ರಚನೆ: ಕೆ
. ಎಸ್ . ನರಸಿಂಹಸ್ವಾಮಿ
ಹಾಡಲು ಕಲಿಯಿರಿ(CLICK HERE TO LEARN THIS SONG)
ಆಕಾಶಕ್ಕೆದ್ದು
ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ
ಮುತ್ತನಿಡುವ ಬೆಬ್ಬೆರೆಗಳ ಗಾನದಲ್ಲಿ
ಬಯಲ
ತುಂಬಾ ಹಸಿರು ದೀಪ ಹಚ್ಚಿ ಹರಿವ
ನದಿಗಳಲ್ಲಿ
ನೀಲಿಯಲ್ಲಿ
ಹೊಗೆಯ ಚೆಲ್ಲಿ ಯಂತ್ರ ಘೋಷ ಹೇಳುವಲ್ಲಿ
ಕಣ್ಣು
ಬೇರೆ ನೋಟ ಒಂದು ನಾವು
ಭಾರತೀಯರು||
ನಾಡಿನೆಲ್ಲ
ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ
ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ
ನೆಲದ ತೊಟ್ಟಿಲಿನಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ
ನಮ್ಮ
ಯುಗದ ದನಿಗಳಾಗಿ ಮೂಡಿತೆಲ್ಲ ಹಾಡಿನಲ್ಲಿ
ಭಾಷೆ
ಬೇರೆ ಭಾವ ಒಂದು ನಾವು
ಭಾರತೀಯರು||1||
ನಾಡಿಗಾಗಿ
ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ
ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ
ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ
ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೆ
ಇರಲಿ ನಾವು ಒಂದು ನಾವು
ಭಾರತೀಯರು||2||
...................................................................................................
Also see:
ಕನ್ನಡ ಕಲಿ- ಪಂಚೇಂದ್ರಿಯಗಳು|LEARN KANNADA - SENSE ORGANS| KANNADA SAVIGANA BLOGSPOT
ಕಣ್ಣುಗಳೆರಡು ಸಾಲದಮ್ಮ_ KANNUGALERADU SAALADAMMA LYRICS IN KANNADA