INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE 

पतङ्ग: = ಚಿಟ್ಟೆ (ಹಾರಾಡುವ ಕೀಟ) (fly)

चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly)

पुत्तिका / मत्कोटक: = ಗೆದ್ದಲು (termite)

तृणजलायुका = ಕ೦ಬಳಿಹುಳು (caterpillar)

शलभ: = ಮಿಡತೆ (grasshopper)

वृश्चिक: = ಚೇಳು (scorpion)

पिपीलिका = ಇರುವೆ (Ant)

लूता/ऊर्णनाभ: = ಜೇಡ (spider)

तैलप: = ಜಿರಳೆ (Cockroach)

शतपदी = ಲಕ್ಷ್ಮಿಚೇಳು ( Centipede)

मक्षिका = ನೊಣ (house fly)

मधुमक्षिका = ಜೇನುನೊಣ (HoneyBee)

स्वज्योति: / अग्निमाक्षिका /खद्योत: = ಮಿಂಚುಹುಳು  (firefly)

मशक: = ಸೊಳ್ಳೆ (Mosquito)

वरटा = ಕಣಜದ ಹುಳ (wasp)

यूका = ಹೇನು (louse)

मत्कुण: = ತಿಗಣೆ (Bedbug)

भ्रमर: = ದುಂಬಿ (Bee)

जलूका / जलायुका = ಜಿಗಣೆ (Leech)

कीट: = ಹುಳ (insect)

झिरिका = ಜೀರುಂಡೆ (Beetle)

कुलीर: / कर्कटक:  =  ಏಡಿ (Crab)

शम्बूक: = ಬಸವನ ಹುಳ (Snail)

किञ्चुलुक: = ಎರೆಹುಳು (earthworm)

गृहगोधिका =  ಹಲ್ಲಿ (Lizard)

सरट: = ಊಸರವಳ್ಳಿ (chameleon)

 .............................................................................................................

 FLOWER NAMES IN SANSKRIT

 

 

 


ತಲ್ಲಣಿಸದಿರು ಕಂಡ್ಯ ತಾಳು ಮನವೇ SONG LYRICS | TALLAnISADIRU KANDYA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯಬೇಡ ||

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ  ಸಂಶಯಬೇಡ||1||

ಕಲ್ಲೊಳಗೆ  ಹುಟ್ಟಿರುವ ಕ್ರಿಮಿ ಕೀಟಗಳಿಗೆಲ್ಲ
ಅಲ್ಲಲ್ಲಿಗಾಹಾರ ಇತ್ತವರು ಯಾರೋ
ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯಬೇಡ||2||
......................................................................................


ಶರಣು ಶಂಕರ ಗುರುವರೇಣ್ಯನೆ SONG LYRICS | SHARANU SHANKARA GURUVARENYANE | ಶಂಕರಾಚಾರ್ಯ SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಶರಣು ಶಂಕರ ಗುರುವರೇಣ್ಯನೆ ಶರಣು ಶಮಿಜನಮಾನ್ಯನೆ

 ಶರಣು ಶರಣರ ಶೋಕಮೋಹಗಳುರಿಗೆ ನೆರೆ ಪರ್ಜನ್ಯನೆ    ||  

ಶರಣು ಶಿವಗುರು ಭಾಗಧೇಯನೆ ಶರಣು ಸತ್ಯಧ್ಯೇಯನೇ

ಶರಣು ಗುರುಗೋವಿಂದರೊಲುಮೆಯ ಪರಮಹಂಸರ ರಾಯನೇ

ಶರಣು ವೇದಾಂತಾಂತರಂಗನೆ ಶರಣು ಸಂಶಯ ಭಂಗನೇ

ಶರಣು ಶುದ್ಧ ಅದ್ವೈತ ಗಂಗೆಯ ಸಿರಿಯ ಭಾಷ್ಯ ತರಂಗನೇ ||1||

 

ಶರಣು ಪರಮತ ಭೇದ ದಕ್ಷನೆ ಶರಣು ವೈದಿಕ ಪಕ್ಷನೇ

ಶರಣು ಕರುಣಾಮೃತದ ಕಿರಣಗಳೆರಚುತಿಹ ಸುಕಟಾಕ್ಷನೆ

ಶರಣು ಶಾತಿತ ಸರ್ವಕಾಮನೆ ಶರಣು ಸ್ವಾತ್ಮಾರಾಮನೇ

ಶರಣು ಸಚ್ಚಿದಾನಂದ ಧಾಮನೆ ಶರಣು ಶಂಕರ ನಾಮನೇ ||2||

………………………………………………………………………………………..

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ SONG LYRICS | ಕನಕದಾಸರು |BAGILANU TEREDU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕನಕದಾಸರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ||1||

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ ||2||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ||3||
.........................................................................................................


ನೀರ ತೊರೆದ ಮೀನಿನಂತೆ SONG LYRICS | NEERA TOREDA MEENINANTHE SONG LYRICS | KANNADA BHAVAGEETHE LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ರವಿ ಶಿವರಾಯಗೊಳ

                            ನೀರ ತೊರೆದ ಮೀನಿನಂತೆ ನರಳಬೇಡ ಬಾಳೆ

 ಒಲವ ಮಳೆಯ ಆಸೆಯಲ್ಲಿ ಬದುಕಬೇಕು ನಾಳೆ

 

ನೂರು ಕನಸು ಹೊತ್ತ ಮನಸು ತುಡಿಯುತಿರಲಿ ನನಸಿಗೆ

ಆಸೆ ಮರೆತು ಸೋತ ಬದುಕು ತೊರೆಯದಿರಲಿ ನಂಬಿಗೆ

ನಿತ್ಯ ಜ್ಯೋತಿ ಬೆಳಗುತಿರಲಿ ಆತ್ಮ ಶುದ್ದ ಬಾಳಿಗೆ

ನಡುಗದಿರಲಿ ನಂದದಿರಲಿ ಸೋಲು ಎಂಬ ಗಾಳಿಗೆ ||1||

 

ದೂರ ತೀರ ಪಯಣವಿದು ದಣಿಯದಿರಲಿ ಕಾಲು

ಸೋಲು ಗೆಲುವು ಸಹಜವಿಲ್ಲಿ ಸ್ವೀಕರಿಸು ಪಾಲು

ಮೂರು ದಿನದ ಸಂತೆಯೊಳಗೆ ಜಾರದಿರಲಿ ಹೃದಯ

ಜಾತ್ರೆ ಮುಗಿದ ಬಯಲಿನೊಳಗೆ ಏಕಾಂತವೆ ಗೆಳೆಯಾ ||2||

..........................................................................................................................................................

ನೀಲ ನಭಕೆ ನೂಲ ಏಣಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ SONG LYRICS | ONDU MUNJAVINALI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಚನ್ನವೀರಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು

ಅದಕೆ ಹಿಮ್ಮೇಳವನೆ ಸೂಸಿಪಹ ಸುಳಿ ಗಾಳಿ

ತೆಂಗು ಗರಿಗಳ ನಡುವೆ ನುಸುಳುತಿತ್ತು ||

 

 ಎಳೆವೆಣ್ಣು ಮೈದೊಳೆದು ಮಕರಂದ ಅರಿಶಿನದಿ

 ಹೂ ಮುಡಿದು ಮಧು ಮಗಳ ಹೋಲುತಿತ್ತು

 ಮೂಡಣದಿ ನೇಸರನ ನಗೆಮೊಗದ ಶ್ರೀ ಕಾಂತಿ

 ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು||1||

 

 ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು

 ಸೊಡರಿನಲಿ ಆರತಿಯ ಬೆಳಗುತಿತ್ತು

 ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ

 ಶುಭಮಸ್ತು ಶುಭಮಸ್ತು ಎನ್ನುತಿತ್ತು||2||

 

 ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ

 ದುಂಬಿಗಳ ಓಂಕಾರ ಹೊಮ್ಮುತಿತ್ತು

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂದಳದಿ

ಚಿಟ್ಟೆ ವೆಂಗಣ ಕುಣಿತ ಹಾಕುತಿತ್ತು||3||

 

 ಉಷೆಯ ನುಂಗದಿಬೆದಲಿ ಹರ್ಷ ಪಾರ್ಶ್ವಗಳಂತೆ

 ಮರದ ಹನಿ ತಟ ಪಟನೆ ಉದು ರುತಿತ್ತು

 ಸೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ

 ಹೊಸಬಾಳ ಸವಿಗನಸು ನೆನೆಯುತಿತ್ತು||4||

.......................................................................................................................................................

ನೀಲ ನಭಕೆ ನೂಲ ಏಣಿ SONG LYRICS | NEELA NABHAKE NOOLA ENI SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಬಾಗೂರು ಮಾರ್ಕಾಂಡೇಯ

ನೀಲ ನಭಕೆ ನೂಲ ಏಣಿ ಕಣ್ಣಂಚಲಿ ಬಿಗಿದೆಯಾ

ನೀಲ ಮೇಘ ಶಾಮನನ್ನು ಮಧುಮಂಚಕೆ ಕರೆದೆಯಾ ||

 

ಬರುವನೆಂಬ ಯಾವ ಸುಳಿವು ತೇಲಿಸಿದೆ ರಾಧೆಯ

ಕಂಪೊಡಲಿನ ಮಧುರ ಮಾತು ತಂದಿತೇನೋ ಸುದ್ಧಿಯಾ||1||

 

ಚೈತ್ರನೊಲುಮೆ ಸ್ವರದ ಸಾಲು ಕುಹೂ ಕುಹೂ ಎಂದಿದೆ

ಎತ್ತ ನೋಡಲು ಸೊಬಗಿನೊಡಲು ಚಿತ್ರವಾಗಿ ಮೂಡಿದೆ ||2||

 

ಕಾಣುವೆದೆಗೆ ಮುದವ ಸುರಿದು ಪ್ರಣಯ ಗೀತೆ ಸೃಜಿಸಿದೆ

ಸುತ್ತ ಭಾವ ಸೆರೆಯ ಬಿಗಿದು ಶಾಮನೆದೆಯಲಿ ಹುದುಗಿದೆ ||3||

..................................................................................................................................................................


INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...