುಭಾಷಿತಗಳು| SUBHASHITAS ON BEAUTY OF KAVYA|

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अपारे काव्यसम्सारे कविरेक प्रजापति:

यथास्मै रोचते विश्वम् तथेदं परिवर्तते॥

                             ಅಪಾರೇ ಕಾವ್ಯ ಸಂಸಾರೇ ಕವಿರೇಕ: ಪ್ರಜಾಪತಿ:

ಯಥಾಸ್ಮೈ ರೋಚತೇ ವಿಶ್ವ೦ ತಥೇದ೦ ಪರಿವರ್ತತೆ॥

 

ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೊಬ್ಬನೇ ಸೃಷ್ಟಿಕರ್ತನಾದ ಬ್ರಹ್ಮ. ಅವನಿಗೆ ಹೇಗೆ ರುಚಿಸುವುದೋ ಹಾಗೆಯೆ ವಿಶ್ವವೂ ಪರಿವರ್ತನೆಗೊಳ್ಳುತ್ತದೆ

 …………………………………………………………………………………………………………

काव्यं यशसेऽर्थकृते व्यवहारविदे, शिवेतरक्षये ।

सद्य​: परनिवृतये कान्तासम्मिततयोपदेशयुजे॥

 ಕಾವ್ಯಂ ಯಶಸೇsರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ।

ಸದ್ಯ: ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ॥

 

ಕಾವ್ಯದ ಪ್ರಯೋಜನಗಳು: ಕೀರ್ತಿ, ಧನ, ವ್ಯವಹಾರ ಜ್ಞಾನ, ಅಮಂಗಳ ಪರಿಹಾರ, ಒಡನೆಯೇ ಆಗುವ ಪರಮಾನಂದ ಮತ್ತು ಪ್ರಿಯಳಾದ ಕಾಂತೆಯು ಮನವೊಲಿಸಿ ಹೇಳಿದ ಉಪದೇಶ.

…………………………………………………………………………………………………………

                                द्वै वर्त्मनि गिरो देव्या: शास्त्रं च कवि कर्म च​।

प्रज्नोपज्नं तयोराद्यं प्रतिभोद्भवम् अन्तिमम्॥

 ದ್ವೇ ವರ್ತ್ಮನಿ ಗಿರೋ ದೇವ್ಯಾ: ಶಾಸ್ತ್ರಂ ಚ ಕವಿಕರ್ಮ ಚ।

ಪ್ರಜ್ಞೋಪಜ್ಞ೦ ತಯೋರಾದ್ಯ೦ ಪ್ರತಿಭೋದ್ಭವಮಂತಿಮಮ್||

 

ವಾಗ್ದೇವಿಯ ಮಾರ್ಗಗಳು ಎರಡು: ಒಂದು ಶಾಸ್ತ್ರ ,ಇನ್ನೊಂದು ಕಾವ್ಯ .ಮೊದಲನೆಯದು ಬುದ್ಧಿ ಸಾಮರ್ಥ್ಯದಿಂದ ಹುಟ್ಟುತ್ತದೆ. ಎರಡನೆಯದು ಪ್ರತಿಭೆಯಿಂದ ಆಗುತ್ತದೆ.

…………………………………………………………………………………………………………

                            नियतिकृतनियमरहितां ह्लादैकमयीमनन्यपरतन्त्रताम्।

नवरसरुछिरां निर्मितिमादधती भारती कवेर्जयति॥

 ನಿಯತಿಕೃತನಿಯಮರಹಿತಾ೦ ಹ್ಲಾದೈಕಮಯೀಮನನ್ಯಪರತಂತ್ರತಾಮ್।

ನವರಸರುಚಿರಾ೦ ನಿರ್ಮಿತಿಮಾದಧತೀ ಭಾರತೀ ಕವೇರ್ಜಯತಿ॥

 

ಕವಿಯ ಕಾವ್ಯ ನಿಸರ್ಗಕೃತವಾದ ನಿಯಮಕ್ಕೆ ಒಳಗಾಗಿರುವುದಿಲ್ಲ. ಅದು ಕೇವಲ ಆನಂದ ಸ್ವರೂಪವಾದುದು .ಅನ್ಯಾಧೀನವಲ್ಲ. ನವರಸಗಳಿಂದ ಮನೋಹರವಾಗಿದೆ. ಇಂತಹ ಕಾವ್ಯವನ್ನು ನಿರ್ಮಿಸುವ ಕವಿಯ ವಾಣಿ ಜಯಶೀಲೆ.

………………………………………………………………………………………………………

शास्त्रेषु दुर्ग्रहोऽप्यर्थ​: स्वदते कविसूक्तिषु ।

दृश्यं करगतं रत्नं दारुणं फणिमूर्धनि॥

 ಶಾಸ್ತ್ರೇಷು ದುರ್ಗ್ರಹೋಪ್ಯರ್ಥ: ಸ್ವದತೇ ಕವಿಸೂಕ್ತಿಷು।

ದೃಶ್ಯ೦ ಕರಗತ೦ ರತ್ನ೦ ದಾರುಣ೦ ಫಣಿಮೂರ್ಧನಿ॥

 

ಶಾಸ್ತ್ರಗಳಲ್ಲಿ ತಿಳಿಯಲು ಕಠಿಣವಾದ ವಿಷಯವು ಕವಿ ಸೂಕ್ತಿಗಳಲ್ಲಿ ಬಂದಾಗ ಹಿತಕರವಾಗಿ ರುಚಿಸುತ್ತದೆ. ಕೈಯಲ್ಲಿರುವ ರತ್ನ ನೋಡಲು ಸುಂದರವಾಗಿರುತ್ತದೆ. ಅದೇ ಹಾವಿನ ಹೆಡೆಯಲ್ಲಿದ್ದಾಗ ಭೀಕರವಾಗಿರುತ್ತದೆ.

…………………………………………………………………………………………………………


ಸರಳ ಸುಭಾಷಿತ -ಕಾಕ ಚೇಷ್ಟಾ ಬಕ ಧ್ಯಾನಂ- ವಿದ್ಯಾರ್ಥಿಗಳ ಲಕ್ಷಣ | SUBHASHITA ON STUDENTS

 

CLICK HERE FOR SUBHASHIT EXPLAINATION IN KANNADA


काक चॆष्टा बकध्यानम् श्वान निद्रा तथैव च ।

अल्पाहारम् गृहत्यागी एतत् विद्यार्थि लक्षणम्॥

 

ಕಾಕ ಚೇಷ್ಟಾ ಬಕ ಧ್ಯಾನಂ ಶ್ವಾನ ನಿದ್ರಾ ತಥೈವ ಚ।

ಅಲ್ಪಹಾರಂ ಜೀರ್ಣ ವಸ್ತ್ರಂ/ ಗೃಹತ್ಯಾಗಿ ಏತತ್ ವಿದ್ಯಾರ್ಥಿ ಲಕ್ಷಣಂ||

 

ಕಾಗೆಯಂತೆ ಚಟುವಟಿಕೆಯಿಂದ ಇರುವುದು ಬಕಪಕ್ಷಿಯಂತೆ ಏಕಾಗ್ರತೆ ಶ್ವಾನದಂತೆ ನಿದ್ರಿಸುವುದು ಅಲ್ಪಹಾರವನ್ನು ಸೇವಿಸುವುದು ಗುರುಕುಲದಲ್ಲಿ ವಾಸಮಾಡುವುದು ಇವು ವಿದ್ಯಾರ್ಥಿಗಳ ಲಕ್ಷಣ.

.................................................................................................


ಸರಳ ಸುಭಾಷಿತ - ಕಸ್ಯಾಪಿ ಕೋಪ್ಯತಿಶಯೋಸ್ತಿ |SUBHASHITA WITH MEANING| KANNADA SAVIGANA

 

कस्यापि कोप्यतिश्योस्ति तेन लोके

ख्यातिं प्रयाति न हि सर्व विदस्तु सर्वॆ।

किं केतकी फलति किं पनस​: सपुष्प:

किं नागवल्यपि पुष्प फलैरुपेता ||

 

ಕಸ್ಯಾಪಿ ಕೋಪ್ಯತಿಶಯೋಸ್ತಿ ತೇನ ಲೋಕೆ

ಖ್ಯಾತಿ೦ ಪ್ರಯಾತಿ ಹಿ ಸರ್ವ ವಿದಸ್ತು ಸರ್ವೇ।

ಕಿ೦ ಕೇತಕೀ ಫಲತಿ ಕಿ೦ ಪನಸ: ಪುಷ್ಪ:

ಕಿ೦ ನಾಗವಲ್ಯಪಿ ಪುಷ್ಪ ಫಲೈರುಪೇತಾ||

 

ಪ್ರತಿಯೊಬ್ಬ ಮನುಷ್ಯನಲ್ಲು ಯಾವುದೋ ಒಂದು ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಎಲ್ಲರಲ್ಲೂ ಎಲ್ಲಾ ರೀತಿಯ ಪ್ರತಿಭೆ ಇರಲು ಸಾಧ್ಯವಿಲ್ಲ.  ಕೇತಕಿ ಹಣ್ಣು ಫಲ ನೀಡುತ್ತದೆಯೇ? ಹಲಸಿನ ಹಣ್ಣು ಸಪುಷ್ಪವೆ?ವೀಳ್ಯದೆಲೆಯ ಬಳ್ಳಿ ಹೂ ಹಣ್ಣುಗಳಿಂದ ತುಂಬಿದೆಯೇ?

ಪ್ರತಿಯೊಬ್ಬರು ಅವರವರ ಪ್ರತಿಭೆಯ ಮೂಲಕ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು.

.......................................................................................................................

ಸರಳ ಸುಭಾಷಿತಗಳು(ಅರ್ಥ ಸಹಿತ)- 8 |SUBHASHITAS WITH MEANING -8

 

1.   अभिवादनशीलस्य नित्यं वृद्धॊपसेविन:

चत्वारि तस्य वर्धन्ते आयुर्विद्या यशो धनम्॥

ಅಭಿವಾದನ ಶೀಲಸ್ಯ ನಿತ್ಯ೦ ವೃದ್ಧೋಪಸೇವಿನ:

ಚತ್ವಾರಿ ತಸ್ಯ ವರ್ಧನ್ತೇ ಆಯುರ್ವಿದ್ಯಾ ಯಶೋ ಧನಮ್॥

 ಅರ್ಥ:    ಪ್ರತಿದಿನವೂ ಗುರುಹಿರಿಯರ ಸೇವೆಯನ್ನು ಮಾಡುತ್ತಾಅವರಿಗೆ ನಮಸ್ಕಾರಗಳನ್ನು ಮಾಡುತ್ತಿರುವ ವ್ಯಕ್ತಿಗೆ ಆಯಸ್ಸು,ವಿದ್ಯೆ,ಯಶಸ್ಸು ಮತ್ತು ಧನ ಈ ನಾಲ್ಕೂ ಸಂಪತ್ತುಗಳು ವೃದ್ಧಿಯಾಗುತ್ತವೆ.

 

 

2.   आलस्यं हि मनुष्याणां शरीरस्थॊ महान् रिपु: । 

नास्त्युद्यम समॊ बन्धु: कुर्वाणॊ नावसीदति॥

ಆಲಸ್ಯಮ್ ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು: |

ನಾಸ್ತ್ಯುದ್ಯಮಸಮೋ ಬಂಧು: ಕುರ್ವಾಣೋ ನಾವಸೀದತಿ ||

 ಅರ್ಥ:   ಆಲಸ್ಯವು ಮನುಷ್ಯನ ಶರೀರದಲ್ಲಿ ನೆಲೆಸಿದ ಮಹಾಶತ್ರು.ಉದ್ಯೋಗ-ಪ್ರವೃತ್ತಿಯಂತಹ ಬಂಧುವು ಇನ್ನೊಬ್ಬನಿಲ್ಲ. ಉದ್ಯೋಗಶೀಲನಾದ ಮನುಷ್ಯನಿಗೆ ಯಶಸ್ಸು, ಕೀರ್ತಿ, ಹಣ ಸುಖ ಸಿಗುತ್ತದೆ.

 

3.   अञ्जलिस्थानि पुष्पाणि वासयन्ति करद्वयम्।

अहॊ सुमनसां प्रीतिर्वामदक्षिणयॊ: समा॥

 ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್।

ಅಹೋ ಸುಮನಸಾ೦ ಪ್ರೀತಿರ್ವಾಮ ದಕ್ಷಿಣಯೋ: ಸಮಾ॥

ಅರ್ಥ:  ಕೈಯಲ್ಲಿ ಹಿಡಿದಿರುವ ಪುಷ್ಪವು ತನ್ನ್ನನ್ನು ಹಿಡಿದಿರುವ ಎರಡೂ ಕೈಗಳನ್ನು ಸುವಾಸಿತವನ್ನಾಗಿಸುತ್ತದೆ. ಅಂತೆಯೇ ಸಜ್ಜನರು ಎಲ್ಲಾ ಜನರನ್ನು ಒಂದೇ ಪ್ರೀತಿಯಿಂದ ನೋಡುತ್ತಾರೆ.

 

4.   अनुगन्तुं सतां धर्म कृत्स्नम् यदि न शक्यते।

स्वल्पमपि अ नुगन्तव्यं  मार्गस्तॊ नावसीदति॥

 ಅನುಗಂತುಂ ಸತಾಂ ಧರ್ಮ ಕೃತ್ಸ್ನ೦ ಯದಿ ನ ಶಕ್ಯತೆ।

ಸ್ವಲ್ಪಮಪಿ ಅನುಗಂತವ್ಯ೦ ಮಾರ್ಗಸ್ತೋ ನಾವಸೀದತಿ॥

ಅರ್ಥ:   ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು. ಹಾಗೆ ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದಲ್ಲಿ ಸ್ವಲ್ಪವಾದರೂ ಅವರನ್ನು ಅನುಸರಿಸಬೇಕು. ಆ ಮಾರ್ಗವನ್ನು ಅನುಸರಿಸುವವರು ನಾಶವನ್ನು ಹೊಂದುವುದಿಲ್ಲ.

 

5.  अन्य क्षेत्रे कृतं पापं पुण्यक्षेत्रे प्रणश्यति।

पुण्यक्षेत्रे कृतं पापं वज्रलेपो भविष्यति||

          ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ಪ್ರಣಶ್ಯತಿ।

ಪುಣ್ಯಕ್ಷೆತ್ರೇ ಕೃತ೦ ಪಾಪ೦ ವಜ್ರಲೇಪೋ ಭವಿಷ್ಯತಿ॥

ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ ಪಾಪಗಳನ್ನು ಪುಣ್ಯಕ್ಷೇತ್ರಕ್ಕೆ ಹೋಗಿ ಕಳೆದು ಕೊಳ್ಳಬಹುದು. ಆದರೆ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿಯೂ ಪಾಪ ಮಾಡಿದರೆ ಆ ಪಾಪವು ವಜ್ರಲೇಪದಂತೆ ಶಾಶ್ವತವಾಗಿರುತ್ತದೆ.

 

6. हस्तस्य भूषणं दानं सत्यं कण्ठस्य भूषणम्।

श्रोत्रस्य भूषणं शास्त्रं भूष्हणै: किं प्रयोजनम्॥

 ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।

ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥

 ಕೈಗೆ ದಾನವೇ ಆಭರಣ,ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ. ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ. ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?

 

7.  मातृवत् परदारॆषु परद्रव्यॆषु लोष्टवत् ।

आत्मवत् सर्व भूतेषु य: पश्यति स: पण्डित: ॥

      ಮಾತೃವತ್ ಪರದಾರೇಷು ಪರದ್ರವ್ಯೇಷು ಲೊಷ್ಟವತ್ ।

ಆತ್ಮವತ್ ಸರ್ವ ಭೂತೇಷು ಯ: ಪಶ್ಯತಿ ಸ: ಪಂಡಿತ: ||

ಪರಸ್ತ್ರೀಯರನ್ನು ತಾಯಿಯಂತೆ , ಪರದ್ರವ್ಯವನ್ನು ಮಣ್ಣಿನಂತೆ ,ಎಲ್ಲಾ ಜೀವಿಗಳನ್ನು ತನ್ನಂತೆ ಕಾಣುವವನು ಪಂಡಿತ ನು.

 

 8. यथा चित्तं तथा वाच: यथा वाचस्तथा क्रिया ।

चित्ते वाचि क्रियायां च साधूनामेकरूपता॥

     ಯಥಾ ಚಿತ್ತ0 ತಥಾ ವಾಚ: ಯಥಾ ವಾಚಸ್ತಥಾ ಕ್ರಿಯಾ।

ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕರೂಪತಾ॥

 ಸಜ್ಜನರು ಮನಸ್ಸಿನಲ್ಲಿರುವುದನ್ನೇ ಹೊರಗೆ ಮಾತುಗಳಲ್ಲಿ ತೋರಿಸುತ್ತಾರೆ. ಮಾತಿನಂತೆ ಅವರ ಕೃತಿಯೂ ಇರುತ್ತದೆ. ಮನಸ್ಸು ,ಮಾತು, ಕೃತಿಗಳಲ್ಲಿ ಅವರು ಯಾವಾಗಲೂ ಒಂದೇ ಬಗೆಯಾಗಿ ಇರುತ್ತಾರೆ.

............................................................................................................................................

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...