ಜಯ ಭಾರತ ಜನನಿಯ ತನುಜಾತೆ SONG LYRICS | ರಾಷ್ಟ್ರಕವಿ ಕುವೆಂಪು | JAYA BHARATHA JANANIYA TANUJAATE |

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:  ರಾಷ್ಟ್ರಕವಿ ಕುವೆಂಪು

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ ||


ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವತರಿಸಿದ
 ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||


ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
  ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||


ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
 ಭಾರತ ಜನನಿಯ ತನುಜಾತೆ
                                        ಜಯ ಹೇ ಕರ್ನಾಟಕ ಮಾತೆ ||                      
           
ತೈಲಪ ಹೊಯ್ಸಳರಾಳಿದ ನಾಡೇ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ
 ಭಾರತ ಜನನಿಯ ತನುಜಾತೆ
                                        ಜಯ ಹೇ ಕರ್ನಾಟಕ ಮಾತೆ ||                                 

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
  ಭಾರತ ಜನನಿಯ ತನುಜಾತೆ
             ಜಯ ಹೇ ಕರ್ನಾಟಕ ಮಾತೆ  ||

..............................................................................................................................................

ಹೊತ್ತಿತೋ ಹೊತ್ತಿತು ಕನ್ನಡದ ದೀಪ SONG LYRICS | HOTHITHO HOTHITHU KANNADA DA DEEPA |

 

ಸಾಹಿತ್ಯ : ಡಾ.ಸಿದ್ದಯ್ಯ ಪುರಾಣಿಕ

ಶಕ್ತಿ ಮೂಲವು ನಿನಗೆ ಕನ್ನಡದ ಪ್ರೇಮ
ಕನ್ನಡಿಗ ನೀನಾಗು ಕನ್ನಡದ ಧೀಮ
ಉಸಿರಾಗು ಕನ್ನಡದ ತೇಜ ಸ್ವರೂಪ
ಕನ್ನಡಿಗರೆದೆ ಬೆಳಗೆ ಕನ್ನಡವೇ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತೋ ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ



ಕಣ್ಣು ಕುಕ್ಕಿಸುವಂತೆ ಧೇವಿದ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.......... ಕನ್ನಡದ ಮಾನ......
ಕನ್ನಡದ ಪ್ರಾಣ... ಕನ್ನಡದ ಮಾನ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||1||

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರೂ ಬೇಕಿದನು ನಿಡುಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿಹಣತೆಯಾಗಿ
ತನ್ನ ಉಸಿರಾಗಿ.........ಧರ್ಮಕ್ಕೆ ಬಾಗಿ......
ತನ್ನ ಉಸಿರಾಗಿ ಧರ್ಮಕ್ಕೆ ಬಾಗಿ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||2||

ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕ್ಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬವಾಗಿ ಭವ್ಯ ಪ್ರದೀಪ
ಕಳೆಯುತ್ತಾ ತಾಪ............ ಬೆಳೆಸುತ್ತಾ ಸೈಪ
ಕಳೆಯುತ್ತಾ ತಾಪ .....ಬೆಳೆಸುತ್ತಾ ಸೈಪ
ಹೊತ್ತಿತೋ.. ಹೊತ್ತಿತು...ಕನ್ನಡದ ದೀಪ ||3||

..............................................................................................................................................

ಕರುನಾಡೇ ಕೈ ಚಾಚಿದೆ ನೋಡೆ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ SONG LYRICS | ರಚನೆ: ಸು ರಂ ಎಕ್ಕುಂಡಿ | KANNADA NAADINA KARAVALI SONG LYRICS

ಹಾಡಲು ಕಲಿಯಿರಿ(CLICK HERE TO LEARN THIS SONG)

 ರಚನೆ:  ಸು ರಂ ಎಕ್ಕುಂಡಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ


 ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ

ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ

ನಾವೆಲ್ಲ ಅವನನ್ನೆ ನ೦ಬಿದೆವಣ್ಣ ||1||


 ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ

ಸಹ್ಯಾದ್ರಿ ವನಗಳ ಸು೦ದರ ಭೂದೇವಿ

ಧರ್ಮವ ಸಾರುವ ಧರ್ಮಸ್ಠಳ

ಉಡುಪಿಯೇ ವೈಕು೦ಠ …..ಗೋಕರ್ಣ ಕೈಲಾಸ ||2||

 

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು

ಸಾವಿರ ಸ೦ಸಾರ ಬದುಕಿಗೆ ಹೊನ್ನು

ಮ೦ಗೇಶರಾಯರು ಗೋವಿ೦ದ ಪೈಗಳು

ಜನಿಸಿದ ಕವಿಗಳ ಸಿರಿನಾಡು

ದಾಸರ ವಾಣಿಯ ಮ೦ಗಳ ಬೀಡು ||3||

  

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಯಕ್ಷಗಾನ ಮೇಳದ ನಾಟ್ಯ ತರ೦ಗ

ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ

ಶರಾವತಿ ……..ನೇತ್ರಾವತಿ

ಪಾವನ ನದಿಗಳ ಸಾಗರ ಸ೦ಗಮ  ||4||

.......................................................................................................................................

ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ SONG LYRICS | RAGADALEGE BHAVA BESUGE SONG LYRICS


ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ಷಡಕ್ಷರಿ ಸುಗ್ಗನಹಳ್ಳಿ 

ರಾಗದಲೆಗೆ ಭಾವ ಬೆಸುಗೆ ಸೇರಬೇಕು ಗೀತೆಗೆ

ನಾಭಿಯಿಂದ ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ…||

 

 ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ

 ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ ||1||

 

 ಶೃಂಗ ಗಿರಿಗಳ ತುತ್ತತುದಿಯಲಿ ಎಲ್ಲೋ ಒಂದೆಡೆ ಲಯವಿದೆ

 ತಲುಪಬಹುದು ಅಲ್ಲಿಗೊಮ್ಮೆ ನಿರತ ಇದ್ದರೆ ಸಾಧನೆ  ||2||

 

ದೇಹಿ ಎನ್ನುವ ಭಾವ ಬೇಕು ನಾದರಾಣಿಯ ಅಡಿಯೊಳು

ಎಂದೋ ಒಮ್ಮೆ ಕರುಣೆ ಬಂದು ಇನಿತೆ ಇನಿತು ಕೊಡುವಳು ||3||

.................................................................................

ಶತಶತಮಾನಗಳೆ ಉರುಳಲಿ

ಶತ ಶತಮಾನಗಳೇ ಉರುಳಲಿ SONG LYRICS | KANNADA RAJYOTSAVA SONGS |SHATHA SHATHAMAANAGAlE URULALI SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಡಿ. ರಮೇಶ್ ಗುರುದೇವ್

 

ಶತ ಶತಮಾನಗಳೇ ಉರುಳಲಿ ನಾನಳಿದರೂ ನೀನಳಿದರೂ

 ಕೊನೆಗೊಬ್ಬ ಕನ್ನಡಿಗನು ಉಳಿದರೂ

ಕನ್ನಡಮಯವಾಗುವುದು ಕನ್ನಡ ನಾಡೆಲ್ಲಾ

ಆ ಒಬ್ಬ ಕನ್ನಡಿಗ ನೀನಾಗು ಬಾ

ಈ ತಾಯಿಯ ಋಣವಾ ತೀರಿಸು ಬಾ  ||

 

ಕನ್ನಡವೇ ಸತ್ಯ ಕನ್ನಡವೇ ನಿತ್ಯ

 

ಕನ್ನಡವೆಂದರೆ ಬರಿ ನುಡಿಯಲ್ಲ

ಧಮನಿ ಧಮನಿಯಲಿ ಹರಿಯುವ ರಕುತ

ಕನ್ನಡವೆಂದರೆ ಬರಿ ಭಾಷೆಯಲ್ಲ

ಹೃದಯ ಹೃದಯಗಳ ಸಂಗಮ

ಕನ್ನಡನೆಂದರೆ ಬರಿ ನಡೆಯಲ್ಲ

ಹೆಜ್ಜೆ ಹೆಜ್ಜೆಗಳು ಸಾಗಿದ ಗುರುತು

ಕನ್ನಡವೆಂದರೆ ಇತಿಹಾಸವಲ್ಲ

ಇಂದು ನಾಳೆಗಳ ಚಿರಬೆಸುಗೆ

ಕನ್ನಡವೆಂದರೆ ಜನ ಜಾತಿಯಲ್ಲ

ಸರ್ವರನು ಕೈಬೀಸಿ ಕರೆಯುವ ಮಾತೆ ||1||

 

ಕನ್ನಡವೆಂದರೆ ಬಿಳಿ ಮೋಡವಲ್ಲ

ಆಗುಂಬೆಯ ನಿತ್ಯ ವರ್ಷಧಾರೆ

ಕನ್ನಡವೆಂದರೆ ನಿಂತ ನೀರಲ್ಲ

ನಿರಂತರ ಹರಿಯುವ ಅಮೃತಕಾವೇರಿ

ಕನ್ನಡವೆಂದರೆ ಕಲ್ಲುಮನಸಲ್ಲ

ಕರಗಿದ ಬಾದಾಮಿಯ ಮೇಣ ಬಸದಿ

ಕನ್ನಡವೆಂದರೆ ಬರಿ ಧ್ವನಿಯಲ್ಲ

ಪ್ರತಿಧ್ವನಿಸುವ ಗೋಲಗುಮ್ಮಟ

ಕನ್ನಡವೆಂದರೆ ಕೊಂಪೆಯಲ್ಲ

ಗತಕಾಲದ ಸುವರ್ಣ ಹಂಪಿ ||2||

 

ಕನ್ನಡವೆಂದರೆ ನೀಲಾಕಾಶವಲ್ಲ

ಅದರಾಚೆಗೂ ಚಾಚುವ ಅನಂತ ದೂರ

ಕನ್ನಡವೆಂದರೆ ಬರಿ ಪ್ರಪಾತವಲ್ಲ

ಭಾವನೆಗಳ ಆಳಕ್ಕಿಳಿಯುವ ಜೋಗ ಜಲಪಾತ

ಕನ್ನಡವೆಂದರೇ ಬೇರೇ ಏನೂ ಅಲ್ಲ

ಅದು ನನ್ನೊಳಗೂ ಅದು ನಿನ್ನೊಳಗೂ

ಕಣಕಣದೊಳಗೂ ಬೆರೆತಿರುವ ಉಸಿರು

ಕನ್ನಡವೆಂದರೆ ಕೊನೆಯಾಗುವುದಲ್ಲ

ಅದು ಒಬ್ಬನಿಂದ ಕೋಟಿ ಕೋಟಿ ಜೀವ ಜೀವದಲಿ

ಸಂಚರಿಸುವ ಚೇತನ ,ಸಂಚರಿಸುವ ಚೇತನ,ಸಂಚರಿಸುವ ಚೇತನ ||3||

............................................................................................................................................................

ಕರುನಾಡೇ ಕೈ ಚಾಚಿದೆ ನೋಡೆ SONG LYRICS |RAVICHANDRAN SONGS | KARUNAADE KAI CHAACHIDE SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕರುನಾಡೇ……ಕೈ ಚಾಚಿದೆ ನೋಡೆ
ಹಸಿರುಗಳೇ……ಆ ತೋರಣಗಳೇ

ಬೀಸೋ ಗಾಳಿ ಚಾಮರ ಬೀಸಿದೆ  ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ

ಕರುನಾಡೇ ಎದೆ ಹಾಸಿದೆ ನೋಡೆ
ಹೂವುಗಳೇ ಶುಭ ಕೋರಿವೆ ನೋಡೆ ||

 

ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ

ಸಂಪಿಗೆ  ಸಂಪಿಗೆ ಕೆಂಡಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರಸಂಪಿಗೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……. ||1||

 

ಮೂಡಣ ಸೂರ್ಯನೇ ಅರಿಶಿಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ

ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ

ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು

ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಈ ಮಣ್ಣಿನಾ ಕೂಸು ನಾ……||2||

........................................................................................................................................

ಭಾಮಾ ರಮಣನ ದೀಪ ಮೆರೆಗೆ ದೀಪಲಕ್ಷ್ಮಿ SONG LYRICS | ಪು ತಿ ನರಸಿಂಹ ಆಚಾರ್ SONGS | BHAMA RAMANANA DEEPA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ :ಪು ತಿ ನರಸಿಂಹ ಆಚಾರ್

ಭಾಮಾ .......ರಮಣನ  ದೀಪ.... ಮೆರೆಗೆ.... ದೀಪ ಲಕ್ಷ್ಮಿ 


ಒಳ ಇರುಳ ತುಳಿತುಳಿದು ಒಳ ಇರುಳನು ತುಳಿತುಳಿದು 

ಬೇರೆ ಬಗೆಯ ತೆರೆದು, ಮೆರೆಯುತಿಹ ದೀಪ ಮೆರೆಗೆ ದೀಪಲಕ್ಷ್ಮಿ ||


ಹರಿಭವ ತರುವೊಳಗರಳಿಸುವರಳು 

ಇರವನು ರಸದೆಡೆ ಗೆಸೆಯುವ ಸರಳು 

ಮೃತ್ಯು ವೊಳಮೃತದ ಸೆಲೆಹಿನ ...ಕುರುಹೋ.... ಏನೆ

 ಮೆರೆಯುತಿಹ ದೀಪ, ಒಸಗೆ ....ದೀಪಲಕ್ಷ್ಮಿ ||


ಇಲ್ಲಮೆಯಿಂದಿರವಿಗೆನಡೆಸೆ ಎಂಬ

  ಪುಲ್ಲಮೆ ಇಲ್ನಲ್ಮೆ ಗೇರಿಸು ಎಂಬ

ಬಲ್ಲವರೆರಕೆಯ ಸಲಿಸುವ ದೀಪ ಲಕ್ಷ್ಮಿ||

..........................................................................................................................

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ SONG LYRICS | K S NARASIMHASWAMY | AKKI AARISUVAAGA SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ಕೆ.ಎಸ್. ನರಸಿಂಹಸ್ವಾಮಿ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ
ಸಿಂಗಾರ ಕಾಣದಾ ಹೆರಳು
ಬಂಗಾರವಿಲ್ಲದಾ ಬೆರಳು ||

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು ||1||

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ

ಝಲ್ಲೆನ್ನುವಾ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣುಬಿದ್ದು 
ಬಂಗಾರವಿಲ್ಲದ ಬೆರಳು ||2||

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೇ ಇವಳು
ಚಿತ್ರದಲಿ ತಂದಂತೆ ಇಹಳು
ಬೇಸರಿಯ ಕಿರಿಮುತ್ತು ನುಚ್ಚಿನಲಿ ನುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದಾ ಬೆರಳು ||3||

……………………………………………………………………...............

ಯಾ ದೇವಿ ಸರ್ವ ಭೂತೇಷು 

ಮಂಗಳದಾ ಈ ಸುದಿನ ಮಧುರವಾಗಲಿ SONG LYRICS |MANGALADA EE SUDINA SONG LYRICS | ನಾ ಮೆಚ್ಚಿದ ಹುಡುಗ MOVIE SONG LYRICS

 


ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲುಮೆ ಈ ಮನೆಯಾ ನಂದಾ ದೀಪವಾಗಲಿ||

ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ..
ಶ್ರುತಿಯೊಡನೆ ಸ್ವರತಾನ ಲೀನವಾಗಲಿ ಶುಭಗೀತೆ ಮಿಡಿಯಲಿ..||1||

ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು..
ಮಮತೆ ಇರುವ ಮನೆಯೆ ಸದಾ ಜೇನಿನಗೂಡು ಅದೇ ಶಾಂತಿಯಬೀಡು.||2||

.............................................

ಯೆಂಡ ಯೆಂಡ್ತಿ ಕನ್ನಡ ಪದಗೋಲ್       ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು

ಕಂಗಳು ತುಂಬಿರಲು ಕಂಬನಿ ಧಾರೆಯಲಿ SONG LYRICS | KANGALU TUMBIRALU SONG LYRICS | ಚಂದನದ ಗೊಂಬೆ MOVIE SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..||

ನಿಮ್ಮ ರೂಪ ಕಣ್ಣಿನಲಿ
 ನಿಮ್ಮ ಮಾತೆ ಕಿವಿಗಳಲೀ
ನಿಮ್ಮ ನೋಟ ಇನ್ನೂ ನನ್ನ
 ಹೃದಯವೀಣೆ ಮೀಟಿರಲೂ
ನಿಮ್ಮ ಸ್ನೇಹ ಮನಸಿನಲಿ 
ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ
 ಅಮ್ಮಾ ಎಂದು ಕೂಗಿರಲೂ
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೇ..||1||

ನೀವು ತಂದ ಈ ಮನೆಗೆ
 ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ 
ಹೋಗಲಾರೆ ನಿಮ್ಮಾಣೆಗೂ..ಆ..ಆ.
ನಿಮ್ಮ ಮನೆ ಬಾಗಿಲಿಗೆ
 ತೋರಣದ ಹಾಗಿರುವೇ
ನಿಮ್ಮ ಮನೆ ದೀಪವಾಗೀ
 ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೇ..||2||
..........................................

ಜಾನಪದ ಗೀತೆಗಳು    ಒಂದಿರುಳು ಕನಸಿನಲಿ ನನ್ನವಳ

ಈ ಸಂಜೆ ಯಾಕಾಗಿದೆ ನೀನಿಲ್ಲದೆ SONG LYRICS |EE SANJE YAAKAAGIDE SONG LYRICS | ಗೆಳೆಯ MOVIE SONG LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂ
ಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ ||

ಲಾ ಲಾ ಲ ಲ ಲಾ ಲ ಲಾ ಲಾ....

ಈ ನೋವಿಗೆ ಕಿಡೀ ಸೋಕಿಸಿ 
ಮಜ ನೋಡಿವೇ ತಾರಾಗಣ
ತಂಗಾಳಿಯ ಪಿಸುಮಾತಿಗೆ
 ಯುಗವಾಗಿದೇ ನನ್ನ ಕ್ಷಣಾ
ನೆನಪೆಲ್ಲವೂ ಹೂವಾಗಿದೆ
 ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..||1||

ಆ ಆ ಆ...ಆ ಆ ಆ..

ನೀನಿಲ್ಲದೇ ಆ ಚಂದಿರಾ
 ಈ ಕಣ್ಣಲೀ ಕಸವಾಗಿದೇ
ಅದನೂದುವಾ ಉಸಿರಿಲ್ಲದೇ 
ಬೆಳದಿಂಗಳು ಅಸುನೀಗಿದೇ
ಆಕಾಶದೀ ಕಲೆಯಾಗಿದೇ 
ಈ ಸಂಜೆಯಾ ಕೊಲೆಯಾಗಿದೇ
ಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..||2||

......................................

ಮಂಕುತಿಮ್ಮನ ಕಗ್ಗ               ಜೇನಿನ ಹೊಳೆಯೊ ಹಾಲಿನ ಮಳೆಯೊ

INSECTS NAMES IN SANSKRIT | कीटा:/ ಕೀಟಗಳು | Sanskrit Learning Through Kannada | list of insects

CLICK HERE TO VIEW ON YOUTUBE   पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...