Aug 3, 2025

ಪುಟಾಣಿ ನೀಲಿ ಹಕ್ಕಿ, ಹಾಡು SONG LYRICS IN KANNADA |PUTANI NEELI HAKKI SONG LYRICS| SHISHU GEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಹೆಚ್.ಎಸ್.ವೆಂಕಟೇಶಮೂರ್ತಿ

! ಪುಟಾಣಿ ನೀಲಿ ಹಕ್ಕಿ, ಹಾಡು ಹಾಡು ಹಾಡು

ಹಾಡು …………….. ಹಾ……….ಡು ||

ಚಂದ್ರ ಇದಾನೆ ಬಾನಲ್ಲಿ ಬೆಳದಿಂಗಳು ಕಾನಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||1 ||

ಅಲೆ ಯಾಡುತಿವೆ ಕೊಳದಲ್ಲಿ ತೆನೆ ತೂಗುತ್ತಿವೆ ಹೊಲದಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||2||

ಬೆಳಕ್ಕಿಗಳಿವೆ ಸರದಲ್ಲಿ  ಗಿಳಿಗಳು ಹಚ್ಚನೆ ಮರದಲ್ಲಿ
ನೀಲಿಯೊಳಾಡುವ ನೀಲಿಯ ಹಕ್ಕಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||3||

................................................................................................................................................

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ SONG LYRICS IN KANNADA | MAANAVANAAGI HUTTIDA MYALE |DR.RAJKUMAR

 ಹಾಡಲು ಕಲಿಯಿರಿ(CLICK HERE TO LEARN THIS SONG)

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ |

ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ |

ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ

ಇರೋದರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ   || ||

 

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ |

ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ |

ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ |

ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ   || ||

 

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು |

ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು |

ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು |

ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು   || ||

 

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ |

ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ |

ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ |

ನಡೆಯುತದೆ ಮೈಸೂರೊಳಗೆ ದರಂದುರಿ   || ||

 

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ |

ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ |

ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ |

ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ   || ||

 

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ |

ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ |

ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ |

ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ    || ||

 

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ |

ಇದರ ಒಳಗೆ ಇನ್ನು ಒಂದು ಹುನ್ನಾರೈತಿ |

ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ |

ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ    || ||

 

ಊಟ ಮುಗಿದಿದ್ರೇಳು ಮುಂದೆ ನೋಡೋದದೆ |

ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ |

ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ |

ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ  || ||

 

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ |

ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ |

ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ |

ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ  || ||

 

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ |

ಚಿಕ್ಕದೇವ ದೊಡ್ಡದೇವ ಮೈಸೂರಿನವರ |

ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ |

ಎಲ್ಲ ಕಥೆ ಹೇಳುತದೆ ಕಲ್ಪಾಂತರ   || ೧೦ ||

 

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ |

ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ |

ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ |

ಮುಂದಿನವರು ಕಂಡರೆ ಸಾಕು ಸ್ವಂತ ಸುಖ   || ೧೧ ||

 

ಒಂದು ಎರಡು ಮೂರು ನಾಲ್ಕು ಆದಾವ್ ಮತ |

ಹಿಂದಿನಿಂದ ಹರಿದು ಬಂದದ್ದೊಂದೇ ಮತ |

ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ |

ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ    || ೧೨ ||

 

ಷಹಜಹಾನ ತಾಜಮಹಲು ಕೊಹಿನೂರ್ ಮಣಿ |

ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ |

ಜೀವವಂತ ಶರಾವತಿಗಿನ್ನಾವ್ದೆಣಿ |

ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ   || ೧೩ ||

 

ಶರಾವತೀ ಕನ್ನಡ ನಾಡ ಭಾಗೀರಥಿ |

ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ |

ಸಾವು ನೋವು ಸುಳಿಯದಿಲ್ಲಿಯ ಕರಾಮತಿ |

ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ   || ೧೪ ||

 ......................................................................................


ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ SONG LYRICS IN KANNADA |BAARE SAKHI POGUVA

 

ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ |
ಕೊಳಲನೂದುವಾ ಕೃಷ್ಣ ಕೊಳಲನೂದುವ ||

ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು
ಮೂರು ನಿಮಿಷ ಅವನ ಮರೆಯಲಾಗದಾಯಿತು |
ಬೀರುತಿರುವ ಮೋಹಜಾಲ ಸಡಲದಾಯಿತು ||1||


ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು |
ಯಾವನಾದರೇನು ಇವನ ಕ್ಷಣವು ಕಾಣದೆ
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||2||


ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ |
ಮಲಯ ಮಾರುತ ತಾ ತಲೆಯನಾಡುವ ||3||


ನಾದದ ಸುಧೆ ಸಾಗರದಲಿ ತೇಲುವಂತಿದೆ 
ಮಾಧವ ತಾ ಸುಧೆಯ ರಸವನೆರಚುವಂತಿದೆ |
ಬಾಧಿಸುತಿಹ ಭವದ ತಾಪವಡಗಿದಂತಿದೆ
ಮಾದರಿಫಲ ರಾಸಕ್ರೀಡೆ ತೋರುವಂತಿದೆ ||4||


ಸಕಲ ಲೋಕನಾಥನೀತನೆಂದು ತಿಳಿಯಿತು.
  ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು |
ಲಕುಮಿ ಮುರುಳಿ ರೂಪದಲ್ಲಿಇಹುದು ಹೊಳೆಯಿತು
ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು || 5||

............................................................................................................................................

 


ಆಲದ ನೆಳಲಾಗು ಅಶ್ವತ್ಥ ನೆಳಲಾಗು KANNADA FOLK SONG LYRICS |AALADA NELALAAGU ASHVATHA NELALAAGU

 

ಆಲದ ನೆಳಲಾಗು ಅಶ್ವತ್ಥ ನೆಳಲಾಗು

ಗೋಕರ್ಣದ ಗೋಳಿ ನೆಳಲಾಗು

ಕಂದಯ್ಯ ನೆಳಲಾಗು ನಮ್ಮ ಮನೆಗೆಲ್ಲ॥

 

ಆರೋಗ್ಯ ಹೆಚ್ಚಲಿ ಅಪಮೃತ್ಯು ತೊಲಗಲಿ

ಯಾರೂ ಕಂಡರೂ ಹರಸ..ಲಿ

ಕಂದಯ್ಯಗೆ ದೀರ್ಘಾಯುಸ್ಸೆಂಬ ಹರಕೇಯ॥

 

ಯಾರೂ ಇಲ್ಲದ ಕಷ್ಟ ದಾರಿಯ ಮನೆ ಕಷ್ಟ

ದಾರಿದ್ರ್ಯ ದು:ಖ ಬಹುಕಷ್ಟ।

ಕಂದಯ್ಯ ಇವು ಮೂರು ಬಾರಾದಿರಲಿ ನಿನ್ನ ಬಳಗಕ್ಕೆ॥

 

ಮಕ್ಕಳಿಗೆ ತಾಯಾಸೆ ಪಕ್ಷಿಗೆ ಗೂಡಾಸೆ

ಬಿತ್ತಿದ ಬೆಳೇಗೆ ಮಳೆಯಾಸೆ

ಕಂದಯ್ಯ ನಿನ್ನಾಸೆ ನಮ್ಮ ಬಳಗಕ್ಕೆ॥

 

ಪ್ರೀತಿಯ ಮಗನಾಗು ನೀತೀಲಿ ಗುರುವಾಗು

ಖ್ಯಾತೀಲಿ ಧರ್ಮಜನಾಗು।

ಕಂದಯ್ಯ ಜ್ಯೋತಿಯಾಗಿ ಮನೆಯ ಬೆಳಗಯ್ಯ॥

 

ಮುದ್ದು ನೀ ಅಳದೀರು ಎದಾಗ ಉಣಬಹುದು

ನಿದ್ದೆ ಬಂದಾಗ ಪವಡೀಸು|

ಕಂದಯ್ಯ ಶ್ರೀಕೃಷ್ಣ ದೇವರು ಬುದ್ದಿ ಕೊಟ್ಟಗ ನಡೆದಾಡು॥

 

ಆಯುಷ್ಯಳ್ಳ ಈ ಪಟ್ಟೇಯ ಯಾರುಕೊಟ್ರು ಕಂದಯ್ಯಗೆ

ದೇವೇಂದ್ರ ಕೊಟ್ಟ ಶಿವ ಕೊಟ್ಟಾ

ಈ ಪಟ್ಟೇಯ ಕಾರು ಕೇಳಿದರೂ ಕೊಡದೀರು॥

 

ಯಾರು ಇದ್ದರು ಮಗುವೆ ತಾಯಿ ಇದ್ದಾಗಲ್ಲ

ಹತ್ತಿದ ಕೊಲ್ಲಿ ಒಲೆಯೊಳಗೆ ಉರಿದರೆ

ದೀವಿಗೆ ಉರಿದಷ್ಟು ಬೆಳಕಲ್ಲ॥

 

ನೆಳಲಾಗು ಮಲ್ಲಿಗೆ ನೆಳಲಾಗು ಸಂಪಿಗೆ

ನೆಳಲಾಗು ಬಾಗಿಲಶ್ವತ್ಥ

ಕಂದಯ್ಯ ಕೇಳಿದರೆ ಮುತ್ತ ಕಟ್ಟಿಸುವೆ ಎಲೆಗೊಂದ॥

 

ತಾಯಿ ಇದ್ರೆ ತವರೂರು ನೀರಿದ್ರೆ ಕೆರೆ ಬಾವಿ

ಆನೆ ಕಟ್ಟಿದರೆ ಅರಮನೆ

ಕಂದಯ್ಯ ರಾಜ್ಯವಾಳಿದರೆ ದೊರೆತಾನ॥

 

………………………………………………………………...............................................

 


ಆಡೋಣ ಬನ್ನಿ ಕಣ್ಣ ಮುಚ್ಚಾಲೆ song lyrics in kannada | aadona banni kanna muchale |kannada savigana lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಆಡೋಣ ಬನ್ನಿ ಕಣ್ಣ ಮುಚ್ಚಾಲೆ ,

ತೂಗೋಣ ಬನ್ನಿ ಉಯ್ಯಾಲೆ

ಜೀವನ್ವೊಂದು ನಾಟಕ ಶಾಲೆ,

ನಾವೆಲ್ಲ ಕುಣಿಯುವ ನರ್ತನ ಶಾಲೆ ||


ಸುತ್ತಾಲು ಚೆಲ್ಲಿದ ರಂಗುರಂಗೋಲೆ,

ಬಳುಕುತ ಬರುವಳು ವನಮಾಲೆ

ಭರದಿಂದ ಬಂದು ಪಚ್ಚೆಯ ಸಾಲೆ,

ತೂಗಾಡಿ ಕರೆದಾವು ತೆಂಗಿನ ಸಾಲೆ

ಉಯ್ಯಾಲೆ ಚಂಪಾಲೆ, ಉಯ್ಯಾಲೆ ಚಂಪಾಲೆ ||


ಹಕ್ಕಿಗಳಿಂಚರ ಕರೆಯೋಲೆ,

ಕುಣಿಯುತ ಬರುವಳು ನವ್ವಾಲೆ

ಇಂಪು ಇಂಪಿನ ಗುಂಪು ಕೋಗಿಲೆ,

ಕಂಪನು ಸೂಸುವ ಹೂಗಳ ಮಾಲೆ

ಉಯ್ಯಾಲೆ ಚಂಪಾಲೆ, ಉಯ್ಯಾಲೆ ಚಂಪಾಲೆ ||

...........................................................................................................