ಹದಿನಾಲ್ಕು ವರ್ಷ ವನವಾಸದಿಂದ SONG LYRICS IN KANNADA | ಶರಪಂಜರ MOVIE SONG | HADINALKU VARUSH VANAVASA SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ.ಸುಶೀಲ

ಹದಿನಾಲ್ಕು ವರ್ಷ ವನವಾಸದಿಂದ
 ಮರಳಿ ಬಂದಳು ಸೀತೇ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
 ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.||

ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ
 ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...
ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
 ನ್ಯಾಯವಾದಿ ರಾಮಾ...||1||

ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..
ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
 ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ.....||2||
..........................................


No comments:

Post a Comment

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು SONG LYRICS | NINNOLUMEYINDALE BAALU SONG LYRICS | ರಚನೆ: ಕೆ ಎಸ್ ನರಸಿಂಹಸ್ವಾಮಿ

ಹಾಡಲು ಕಲಿಯಿರಿ(CLICK HERE TO LEARN THIS SONG)   ರಚನೆ: ಕೆ ಎಸ್ ನರಸಿಂಹಸ್ವಾಮಿ   ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೇ? ನ...