ಶರಣು ಶಂಕರ ಗುರುವರೇಣ್ಯನೆ SONG LYRICS | SHARANU SHANKARA GURUVARENYANE | ಶಂಕರಾಚಾರ್ಯ SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಶರಣು ಶಂಕರ ಗುರುವರೇಣ್ಯನೆ ಶರಣು ಶಮಿಜನಮಾನ್ಯನೆ

 ಶರಣು ಶರಣರ ಶೋಕಮೋಹಗಳುರಿಗೆ ನೆರೆ ಪರ್ಜನ್ಯನೆ    ||  

ಶರಣು ಶಿವಗುರು ಭಾಗಧೇಯನೆ ಶರಣು ಸತ್ಯಧ್ಯೇಯನೇ

ಶರಣು ಗುರುಗೋವಿಂದರೊಲುಮೆಯ ಪರಮಹಂಸರ ರಾಯನೇ

ಶರಣು ವೇದಾಂತಾಂತರಂಗನೆ ಶರಣು ಸಂಶಯ ಭಂಗನೇ

ಶರಣು ಶುದ್ಧ ಅದ್ವೈತ ಗಂಗೆಯ ಸಿರಿಯ ಭಾಷ್ಯ ತರಂಗನೇ ||1||

 

ಶರಣು ಪರಮತ ಭೇದ ದಕ್ಷನೆ ಶರಣು ವೈದಿಕ ಪಕ್ಷನೇ

ಶರಣು ಕರುಣಾಮೃತದ ಕಿರಣಗಳೆರಚುತಿಹ ಸುಕಟಾಕ್ಷನೆ

ಶರಣು ಶಾತಿತ ಸರ್ವಕಾಮನೆ ಶರಣು ಸ್ವಾತ್ಮಾರಾಮನೇ

ಶರಣು ಸಚ್ಚಿದಾನಂದ ಧಾಮನೆ ಶರಣು ಶಂಕರ ನಾಮನೇ ||2||

………………………………………………………………………………………..

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ SONG LYRICS | ಕನಕದಾಸರು |BAGILANU TEREDU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕನಕದಾಸರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ||1||

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ ||2||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ||3||
.........................................................................................................


ನೀರ ತೊರೆದ ಮೀನಿನಂತೆ SONG LYRICS | NEERA TOREDA MEENINANTHE SONG LYRICS | KANNADA BHAVAGEETHE LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ರವಿ ಶಿವರಾಯಗೊಳ

                            ನೀರ ತೊರೆದ ಮೀನಿನಂತೆ ನರಳಬೇಡ ಬಾಳೆ

 ಒಲವ ಮಳೆಯ ಆಸೆಯಲ್ಲಿ ಬದುಕಬೇಕು ನಾಳೆ

 

ನೂರು ಕನಸು ಹೊತ್ತ ಮನಸು ತುಡಿಯುತಿರಲಿ ನನಸಿಗೆ

ಆಸೆ ಮರೆತು ಸೋತ ಬದುಕು ತೊರೆಯದಿರಲಿ ನಂಬಿಗೆ

ನಿತ್ಯ ಜ್ಯೋತಿ ಬೆಳಗುತಿರಲಿ ಆತ್ಮ ಶುದ್ದ ಬಾಳಿಗೆ

ನಡುಗದಿರಲಿ ನಂದದಿರಲಿ ಸೋಲು ಎಂಬ ಗಾಳಿಗೆ ||1||

 

ದೂರ ತೀರ ಪಯಣವಿದು ದಣಿಯದಿರಲಿ ಕಾಲು

ಸೋಲು ಗೆಲುವು ಸಹಜವಿಲ್ಲಿ ಸ್ವೀಕರಿಸು ಪಾಲು

ಮೂರು ದಿನದ ಸಂತೆಯೊಳಗೆ ಜಾರದಿರಲಿ ಹೃದಯ

ಜಾತ್ರೆ ಮುಗಿದ ಬಯಲಿನೊಳಗೆ ಏಕಾಂತವೆ ಗೆಳೆಯಾ ||2||

..........................................................................................................................................................

ನೀಲ ನಭಕೆ ನೂಲ ಏಣಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ SONG LYRICS | ONDU MUNJAVINALI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಚನ್ನವೀರಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು

ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ

ತೆಂಗು ಗರಿಗಳ ನಡುವೆ ನುಸುಳುತಿತ್ತು ||

 

 ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ

 ಹೂ ಮುಡಿದು ಮಧು ಮಗಳ ಹೋಲುತಿತ್ತು

 ಮೂಡಣದಿ ನೇಸರನ ನಗೆಮೊಗದ ಶ್ರೀ ಕಾಂತಿ

 ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು||1||

 

 ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು

 ಸೊಡರಿನಲಿ ಆರತಿಯ ಬೆಳಗುತಿತ್ತು

 ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

 ಶುಭಮಸ್ತು ಶುಭಮಸ್ತು ಎನ್ನುತಿತ್ತು||2||

 

 ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ

 ದುಂಬಿಗಳ ಓಂಕಾರ ಹೊಮ್ಮುತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ

ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು||3||

 

 ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ

 ಮರದ ಹನಿ ತಟ ಪಟನೆ ಉದು ರುತಿತ್ತು

 ಸೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ

 ಹೊಸಬಾಳ ಸವಿಗನಸು ನೆನೆಯುತಿತ್ತು||4||

.......................................................................................................................................................

ನೀಲ ನಭಕೆ ನೂಲ ಏಣಿ SONG LYRICS | NEELA NABHAKE NOOLA ENI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬಾಗೂರು ಮಾರ್ಕಾಂಡೇಯ

ನೀಲ ನಭಕೆ ನೂಲ ಏಣಿ ಕಣ್ಣಂಚಲಿ ಬಿಗಿದೆಯಾ

ನೀಲ ಮೇಘ ಶಾಮನನ್ನು ಮಧುಮಂಚಕೆ ಕರೆದೆಯಾ ||

 

ಬರುವನೆಂಬ ಯಾವ ಸುಳಿವು ತೇಲಿಸಿದೆ ರಾಧೆಯ

ಕಂಪೊಡಲಿನ ಮಧುರ ಮಾತು ತಂದಿತೇನೋ ಸುದ್ಧಿಯಾ||1||

 

ಚೈತ್ರನೊಲುಮೆ ಸ್ವರದ ಸಾಲು ಕುಹೂ ಕುಹೂ ಎಂದಿದೆ

ಎತ್ತ ನೋಡಲು ಸೊಬಗಿನೊಡಲು ಚಿತ್ರವಾಗಿ ಮೂಡಿದೆ ||2||

 

ಕಾಣುವೆದೆಗೆ ಮುದವ ಸುರಿದು ಪ್ರಣಯ ಗೀತೆ ಸೃಜಿಸಿದೆ

ಸುತ್ತ ಭಾವ ಸೆರೆಯ ಬಿಗಿದು ಶಾಮನೆದೆಯಲಿ ಹುದುಗಿದೆ ||3||

..................................................................................................................................................................


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ SONG LYRICS | SADA ENNA HRADAYADALLI SONG LYRICS |

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ : ವಿಜಯದಾಸರು

ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ
ನಾದ ಮೂರ್ತಿ ನಿನ್ನ ಚರಣ, ಮೋದದಿಂದ ಭಜಿಸುವೆನೋ ||

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ||1||

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದೀ
ಮುಕ್ತನಾಗಬೇಕು ಎಂದುಮುತ್ತಿನ ಆರತಿ ಎತ್ತುವೇನೋ||2||

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ||3||

.............................................................................................................................................................

ಹೊನ್ನು ತಾ ಗುಬ್ಬಿ

ಅಂತರಂಗದ ಮೃದಂಗ ಅಂತು ತೊಂ ತನಾನ |ANTHARANGA DA MRADANGA SONG LYRICS |DA RA BENDRE SONGS

 

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ ತಾನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||
.....................................................................................................


ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...