Sep 22, 2025

ಮಂತ್ರವರಿಯೆ ನಾ ಯಂತ್ರವರಿಯೆ - ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ) LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ದೇವೀ ಅಪರಾಧ ಕ್ಷಮಾಪಣ ಸ್ತೋತ್ರ (ದ ರಾ ಬೇಂದ್ರೆ)

 

ಮಂತ್ರವರಿಯೆ ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।

ಆಹ್ವಾನವರಿಯೆ ನಾ ಧ್ಯಾನವರಿಯೆ ನಾನರಿಯೆ ಶ್ರುತಿಯ ಕಥೆಯಾ।।

ಮುದ್ರೆಗಿದ್ರೆಗಳ ಅರಿಯೆ ನಾನು ಕೂಸಾಗಿ ತೆರೆವೆ ಬಾಯಿ|

ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ||1||

 

ಗೊತ್ತಿಲ್ಲ ವಿಧಿಯು ಮೈಗಳ್ಳ ನಾನು ಕೈಯ್ಯಲ್ಲಿ ಕಾಸು ఇల్ల

ನಡೆಯಲಾರೆ ಒಳಗಾಗಿ ಚರಣ ಕೈಬಿಟ್ಟು ಜಾರಿತಲ್ಲ

ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ

ಹುಟ್ಟಬಹುದಲಾ ಕೆಟ್ಟಮಗುವು  ಇರಲಾಸ ಕೆಟ್ಟ ತಾಯಿ||2||

 

ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |

ವಿರಲತರಲ ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ|

 ಬಿಡಬೇಡ ಕೈಯ ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।

ಕೆಟ್ಟ ಮಗುವು ಹೋ! ಹುಟ್ಟಬಹುದು ಇರಬಹುದೆ ಕೆಟ್ಟ ತಾಯಿ?||3||

 

ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ ।

ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ

ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ

ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ ಇವಳೆ ತಾಯೆ 4||

 

ಎಷ್ಟಂತ ಪೂಜೆ ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ

ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ|

 ಓ ತಾಯಿ ನಿನ್ನ ಕೃಪೆ ಸಾಕು ಉಳಿದವರು ಹಿಡಿಯಲೆನ್ನ ಬಿಡಲಿ

ಆಧಾರವಿರದೆ ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ||5||

 

ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ|

ಬಾಯಿಬಡಕ ನಾಯಡಗತಿಂಬ ಜನವಾಣಿ ಅಮೃತಧಾಮ|

 ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ

 ಜನನಿ ನಿನ್ನ ಜಪ ಮಹಿಮೆಯರಿಯದವ ಹೌದು ತೀರ ಬಡವll6||

 

ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ

ಜಡೆಯ ಕಟ್ಟಿ ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ

ತಲೆಯ ಬುರುಡೆ ಕೈಯಲ್ಲಿ  ಭೂತಗಣ ಸುತ್ತಿಕೊಂಡೆ ಇರುವ

ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||7||

 

ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ

ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ|

 ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ

 ಓ ಭವಾನಿ ರುದ್ರಾಣಿ ಶಿವೆಶಿವೇ ಎಂದು ಜಪಿಸುತಿರಲಿ||8||

 

ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ|

ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ|

ಓ ಶ್ಯಾಮೆ  ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ

 ಅದು ನಿನಗೆ ಸಹಜ ಇದು ನನಗೆ ಸಹಜ ಕರುಣೆಯನೆ ಬೇಡುತಿರುವೆ||9||

 

ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ

ಹೇ ದುರ್ಗೆ ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ

ಇದು ಢೋಂಗು ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।

ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?10||

 

ಜಗದಂಬೆ ಬೇರೆ ವೈಚಿತ್ರ್ಯ ಬೇಕೆ ಕರುಣೆಯಲಿ ಮಾಡು ಎಲ್ಲ

ಅಪರಾಧವೆಷ್ಟೆ ಮಾಡಿದರು ಮಗುವು  ತಾಯೇನೂ ಬಿಡುವದಿಲ್ಲ

ಪಾಪಘ್ನಿ ನಿನ್ನ ಸಮರಿಲ್ಲ ಪಾಪದಲಿ ನನಗೆ ಇಲ್ಲ ಜೋಡು |

ಮಹದೇವಿ ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು ||11||

 ...................................................................................................................


Sep 13, 2025

ಗಜವದನ ಬೇಡುವೆ GAJAVADANA BEDUVE SONG LYRICS IN KANNADA & ENGLISH | PURANDARA DASA| LORD GANESHA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಶ್ರೀ ಪುರಂದರದಾಸರು

ಗಜವದನ ಬೇಡುವೆ ಗೌರೀತನಯ

ತ್ರಿಜಗ ವಂದಿತನೆ ಸುಜನರ ಪೊರೆವನೆ॥

 

ಪಾಶಾಂಕುಶಧರ ಪರಮ ಪವಿತ್ರ

ಮೂಷಿಕವಾಹನ ಮುನಿಜನ ಪ್ರೇಮ॥೧॥

 

ಮೋದದಿ ನಿನ್ನಯ ಪಾದವ ತೋರೋ

ಸಾಧುವಂದಿತನೆ ಆದರದಿಂದಲಿ ೨॥

 

ಸರಸಿಜನಾಭ ಶ್ರೀ ಪುರಂದರ ವಿಟ್ಠಲನ

ನಿರುತ ನೆನೆಯುವಂತೆ ದಯ ಮಾಡೋ॥೩॥

.............................................................................................................

GAJAVADANA BEDUVE |GAURI TANAYA

TRIJAGA VANDITANE SUJANARA POREVANE||


PAASHAANKUSHADHARA PARAMA PAVITRA

MOOSHIKA VAAHANA MUNIJANA PREMA||1||


MODADI NINNAYA PAADAVA TORO

SAADHU VANDITANE AADARADINDALI ||2||


SARASIJA NAABHA SHREE PURANDARA VITTALANA 

NIRUTA NENEYUVANTE DAYAMAADO ||3||

................................................................................................................................................


Sep 6, 2025

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ SONG LYRICS |PURANDARA DASA SONGS| JNANAVANTARIGE VIDHI

 

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ ಅ-

ಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ॥

 

ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವುದಾಯ್ತು

ಇಂದ್ರನಿಗೆ ವಿಧಿ ಕಾಡಿ ಭಂಗಪಡಿ..ಸಿತು।

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ

ಚಂದದಲಿ ಪಾಂಡವರ ವನವಾಸ ಮಾಡಿಸಿತು

ಅಂದು ಸೀತೆಯನು ಲಂಕೆಯಲ್ಲಡಗಿಸಿತು॥1||

 

ಹಿಂದಕ್ಕೆ ಹರಿಶ್ಚಂದ್ರನ ಅರಣ್ಯವ ಸೇರಿಸಿತು

 ಮಡದ್ಯಾಗಿ ಕಾಡಿತೋ ಕರಿಬಂಟಗೆ।

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ಕುಂದದೀಶ್ವರನ ಸುಡುಗಾಡ ಸೇರಿಸಿತು

ಇನ್ನು ವಿಧಿಯನ್ನು ನೋಡುವ ನರರ ಪಾಡೇನು॥2||

 

ವಿಧಿ ಕಾಡೋ ಕಾಲಕ್ಕೆ ಇಲ್ಲದಪವಾದ ಬಂತು

ಕಲಿಸಿತೋ ಸುಳ್ಳು ಕಳವು ಹಾದರವ।

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥

ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ….

ವಿಧಿಯೊಳಗಾಗದಾ ನರರು ಮತ್ತಿಲ್ಲ

ವಿಧಿಯ ಗೆದ್ದನೊ ನಮ್ಮ ಪುರಂದರ ವಿಟ್ಟಲ॥3||

.......................................................................................................... 

 

 


Sep 4, 2025

ಬಸವಣ್ಣನವರ ವಚನ: ಎನ್ನ ನಡೆಯೊಂದು ಪರಿ |BASAVANNA VACANA - ENNA NADEYONDU PARI

 

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.

......................................................................................................................................

 ENNA NADEYONDU PARI ENNA NUDIYONDU PARI

ENNOLAGENOO SHUDDHAVILL NODAYYA

NUDIGE TAKKA NADEYA KANDEDE

KOODALA SANGAMA DEVANOLAGIPPANAYYAA

......................................................................................................................................

ಅಡವಿ ದೇವಿಯ ಕಾಡು ಜನಗಳ SONG LYRICS IN KANNADA |ADAVI DEVIYA KAADU JANAGALA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಡವಿ ದೇವಿಯ ಕಾಡು ಜನಗಳ ಹಾಡೂ ನಾಡಿನ ಜೀವ ತುಂಬಿದೆ

ಉವ್ವಾ ಉವ್ವಾ ಉವ್ವಾ ಉವ್ವಾ

ಅಡವಿ ದೇವಿಯ ಕಾಡು ಜನಗಳ ಹಾಡೂ ನಾಡಿನ ಜೀವ ತುಂಬಿದೆ

ಉವ್ವಾ ಉವ್ವಾ ಉವ್ವಾ ಉವ್ವಾ

ಕನ್ನಡಾ ನಾಡೇ ಮಧುಚಂದ್ರ ಕನ್ನಡಾ ನುಡಿಯೇ ಶ್ರೀ ಗಂಧ

 ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

 

ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು

 ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು

.... ...

ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು

ಏಳು ಕನ್ನೆರಿಂದ ಸೋಬಲಕ್ಕಿ ದೇವಿಗಿಡಲು

.... ...

ಚಿಗುರೊಡೆಯಿತು ಬೆಳಕರಳಿತು ಹೊಳೆ ತರಿಸಿತು ರಸತಾಣ

ಮನೆ ಮನೆಯಲು ಜನ ಮನದಲು ಶಿವನೊಲವಿನ ಶುಭಧ್ಯಾನ

ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ

ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ

 

ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

 

ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ

 ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದೂ ಇಲ್ಲ

.... ...

ನಮ್ಮ ಧರ್ಮದಲ್ಲಿ ಬೇಧಭಾವ ಕಾಣೋದಿಲ್ಲ

 ನಮ್ಮ ನೀತಿಯಲ್ಲಿ ಕಾಡೇ ಇಲ್ದೇ ನಾಡೇ ಇಲ್ಲ

.... ...

ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ

ಜನ ಬೆರೆತರೆ ಸಮರಸದಲಿಅದೆ ಒಲವಿನ ಹೊಸ ಗಾನ

ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ

ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ

ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||

................................................ 

Also See: