ನನ್ನದು ಈ ಕನ್ನಡನಾಡು ನನ್ನದು |ದ. ರಾ. ಬೇಂದ್ರೆ | song lyrics | NANNADU EE KANNADA NAADU SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ದ. ರಾ. ಬೇಂದ್ರೆ

 

ನನ್ನದು ಈ ಕನ್ನಡನಾಡು ನನ್ನದು

ಅವರಿವರದೆಂದು ಎಂದೂ ಎನ್ನದು

ಅದು ನನ್ನದೆಂದು ಹಾಗೇ ನಿನ್ನದು || ನನ್ನದು ಈ ಕನ್ನಡನಾಡು||

 

ಸರ್ವಾರ್ಥ ಸಿದ್ಧಿ ಕೇವಲದ ಬುದ್ದಿ

ಅಂತರ್ಯ ಶುದ್ದಿ ಮೈಗೂ ಮುಟ್ಟಿದೆ

ದಿಟವಾದ ನಿಕರ ತಪವಾಗಿ ಪ್ರಕರ

ಕೈಲಾಸ ಶಿಖರವನ್ನು ಮೆಟ್ಟಿದೆ || ನನ್ನದು ಈ ಕನ್ನಡನಾಡು||

 

ರಸದೊಳಗೆ ರಸವು ಹಲಬಣ್ಣ ಹೊಸವು

ಬೀಜವನೆ ತುಷವು ತಾಯಾಗಿ ಕಾಯ್ದಿದೆ

ಆತ್ರೇಯ ನೇತ್ರ ಚಾತುರ್ಯ ಸೂತ್ರ

ಘಟಪಟದ ಗಾತ್ರ ಹೊಳೆ ಸುಳಿಯನೈದಿರೆ || ನನ್ನದು ಈ ಕನ್ನಡನಾಡು||

 

ಇಂದಂದಿನದಲ್ಲಿ ಹಾಡು ನಾಡಿದೆ ನಾ ಕನ್ನಡ ನಾಡು

ಆ ಕನ್ನಡಾ ನಾಡು ನನ್ನದು ನನ್ನದು ಈ ಕನ್ನಡ ನಾಡು || ನನ್ನದು ಈ ಕನ್ನಡನಾಡು||

.................................................................................................. 

ಕನ್ನಡ ರಾಜ್ಯೋತ್ಸವ ಗೀತೆಗಳು

ಎಲ್ಲಾದರು ಇರು ಎಂತಾದರು ಇರು SONG LYRICS | ಕುವೆಂಪು | ELLADARU IRU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕುವೆಂಪು

 

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

 

ಕನ್ನಡ ಗೋವಿನ ಓ ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು

 ಕನ್ನಡವೇ ಸತ್ಯ ಕನ್ನಡವೇ ನಿತ್ಯ ||

 

ನೀ ಮೆಟ್ಟುವ ನೆಲ ಅದೇ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮುಟ್ಟುವ ಮರ ಶ್ರೀಗಂಧದ ಮರ

ನೀ ಕುಡಿಯುವ ನೀರ್ ಕಾವೇರಿ

ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

 

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಪೆಂಪಿನ ಬನವಾಸಿಗೆ ಕರಗುವ ಮನ

ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ

ಜೋಗದ ಜಲಪಾತದಿ ಧುಮುಕುವ ಮನ

ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।

 

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ,

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರಸರೋಮಂಚನಗೊಳುವ ಮನ

ಎಲ್ಲಿದ್ದರೆ ಏನ್? ಎಂತ್ತಿದ್ದರೆ ಏನ್?

ಎಂದೆಂದಿಗೂ ತಾನ್ -

ಕನ್ನಡವೇ ಸತ್ಯ

ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯಾ!

…………………………………………………………………………………..

ಕನ್ನಡದ ಮಾತು ಚೆನ್ನ | KANNADA RAJYOTHSAVA SONGS | KANNADA DA MAATHU CHENNA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ

 ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ

 ಕನ್ನಡಿಗರ ಮನಸ್ಸು ಚಿನ್ನ ||

 ಇಂತ ಭುವಿಯಲ್ಲಿ ನನ್ನ ಜನುಮ ದೊರಕಿದ್ದೇ ಪುಣ್ಯ

ತುಂಗೆ ಕಾವೇರಿ ನೀರ, ಕುಡಿವ ನಾವೆಲ್ಲ ಧನ್ಯಾ || ಕನ್ನಡದ ಮಾತು||


ಮಣ್ಣಿನ ಜನಸೇವೆಗೆ ದಿನವೆಲ್ಲ ಲಭಿಸಲಿ ಭಾಗ್ಯ
ನೊಂದೋರನು ಸಂತೈಸುವ ದಾರಿನ ಹಿಡಿದವ ಯೋಗ್ಯ
ಸೌಂದರ್ಯ ಇಲ್ಲಿದೆ, ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ನಾಡ ದೇವಿಯ ಆರಾಧನೆ ನನ್ನ ಪ್ರೀತಿ ಹಾಡು|| ಕನ್ನಡದ ಮಾತು||

ಒಂದೇ ಗಾಳಿ ಒಂದೇ ಭೂಮಿ ನಾವಣ್ಣ ತಮಂದಿರೆಲ್ಲ
ಹತ್ತಾರು ಕೈ ಒಂದಾದರೆ ನಮ್ಮನು ಗೆಲ್ಲೋರೆ ಇಲ್ಲ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ಮಭಿಮಾನ
ನಿಮ್ಮಾಶೀರ್ವಾದದ ಬಲದಿಂದ ನಾ ಪಡೆವೆ ಬಲು ದೊಡ್ಡ ಸ್ಥಾನ
ಹೇ ಹೇ

ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ

ಇಂತ ಭುವಿಯಲ್ಲಿ ನನ್ನ ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ || ಕನ್ನಡದ ಮಾತು||
.................................................................................................


ಕನ್ನಡ ನಾಡಿನ ವೀರರಮಣಿಯ | ದುರ್ಗವು ಮರೆಯದ ಓಬವ್ವ SONG LYRICS IN KANNADA | KANNADA NAADINA VEERA RAMANIYA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ

 ಚರಿತೆಯ ನಾನು ಹಾಡುವೆ ||

ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರ ನಾರಿಯ

 ಚರಿತೆಯ ನಾನು ಹಾಡುವೆ ||

 

 ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

 ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ

 ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ

 ಪುಣ್ಯ ಭೂಮಿಯು ಬೀಡು, ಸಿದ್ದರು ಹರಸಿಯ ಸಿರಿನಾಡು ||1||

 

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುದ್ದಕೆ ಬರಲು

ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು

ವೈರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ ||2||

 

ಗೂಡಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು

 ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು ||3||

 

ಹೆಣ್ಣು : ... ಸರದಾರ....

 

 ಕೈಗೆ ಸಿಕ್ಕಿದ ಒನಕೆ ಹಿಡಿದಳು, ವೀರ ಗಚ್ಚೆಯ ಹಾಕಿ ನಿಂತಳು

 ದುರ್ಗಿಯನ್ನು ಮನದಲ್ಲಿ ನೆನೆದಳು ಕಾಳಿಯಂತೆ ಬಲಿಗಾಗಿ ಕಾದಳು

 ಯಾರವಳು, ಯಾರವಳು, ವೀರ ವನಿತೆ ಓಬವ್ವ,…….

 ದುರ್ಗವು ಮರೆಯದ ಓಬವ್ವ ||4||

 

ತೆವಳುತ ಒಳಗೆ ಬರುತಿರೆ ವೈರಿ, ಒನಕೆಯ ಬೀಸಿ ಕೊಂದಳು ನಾರಿ

ಸತ್ತವನನ್ನು ಎಳೆದು ಹಾಕುತ ಮತ್ತೆ ನಿಂತಳು ಹಲ್ಲು ಮಸೆಯುತ್ತಾ

ವೈರಿ ರುಂಡ ಚೆಂಡಾಡಿದಳು ರಕ್ತದ ಕೋಡಿ ಹರಿಸಿದಳು ||5||

 

ಸತಿಯ ಹುಡುಕುತ ಕಾವಲಿನವನು, ಗುಪ್ತದ್ವಾರದ ಬಳಿಗೆ ಬಂದನು

ಮಾತು ಹೊರಡದೆ ಬೆಚ್ಚಿ ನಿಂತನು ಹೆಣದ ರಾಶಿಯ ಬಳಿಯ ಕಂಡನು

ರಣಚೆಂಡಿ ಅವತಾರವನು ಕೋಟೆ ಸಲುಹಿದ ತಾಯಿಯನು ||

 

 ಹೆಣ್ಣು : ಹೈದರಾಲಿ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ, ಹೋಗಿ ರಣಕಹಳೆಯನು ಊದಿ.

 

ರಣಕಹಳೆಯನು ಊದುತಲಿರಲು ಸಾಗರದಂತೆ ಸೈನ್ಯ ನುಗ್ಗಲು

 ವೈರಿ ಪಡೆಯು ನಿಷೇಶವಾಗಲು ಕಾಳಗದಲ್ಲಿ ಜಯವನು ತರಲು

 ಅಮರಳಾದಳು ಓಬವ್ವ, ಚಿತ್ರದುರ್ಗದ ಓಬವ್ವ||

.........................................................................................................................................................

ಎಚ್ಚರದಲಿ ನಡೆ ಮನವೇ SONG LYRICS IN KANNADA |ECCHARADALI NADE MANAVE | PURANDARA DASA SONGS LYRICS|

 

ಎಚ್ಚರದಲಿ ನಡೆ ಮನವೇ

ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ


ಅನ್ನದಾನವ ಮಾಡೋದಿಲ್ಲಿ  ಮೃ |

ಷ್ಟಾನ್ನವ ತಂದು ಮುಂದಿಡುವರು ಅಲ್ಲಿ||

ಅನ್ಯಾಯ ಮಾಡುವುದಿಲ್ಲಿ ನಿನ್ನ |

ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ||


ಧರ್ಮವ ಮಾಡುವುದಿಲ್ಲಿ ಸು |

ಧರ್ಮ ಸಭೆಯ ತೋರುವರು ಮುಂದಲ್ಲಿ ||

ಕರ್ಮ ಯೋಚನೆಗಳು ಇಲ್ಲಿ ನಿನಗೆ| 

ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||||


ಹೆಣ್ಣು ಹೊನ್ನನು ಬಯಸೋದಿಲ್ಲಿ ನಿನ್ನ |

ಕಣ್ಣಿಗೆ ಸುಣ್ಣವ ತುಂಬುವರಲ್ಲಿ || 

ಘನ ಸುಜ್ನಾನವು ಇಲ್ಲಿ ಪ್ರ |

ಸನ್ನ ಪುರಂದರ ವಿಠಲ ಪಾಲಿಪನಲ್ಲಿ |||

........................................................................................................................

ಗೋವಿಂದ ನಿನ್ನ ನಾಮವೇ ಚೆಂದ SONG LYRICS | PURANDARA DASA SONGS| GOVINDA NINNA NAAMAVE CHENDA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಗೋವಿಂದ ನಿನ್ನ ನಾಮವೇ ಚೆಂದ ಗೋವಿಂದ ನಿನ್ನ ನಾಮವೇ ಅಂದ


ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ 

ನಿರ್ಮಲಾತ್ಮಕನಾಗಿ ಇರುವುದೇ ಆನಂದ            || ೧ ||


ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ 

ಈ ಪರಿ ಮಹಿಮೆಯ ತಿಳಿಯುವುದಾನಂದ         || ೨ ||


ಪರಮ ಪುರುಷ ಶ್ರೀ ಪುರಂದರ ವಿಠಲನ 

ಇಂತಹ ದಾಸನ  ನೆನೆವುದೇ ಆನಂದ             || ೩ ||      

..........................................................................................................................................

ಯಾದವ ನೀ ಬಾ ಯದುಕುಲ ನಂದನ | YAADAVA NEE BAA SONG LYRICS IN KANNADA | LORD VISHNU SONG |

 ಹಾಡಲು ಕಲಿಯಿರಿ(CLICK HERE TO LEARN THIS SONG)

ಯಾದವ ನೀ ಬಾ ಯದುಕುಲ ನಂದನ

ಮಾಧವ ಮಧುಸೂದನ ಬಾರೋ |

ಸೋದರಮಾವನ ಮಧುರೆಲಿ ಮಡುಹಿದ

ಯಶೋದೆ ಕಂದ ನೀ ಬಾರೋ ||

 

ಕಣ ಕಾಲಂದಿಗೆ ಘುಲುಘುಲು ಎನುತಲಿ

ಝಣ ಝಣ ಎನುತಿಹ ನಾದಗಳು|

ಚಿಣಿಕೋಲು ಚೆಂಡು ಬುಗುರಿಯನಾಡುತ

ಸಣ್ಣವರೊಡಗೂಡಿ ನೀ ಬಾರೋ |1||

 

ಶಂಖ ಚಕ್ರವು ಕೈಯಲ್ಲಿ ಹೊಳೆಯುತ

ಬಿಂಕದ ಗೋವಳ ನೀ ಬಾರೋ |

ಅಕಳಂಕ ಮಹಿಮನೆ ಆದಿನಾರಾಯಣ

ಬೇಕೆಂಬ ಭಕುತರ ಬಳಿ ಬಾರೋ ||2||

 

ಖಗವಾಹನನೇ ಬಗೆಬಗೆರೂಪನೆ

ನಗೆಮೊಗದರಸನೆ ನೀ ಬಾರೋ |

ಜಗದೊಳು ನಿನ್ನಯ ಮಹಿಮೆಯ ಪೊಗಳುವೆ

ಪುರಂದರ ವಿಠ್ಠಲ ನೀ ಬಾರೋ ||3||

..................................................................................................


INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...