ಬಂದ ದುರಿತಗಳ ಪರಿಹರಿಸಲು |BANDA DURITHAGALA PARIHARISALU | PRANESHA DASA | KANNADA SAVIGANA LYRICS|

 

ಬಂದ ದುರಿತಗಳ ಪರಿಹರಿಸಲು ನಮ್ಮ

ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು| 

ಬಂದನು ಬರದಿಂದ ಗರುಡವಾಹನನಾಗಿ

ಬಂದ ಬಂದ ಭಕ್ತವೃಂದವ ನೋಡುತ

ಬಂದ , ಗೋವಿಂದ ,ಮುಕುಂದ ,ನಿತ್ಯಾನಂದ, ಬಂದಾ...||

 

ದುರುಳನಾದ ದುಶ್ಯಾಸನ ಸಭೆಯೊಳು

ತರುಣಿ ದ್ರೌಪದಿಯ ಸೀರೆಯ ಸೆಳೆಯಲು

ಪರಮ ಕರುಣದಿಂದ ತರುಣಿಗಕ್ಷಯವಿತ್ತು

ದ್ವಾರಕಾಧಿಪತಿ ಶ್ರೀಪತಿ ಒಲಿಯುತ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||1||

 

ಅರಗಿನಮನೆಯೊಳು ಪಾಂಡು ಕುಮಾರರು

ಇರುತಿರೆ ಅವರಿಗೆ ಬಂದ ವಿಪತ್ತನು 

ಪರಿಹಾರವ ಮಾಡಿ ದ್ರುಪದನ ಪೊರೆಯಲು

ಪರಮ ಹರುಷದಿಂದ ಮದುವೆಯ ಮಾಡಿದವ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||

 

ಗುಣನಿಧಿ ಪ್ರಾಣೇಶ ವಿಠ್ಠಲನು ಬಂದ ,ಘನತರವಾದ್ಯ ವಿಶೇಷಗಳಿಂದ

ಝಣಝಣರೆನ್ನುವ ಗೆಜ್ಜೆನಾದಗಳಿಂದ||2||

ಥದ್ದಿಮಿ  ಧಿಮಿಕ್ಕೆಂದು ಕುಣಿಯುತ ಬಂದ 

ಝಣಝಣ ಧಿಮಿಕ್ಕೆಂದು ಕುಣಿಯುತ ಬಂದ 

ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||3||

.............................................................................................................


No comments:

Post a Comment

INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...