ಹಾಡಲು ಕಲಿಯಿರಿ(CLICK HERE TO LEARN THIS SONG)
ಅಡವಿ ದೇವಿಯ ಕಾಡು ಜನಗಳ ಈ ಹಾಡೂ ನಾಡಿನ ಜೀವ ತುಂಬಿದೆ
ಉವ್ವಾ ಉವ್ವಾ ಉವ್ವಾ ಉವ್ವಾ
ಅಡವಿ ದೇವಿಯ ಕಾಡು ಜನಗಳ ಈ ಹಾಡೂ ನಾಡಿನ ಜೀವ ತುಂಬಿದೆ
ಉವ್ವಾ ಉವ್ವಾ ಉವ್ವಾ ಉವ್ವಾ
ಕನ್ನಡಾ ನಾಡೇ ಮಧುಚಂದ್ರ ಕನ್ನಡಾ ನುಡಿಯೇ ಶ್ರೀ ಗಂಧ
ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||
ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆ ಕೊಟ್ಟು
ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು
ಓ ಓ ಓ ಓ ..ಓ.. ಓ ಓ ಓ ಓ ..ಓ.
ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು
ಏಳು ಕನ್ನೆರಿಂದ ಸೋಬಲಕ್ಕಿ ದೇವಿಗಿಡಲು
ಓ ಓ ಓ ಓ ..ಓ.. ಓ ಓ ಓ ಓ ..ಓ.
ಚಿಗುರೊಡೆಯಿತು ಬೆಳಕರಳಿತು ಹೊಳೆ ತರಿಸಿತು ರಸತಾಣ
ಮನೆ ಮನೆಯಲು ಜನ ಮನದಲು ಶಿವನೊಲವಿನ ಶುಭಧ್ಯಾನ
ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ
ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ
ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದೂ ಇಲ್ಲ
ಓ ಓ ಓ ಓ ..ಓ.. ಓ ಓ ಓ ಓ ..ಓ.
ನಮ್ಮ ಧರ್ಮದಲ್ಲಿ ಬೇಧಭಾವ ಕಾಣೋದಿಲ್ಲ
ನಮ್ಮ ನೀತಿಯಲ್ಲಿ ಕಾಡೇ ಇಲ್ದೇ ನಾಡೇ ಇಲ್ಲ
ಓ ಓ ಓ ಓ ..ಓ.. ಓ ಓ ಓ ಓ ..ಓ.
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ
ಜನ ಬೆರೆತರೆ ಸಮರಸದಲಿಅದೆ ಒಲವಿನ ಹೊಸ ಗಾನ
ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ
ಕನ್ನಡ ಜನರೇ ಚೆಂದ ಕನ್ನಡ ಮನವೇ ಅಂದ
ಉಸಿರು ನೀಡಿದೆ…. ಹಸಿರು ತೂಗಿದೆ…. ಮಧುರವಾಗಿದೆ….||
No comments:
Post a Comment