ವಿಶ್ವವಿನೂತನ ವಿಜಯ ಪತಾಕೆ SONG LYRICS |PATRIOTIC SONGS LYRICS | VISHWA VINOOTHANA VIJAYA PATAKE SONG LYRICS

 

ರಾಗ : ಮಾಯಾಮಾಳವಗೌಳ


ವಿಶ್ವವಿನೂತನ ವಿಜಯ ಪತಾಕೆ

ಹಿಮಗಿರಿ ಶಿಖರದಿ ನೆಟ್ಟವಳೇ

ನೇಹದ ನೂಪುರ ಹಿತ ಕಾಲುಂಗುರ

ಸೌಹಾರ್ದದ ಬಳೆ ತೊಟ್ಟವಳೆ

|| ರಿ ನಿ ಸ।ಸ॥

||ದನಿಸರಿ ಸನಿದಪ ಸನಿದಪ ಮಗರಿಸ।।

 

ಸತ್ಯ ಅಹಿಂಸಾ ಬೆಂಡೋಲೆಯ ಜೊತೆ

ಸಂಯಮಶೀಲವನುಟ್ಟವಳೆ

ಮಾನವ ಹೃದಯದಿ ಮಮತೆಯ ಬಿತ್ತುತ

ಅಮೃತೋಪಮ ಫಲ ಕೊಟ್ಟವಳೇ 1 ||

 

ಜಯ ಜಗದೀಶ್ವರಿ ಜಯ ರಾಜೆಶ್ವರಿ

ಜಯನುತ ಚಾರಿಣಿ ದಿವ್ಯನುತೆ।

ಸ್ವಾತಂತ್ರ್ಯೋದಯ ಪ್ರಥಮ ಪ್ರಭಾತದಿ

ಜಯ ಜಯ ಜಯ ಹೇ ಭಾರತ ಮಾತಾ॥2

........................................................................................................................

ದೇವೀ ಲಕ್ಷ್ಮೀ ಮಾಂ ಪಾಹಿ SONG LYRICS | LORD LAKSHMI SONG LYRICS | DEVI LAKSHMI MAAM PAHI |

CLICK HERE TO LEARN THIS SONG 

ದೇವೀ ಲಕ್ಷ್ಮೀ ಮಾಂ ಪಾಹಿ

ದೀನ ದಯಾಪರಿ ಮಾಂ ಪಾಹಿ।

ಕ್ಷೀರಾಭ್ದಿ ತನಯೆ ಮಾಂ ಪಾಹಿ 

ಸರ್ವಮಂಗಲೇ ಮಾಂ ಪಾಹಿ

ವಿಷ್ಣು ವಿಲೋಲೆ ಮಾಂ ಪಾಹಿ 

ಸರಸಿಜ ನಯನೇ ಮಾಂ  ಪಾಹಿ॥


Devi Lakshmi Maam pahi Deena dayapari Maam pahi Ksheerabdhi tanaye mam pahi Sarva Magale Maam pahi Vishnu vilole maam pahi sarasija nayane maam pahi

.......................................................................

ಯಾಕೆ ನಿರ್ದಯನಾದೆ ಎಲೊ ದೇವನೆ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು SONG LYRICS | NINNOLUMEYINDALE BAALU SONG LYRICS | ರಚನೆ: ಕೆ ಎಸ್ ನರಸಿಂಹಸ್ವಾಮಿ

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ: ಕೆ ಎಸ್ ನರಸಿಂಹಸ್ವಾಮಿ 

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ? ||

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ ಕೈಗೊಳುವ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ ||1||

ನಿನ್ನಕಿರುನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ ||2||
....................................

ಹದಿನಾಲ್ಕು ವರ್ಷ ವನವಾಸದಿಂದ SONG LYRICS IN KANNADA | ಶರಪಂಜರ MOVIE SONG | HADINALKU VARUSH VANAVASA SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ.ಸುಶೀಲ

ಹದಿನಾಲ್ಕು ವರ್ಷ ವನವಾಸದಿಂದ
 ಮರಳಿ ಬಂದಳು ಸೀತೇ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
 ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.||

ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ
 ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...
ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
 ನ್ಯಾಯವಾದಿ ರಾಮಾ...||1||

ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..
ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
 ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ.....||2||
..........................................


ಯಾರೇ ನೀನು ಚೆಲುವೆ SONG LYRICS | ನಾನು ನನ್ನ ಹೆಂಡ್ತಿ MOVIE SONG LYRICS | RAVICHANDRAN SONGS LYRICS

ಹಾಡಲು ಕಲಿಯಿರಿ(CLICK HERE TO LEARN THIS SONG) 

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ
ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||

ಮು೦ಜಾನೆ ಹೊತ್ತೀನಲಿ ನಮ್ಮೂರಿನ ದಿಬ್ಬದಲಿ

ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಬ೦ಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೆ
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ಎಲ್ಲಿ೦ದಲೋ ನೀನು ಬ೦ದೆ, ಸೂರ್ಯನ ಮರೆಮಾಡಿ ನಿ೦ದೆ.
ದಾಳಿ೦ಬೆ ಹಣ್ಣ೦ತೆ ನೀನು ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೆ ನಾಚಿಕೊ೦ಡಾನು
ಯಾರೇ ಯಾರೇ ಯಾರೇ

ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||1||

ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ ಬೆಳದಿ೦ಗಳ ಬೆಳಕಿನಲಿ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಚ೦ದ್ರನ ಮೇಲೊ೦ದು ಕಾವ್ಯವ ಕಟ್ಟಲು ಏಕಾ೦ತದಲ್ಲಿದ್ದೆ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ ಚ೦ದ್ರನಿಲ್ಲ ಬಾನಿನಲ್ಲಿ
ನೀನೆ ನಿ೦ತಿದ್ದೆ ಅಲ್ಲಿ ಹಾಲಿನ೦ತ ನಗುವನ್ನು ಚೆಲ್ಲಿ
ಚ೦ದ್ರನಿಲ್ಲ ಬಾನಿನಲ್ಲಿ ನೀನಿದ್ದೆ ನನ್ನ ಕಾವ್ಯದಲ್ಲಿ
ಯಾರೇ ಯಾರೇ ಯಾರೇ

ನಿನ್ನಷ್ಟಕ್ಕೆ ನೀನೆ ಏಕೆ ನಗುವೆ ||2||
...........................................

ನಾರಾಯಣನೆಂಬ ನಾಮವೇ ಮೂಲಮಂತ್ರ SONG LYRICS | VADIRAJA SONGS | NARAYANANEMBA NAMAVE SONG LYRICS

CLICK HERE TO LEARN THIS SONG 

ನಾರಾಯಣನೆಂಬ ನಾಮವೇ ಮೂಲಮಂತ್ರ

ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ||


ಆರ ಬಿಡುವೆನು ಮತ್ತಾರ ಕೂಡುವೆನು

ಆರಾರಿಗೊಡಲನೀವೆ

ಆರಂಘ್ರಿಗೆರಗುವೆ ಆರಾರ ಮನ್ನಿಸುವೆ

ಆರಿಂದ ಉದರ ಪೂರ್ತಿ ||1||


ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆ

ಹಬ್ಬವಾವನ ಕಂಡರೆ

ಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆ

ಅಭ್ಯಕ್ಷ ಹಯವದನ ||2||

....................................................................

ಜೈ ಜೈ ಹನುಮಾನ್ ಜಯ ಹನುಮಾನ್

ಶ್ರೀ ವಿಘ್ನೇಶ್ವರ ವಿನಾಯಕ SONG LYRICS | LORD GANAPATI SONG LYRICS | SHRI VIGNESHWARA VINAYAKA SONG LYRICS IN KANNADA

CLICK HERE TO LEARN THIS SONG 

ಶ್ರೀ ವಿಘ್ನೇಶ್ವರ ವಿನಾಯಕ

ವರ ಪ್ರಸಾದಿಸೋ ಗಜಾನನ ॥


ಸುಮುಖನೆ ಹೇ ರಂಬ ಏಕದಂತನೇ

ಸುರಮುನಿ ವಂದಿತನೆ ಗಜಕರ್ಣನೇ

ಧೂಮ್ರಕೇತು ಗಣನಾಯಕ ಗಜಮುಖ

ಲೋಕಪಾಲಕಾ ತಂದೇ ಗಣಪತಿ ॥೧॥


ಭಾದ್ರಪದ ಶುಕ್ಲಚೌತಿ ನಿನ್ನ ಪೂಜಿಸಿ

ಭಕ್ತಗೆ ನೀಡುವೆ ನೀ ಸರ್ವಮಂಗಳಾ

ಭಾಗ್ಯದಾತ ಜಗವಂದಿತ ಗಣಪತಿ

ಬಾಳ ಬೆಳಗು ನೀಡು ಬಾರೊ ಸನ್ಮತಿ॥೨॥

..................................................................

ಯಾಕೆ ನಿರ್ದಯನಾದೆ ಎಲೋ ದೇವನೇ SONG LYRICS | PURANDARA DASA SONG LYRICS| YAKE NIRDAYANAADEYO |

CLICK HERE TO LEARN THIS SONG 

ಯಾಕೆ ನಿರ್ದಯನಾದೆ ಎಲೋ ದೇವನೇ

ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ॥


ಕಂಗೆಟ್ಟು ಕಂಬದಲಿ  ಒಡೆದು ಬಳಲಿ ಬಂದು 

ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ ।

ಮಂಗಳಾ ಪದವಿತ್ತು ಮನ್ನಿಸಿದೆ ಅವ ನಿನಗೆ

ಬಂಗಾರವೆಷ್ಟು ಕೊಟ್ಟನೋ ಪೇಳೋ ಹರಿಯೆ ॥೧॥


ಸಿರಿದೇವಿಗ್ ಹೇಳದೇ ಸೆರಗು ಸಂವರಿಸಿದೆ

ಗರುಡನ ಮೇಲೆ ಗಮನವ ಮಾಡಿದೆ

ಭರದಿಂದ ನೀ ಬಂದು ಕರಿಯನುದ್ದರಿಸಿದೆ

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ॥೨॥


ಅಜಮಿಳನು ಅಣ್ಣನೆ ವಿಬೀಷಣನು ತಮ್ಮನೇ 

ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ ।

ಭಜನೆಗವರೇ ಹಿತರೇ ನಾ ನಿನಗೆ ಅನ್ಯನೇ

ತ್ರಿಜಗ ಪತಿ ಸಲಹಯ್ಯ ಪುರಂದರ ವಿಠಲ ॥೩॥

......................................................................................


ವಂದಿಸುವುದಾದಿಯಲಿ ಗಣನಾಥನ SONG LYRICS | PURANDARA DASA SONGS | VANDISUVUDADIYALI SONG LYRICS |

 

CLICK HERE TO LEARN THIS SONG

ವಂದಿಸುವುದಾದಿಯಲಿ ಗಣನಾಥನ |

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟು ||


ಹಿಂದೆ ರಾವಣ ತಾನು ವಂದಿಸದೆ ಗಜಮುಖನ

ನಿಂದು ತಪವನು ಗೈದು ವರ ಪಡೆಯಲು

ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ

ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧||


ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ

ಮುಂದೆ ಗಣಪನ ಪೂಜಿಸೆಂದು ಪೇಳೆ

ಒಂದೇ ಮನದಲಿ ಬಂದು ಪೂಜಿಸಲು ಗಣನಾಥ

ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨||


ಇಂದು ಜಗವೆಲ್ಲ ಉಮೆನಂದನನ ಪೂಜಿಸಲು

ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು

ತಂದೆ ಸಿರಿ ಪುರಂದರವಿಠಲನ ಸೇವೆಯೊಳು

ಬಂದ ವಿಘ್ನವ ಕಳೆದಾನಂದವನು ಕೊಡುವ ||೩||

...........................................................................................

ಜೈ ಜೈ ಹನುಮಾನ್ ಜಯ ಹನುಮಾನ್ SONG LYRICS | JAI JAI HANUMAN SONG LYRICS | ANJANEYA SONGS LYRICS

 CLICK HERE TO LEARN THIS SONG

ಜೈ ಜೈ ಹನುಮಾನ್ ಜಯ ಹನುಮಾನ್

ಜೈ ಜೈ ಹನುಮಾನ್ ಜಯ ಹನುಮಾನ್ ॥

 

ವಾಯುಪುತ್ರ ಜಯ ಹನುಮಾನ್

ವಾನರ ವೀರ ಜಯ ಹನುಮಾನ್

ವೀರಾಧಿ ವೀರ ಜಯ ಹನುಮಾನ್

ಶೂರಾಧಿ ಶೂರ ಜಯ ಹನುಮಾನ್ ॥೧॥

 

ಅಂಜನಿ ಪುತ್ರ ಜಯ ಹನುಮಾನ್

ಅತಿ ಬಲವಂತ ಜಯ ಹನುಮಾನ್

ಶ್ರೀ ರಾಮ ದೂತ ಜಯ ಹನುಮಾನ್

ಶ್ರೀ ರಾಮ ಭಕ್ತ ಜಯ ಹನುಮಾನ್ ॥೨॥

 

ಲಂಕೆಗೆ ಹಾರಿದ ಜಯ ಹನುಮಾನ್

ಸೀತೆಯ ಕಂಡ ಜಯ ಹನುಮಾನ್

ಮುದ್ರೆಯ ತೋರಿದ ಜಯ ಹನುಮಾನ್

ಅಭಯವ ನೀಡಿದ ಜಯ ಹನುಮಾನ್॥೩॥

...............................................................................................................................................

KALISU GURUVE KALISU SONG LYRICS

INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE 

पतङ्ग: = ಚಿಟ್ಟೆ (ಹಾರಾಡುವ ಕೀಟ) (fly)

चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly)

पुत्तिका / मत्कोटक: = ಗೆದ್ದಲು (termite)

तृणजलायुका = ಕ೦ಬಳಿಹುಳು (caterpillar)

शलभ: = ಮಿಡತೆ (grasshopper)

वृश्चिक: = ಚೇಳು (scorpion)

पिपीलिका = ಇರುವೆ (Ant)

लूता/ऊर्णनाभ: = ಜೇಡ (spider)

तैलप: = ಜಿರಳೆ (Cockroach)

शतपदी = ಲಕ್ಷ್ಮಿಚೇಳು ( Centipede)

मक्षिका = ನೊಣ (house fly)

मधुमक्षिका = ಜೇನುನೊಣ (HoneyBee)

स्वज्योति: / अग्निमाक्षिका /खद्योत: = ಮಿಂಚುಹುಳು  (firefly)

मशक: = ಸೊಳ್ಳೆ (Mosquito)

वरटा = ಕಣಜದ ಹುಳ (wasp)

यूका = ಹೇನು (louse)

मत्कुण: = ತಿಗಣೆ (Bedbug)

भ्रमर: = ದುಂಬಿ (Bee)

जलूका / जलायुका = ಜಿಗಣೆ (Leech)

कीट: = ಹುಳ (insect)

झिरिका = ಜೀರುಂಡೆ (Beetle)

कुलीर: / कर्कटक:  =  ಏಡಿ (Crab)

शम्बूक: = ಬಸವನ ಹುಳ (Snail)

किञ्चुलुक: = ಎರೆಹುಳು (earthworm)

गृहगोधिका =  ಹಲ್ಲಿ (Lizard)

सरट: = ಊಸರವಳ್ಳಿ (chameleon)

 .............................................................................................................

 FLOWER NAMES IN SANSKRIT

 

 

 


ತಲ್ಲಣಿಸದಿರು ಕಂಡ್ಯ ತಾಳು ಮನವೇ SONG LYRICS | TALLAnISADIRU KANDYA SONG LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯಬೇಡ ||

ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ  ಸಂಶಯಬೇಡ||1||

ಕಲ್ಲೊಳಗೆ  ಹುಟ್ಟಿರುವ ಕ್ರಿಮಿ ಕೀಟಗಳಿಗೆಲ್ಲ
ಅಲ್ಲಲ್ಲಿಗಾಹಾರ ಇತ್ತವರು ಯಾರೋ
ಬಲ್ಲಿದನು ಕಾಗಿನೆಲೆಯಾದಿ ಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯಬೇಡ||2||
......................................................................................


ಪುರಂದರ ದಾಸರು – ಕವಿ ಕಾವ್ಯ ಪರಿಚಯ | Purandara Dasa – Kavi Kavya Parichaya

  ಪೂರ್ವ ನಾಮ : ಶ್ರೀನಿವಾಸ ನಾಯಕ /ನವಕೋಟಿ ನಾರಾಯಣ (ಬಿರುದು) ಕಾಲ : 1484 - 1564 ಜನ್ಮಸ್ಥಳ : ಆರಗ , ತೀರ್ಥಹಳ್ಳಿ ತಾಲ್ಲೂಕು , ಶಿವಮೊಗ್ಗ ಜಿಲ್ಲೆ ತಂದೆ...