Jul 5, 2025

ಬಂದ ದುರಿತಗಳ ಪರಿಹರಿಸಲು |BANDA DURITHAGALA PARIHARISALU | PRANESHA DASA | KANNADA SAVIGANA LYRICS|

 

ಬಂದ ದುರಿತಗಳ ಪರಿಹರಿಸಲು ನಮ್ಮ

ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು| 

ಬಂದನು ಬರದಿಂದ ಗರುಡವಾಹನನಾಗಿ

ಬಂದ ಬಂದ ಭಕ್ತವೃಂದವ ನೋಡುತ

ಬಂದ , ಗೋವಿಂದ ,ಮುಕುಂದ ,ನಿತ್ಯಾನಂದ, ಬಂದಾ...||

 

ದುರುಳನಾದ ದುಶ್ಯಾಸನ ಸಭೆಯೊಳು

ತರುಣಿ ದ್ರೌಪದಿಯ ಸೀರೆಯ ಸೆಳೆಯಲು

ಪರಮ ಕರುಣದಿಂದ ತರುಣಿಗಕ್ಷಯವಿತ್ತು

ದ್ವಾರಕಾಧಿಪತಿ ಶ್ರೀಪತಿ ಒಲಿಯುತ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||1||

 

ಅರಗಿನಮನೆಯೊಳು ಪಾಂಡು ಕುಮಾರರು

ಇರುತಿರೆ ಅವರಿಗೆ ಬಂದ ವಿಪತ್ತನು 

ಪರಿಹಾರವ ಮಾಡಿ ದ್ರುಪದನ ಪೊರೆಯಲು

ಪರಮ ಹರುಷದಿಂದ ಮದುವೆಯ ಮಾಡಿದವ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||

 

ಗುಣನಿಧಿ ಪ್ರಾಣೇಶ ವಿಠ್ಠಲನು ಬಂದ ,ಘನತರವಾದ್ಯ ವಿಶೇಷಗಳಿಂದ

ಝಣಝಣರೆನ್ನುವ ಗೆಜ್ಜೆನಾದಗಳಿಂದ||2||

ಥದ್ದಿಮಿ  ಧಿಮಿಕ್ಕೆಂದು ಕುಣಿಯುತ ಬಂದ 

ಝಣಝಣ ಧಿಮಿಕ್ಕೆಂದು ಕುಣಿಯುತ ಬಂದ 

ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||3||

.............................................................................................................


No comments:

Post a Comment