ಶೃಂಗಾರ ರೂಪನು ಷಣ್ಮುಖನು(SONG ON LORD KARTHIKEYA)SONG LYRICS IN KANNADA - SHRINGARA RUPANU SHANMUKHANU

 

ಶೃಂಗಾರ ರೂಪನು ಷಣ್ಮುಖನು



ಶೃಂಗಾರ ರೂಪನು ಷಣ್ಮುಖನು

ಶೃಂಗಾರ ರೂಪನು ಷಣ್ಮುಖನು

ಬಂಗಾರದೊಡಲಿನ ಕರುಣಾಂತರಂಗನು

ದಂಡಾಯುಧವನು ಧರಿಸಿದ ಸ್ವಾಮಿಯು

ಧರ್ಮವ ಕಾಯುವ ಕಂಕಣ ಬದ್ಧನು|| 


ಪಾರ್ವತಿ ಪ್ರೇಮದಿ ಹರಸಿದ ಕುವರನು

ಪರಶಿವ ಮೆಚ್ಚಿದ ಪಂಡಿತನು

ಪಾಪವ ನೀಗುವ ಪರಮ ಪುನೀತನು

ಬಡವರ ಕಷ್ಟವ ಬಲ್ಲವನೀತನು||1||


ಗಂಗೆಯು ಸಹಿಸದ ಬೆಂಕಿಯ ಬಡಲು

ಅಂತರಂಗವಿದು ಪ್ರೇಮದ ಕಡಲು

ಆನಂದ ಮೂರುತಿ ನಗುನಗುತಿರಲು

ಕೈಲಾಸ ಭುವಿಯಲ್ಲಿ ಯಾವಾಗಲೂ||2||

.................................................................................................................................

Also See:

ಓ೦ ಗ೦ ಗಣಪತೆ ನಮಿಪೆ (OM GAM GANAPATE NAMIPE) SONG LYRICS IN KANNADA SONG ON LORD GANESHA

ಓ೦ ಗ೦ ಗಣಪತೆ ನಮಿಪೆ(SONG O LORD GANESHA)


ಓ೦ ಗ೦ ಗಣಪತೆ ನಮಿಪೆ

ಸಿದ್ಧಿ ಬುದ್ಧಿ ಸಮೃದ್ಧಿದಾಯಕ||

 ವಿನಾಯಕ ಮೋದಕ ಸುಜನಕೆ ವರ ಜಗನ್ನಾಯಕ

ಮೂಲ ಕುಂಡಲ ಪ್ರಭಾ ಪ್ರಸನ್ನ||1||

 ಗಜಾನನ ಮೋಹನ ಮುನಿಜನ ಶರಣ ಸಂಜೀವನ

ಆದಿ ಮೂಲ ಬಲ ಮಹೇಶ ಬಾಲ||2||

.........................................


Also see:

     



 


ಶಿಶುಗೀತೆ: ಪುಟ್ಟ ಪುಟ್ಟ ಕೃಷ್ಣ (LYRICS OF PUTTA PUTTA KRISHNA, KANNADA RHYMES)

 

ಶಿಶುಗೀತೆ: ಪುಟ್ಟ  ಪುಟ್ಟ ಕೃಷ್ಣ 


ಪುಟ್ಟ  ಪುಟ್ಟ ಕೃಷ್ಣ ಪುಟಾಣಿ ಕೃಷ್ಣ

ಭಲಾರೆ ಗಡಿಗೆ ದೊಡ್ಡ ಬೆಣ್ಣೆ ಮುದ್ದೆ

ತೆಗೆದ, ನೆಕ್ಕಿದ ತೆಗೆದ, ನೆಕ್ಕಿದ

ಕೈಯೆಲ್ಲ ಬೆಣ್ಣೆ , ಮುಖವೆಲ್ಲ ಬೆಣ್ಣೆ

ತುಂಟ ಕೃಷ್ಣ ನಮ್ಮ ಕೃಷ್ಣ

ಸುರಬುರ ಸುರಬುರ ಮಜ್ಜಿಗೆ ಕಡೆದು

ಹೂವನೆಲ್ಲ ಕಟ್ಟಿ ಮಾಲೆಯ ಮಾಡಿ

ಕೃಷ್ಣಂಗೆ ಹಾಕಿ ವಂದನೆ ಮಾಡಿ

............................................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

baagi baagi bangara toogi( ಬಾಗಿ ಬಾಗಿ ಬಂಗಾರ ತೂಗಿ)

kannada-kaliswaras-with-image(ಕನ್ನಡ ವರ್ಣಮಾಲೆ :ಸ್ವರಗಳು)


ಈ ಹಿಂದೂ ದೇಶವು ನಮ್ಮ ಮನೆ| EE HINDU DESHAVU NAMMA MANE SONG LYRICS IN KANNADA|PATRIOTIC SONG

 

ದೇಶಭಕ್ತಿ ಗೀತೆ


ಹಿಂದೂ ದೇಶವು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ||

 

ಉತ್ತರದಲ್ಲಿ ಭಾರಿ ಹಿಮಾಲಯ

 ದಕ್ಷಿಣದಲ್ಲಿಕನ್ಯಾಕುಮಾರಿ

ಪೂರ್ವಪಶ್ಚಿಮದಲಿ ನೀಲ ಸಮುದ್ರ

 ಪಡುವಣ ಮೂಡಣ ಬೆಟ್ಟದ ಸಾಲು||1||

 

ತಾಯಿ ಕಾವೇರಿ ಕೃಷ್ಣ ಗೋದಾವರಿ

ನರ್ಮದ ತಪತಿ ತುಂಗಾಭದ್ರೆ

ಗಂಗಾ ತಾಯಿ ಸಿಂಧೂ ರಾಣಿ

ಚಂದದಿ ಹರಿಯುವ ನಂದನ ನಾಡು||2||

 

ಮೈಸೂರು ಕೇರಳ ಮದರಾಸು ಆಂಧ್ರ

ಬೊಂಬಾಯಿ ಅಸ್ಸಾಂ ಉತ್ಕಲ ವಂಗ

ರಾಜಸ್ಥಾನ ಪಂಜಾಬ್ ಕಾಶ್ಮೀರ

ಉತ್ತರ ಮಧ್ಯ ಹಿಮಾಲಯ ಪ್ರಾಂತ್ಯ||3||

 

ಗೀತ ಸಂದೇಶದ ಆದೇಶದಂತೆ

ಕಾತುರರಾಗಿ ಕಾದಿರಿ ನೀವು

ಗೀತಾಚಾರ್ಯರ ಗೀತೆಯ ನೆನೆಯುತ

ಮಾತೆಯ ಕಾಯು ಬೇಗನೆ ಬನ್ನಿ||4||


..............................

ಹಾಡಲು ಕಲಿಯಿರಿ(LEARN HOW TO SING THIS SONG)

Also see:

banasiri-prakritiya-varadana-lyrics(ಪರಿಸರ ಗೀತೆ: ಬನಸಿರಿ ಪ್ರಕೃತಿಯ ವರದಾನ )

hindustaanavu-endu-mareyada-song-lyrics(ಹಿಂದೂಸ್ಥಾನವು ಎಂದೂ ಮರೆಯದ)

ಸರಳ ಸುಭಾಷಿತಗಳು (ಅರ್ಥ ಸಹಿತ)– 2| SUBHASHITAS WITH KANNADA MEANING -2



ಸರಳ ಸುಭಾಷಿತಗಳು – 2


ಪಠತೋ ನಾಸ್ತಿ ಮೂರ್ಖತ್ವಮ್ ಜಪತೋ ನಾಸ್ತಿ ಪಾತಕಮ್
ಮೌನಿನ: ಕಲಹೋ ನಾಸ್ತಿ ಭಯಮ್ ಚಾಸ್ತಿ ಜಾಗ್ರತ: ||
(ಓದುವವನಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಸಮಯವರಿತು ಮಾತನಾಡುವವನಿಗೆ ಕಲಹವಿಲ್ಲ, ಜಾಗ್ರತನಾಗಿರುವವನಿಗೆ ಭಯವಿಲ್ಲ.)

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ, ಶಾಸ್ತ್ರಂ ತಸ್ಯ ಕರೋತಿ ಕಿಂ
ಲೋಚನಾಭ್ಯಾಮ್ ವಿಹೀನಸ್ಯ ದರ್ಪಣಮ್ ಕಿಂ ಕರಿಷ್ಯತಿ||
(ಯಾರಿಗೆ ಸ್ವಂತ ಬುದ್ಧಿಯಿರುವುದಿಲ್ಲವೊ, ಅವನಿಗೆ ಶಾಸ್ತ್ರದ ಉಪಯೋಗವೇನು? ಕಣ್ಣುಗಳೆ ಇಲ್ಲದವನಿಗೆ ಕನ್ನಡಿಯಿಂದ ಏನು ಪ್ರಯೋಜನ?)

ವಿದ್ವತ್ವಮ್ ಚ ನ್ರಪತ್ವಮ್ ಚ ನೈವ ತುಲ್ಯಮ್ ಕದಾಚನ
ಸ್ವದೇಶೇ ಪೂಜ್ಯತೇ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೆ
(ವಿದ್ಯೆ ಮತ್ತು ಅರಸೊತ್ತಿಗೆಗಳು ಒಂದಕ್ಕೊಂದು ಸರಿದೂಗಲಾರವು. ಅರಸನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ಇಲ್ಲವೇ ಮನ್ನಣೆ: ಆದರೆ ವಿದ್ಯಾವಂತರಿಗೆ ಎಲ್ಲೆಡೆ ಮರ್ಯಾದೆಯಿದೆ.)



Also see:





ಆವ ಕುಲವೋ ರಂಗ ಅರಿಯಲಾಗದು(AAVA KULAVO RANGA ARIYALAGADU LYRICS IN KANNADA



ಆವ ಕುಲವೋ ರಂಗ ಅರಿಯಲಾಗದು


ಆವ ಕುಲವೋ ರಂಗ ಅರಿಯಲಾಗದು,
ಆವ ಕುಲವೋ ರಂಗ ಅರಿಯಲಾಗದು
ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ
ದೇವ ಲೋಕದ ಪಾರಿಜಾತವ ಹೂವ ಸತಿಗೆ ತಂದನಂತೆ||

ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ
ಕೊಳಲನೂದಿ ಮೃಗ ಪಕ್ಷಿಗಳ ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗೀರೇಳುಲೋಕವ ಇರಿಸಿ ತಾಯಿಗೆ ತೋರ್ದನಂತೆ||1||

ಗೊಲ್ಲತಿಯರ ಮನೆಯ ಪೊಕ್ಕು ಕಳ್ಳತನವ ಮಾಡಿದನಂತೆ
ಗೊಲ್ಲರ ಪೂತನಿ ವಿಷವನುಂಡು ಮೆಲ್ಲನೆ ಧ್ರಡನ ಕೊಂದನಂತೆ
ಪಕ್ಷಿ ತನ್ನ ವಾಹನನಂತೆ ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದು ಮುಖದ ಚೆಲ್ವನಂತೆ||2||

ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ
ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ ಕಡಲ ತಡಿಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ||3||


ಹಾಡಲು ಕಲಿಯಿರಿ(LEARN HOW TO SING THIS SONG)

Also See:



ಬಂದನೋ ಬಂದನೋ ನಮ್ಮ ಗಣಪ ಬಂದನೋ (BANDANO BANDANO SONG LYRICS )


         

ಬಂದನೋ ಬಂದನೋ ನಮ್ಮ ಗಣಪ ಬಂದನೋ



ಬಂದನೋ ಬಂದನೋ ನಮ್ಮ ಗಣಪ ಬಂದನೋ
ಬಂದನೋ ಬಂದನೋ ನಮ್ಮ ಗಣಪ ಬಂದನೋ
ತಂದನೋ ತಂದನೋ ಹರುಷವನ್ನು ತಂದನೋ
ತಂದನೋ ತಂದನೋ ಹರುಷವನ್ನು ತಂದನೋ||

ವಿಘ್ನಗಳನು ನೀಗಿ ನಮಗೆ ನೀಡುತಾನೆ ಗಣಪನು
ವಿಘ್ನಗಳನು ನೀಗಿ ನಮಗೆ ನೀಡುತಾನೆ ಗಣಪನು
ಬುದ್ಧಿಯನ್ನು ಸಿದ್ಧಿಯನ್ನು ವಿದ್ಯೆಯನ್ನು ಗಣಪನು
ಬುದ್ಧಿಯನ್ನು ಸಿದ್ಧಿಯನ್ನು ವಿದ್ಯೆಯನ್ನು ಗಣಪನು||1||

ಗರಿಕೆ ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಗರಿಕೆ ಹುಲ್ಲು ಬಾಳೆಹಣ್ಣು ಕೋಡುಬಳೆ ಚಕ್ಕುಲಿ
ಅವನ ಮುಂದೆ ಇರಿಸಿ ನಾವು ಬೇಡುವೆವು ವರವನು
ಅವನ ಮುಂದೆ ಇರಿಸಿ ನಾವು ಬೇಡುವೆವು ವರವನು||2||


CLICK HERE FOR THE SONG