ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಬಿ ಆರ್. ಲಕ್ಷ್ಮಣರಾವ್
ಕರ್ನಾಟಕ ಬರಿ ನಾಡಲ್ಲ,
ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ
ನುಡಿಯಲ್ಲ, ನಮ್ಮಂತರಂಗದಾ ಮಾತು||
ಕಂಗೊಳಿಸುವ ಬರಿ
ಗಿರಿಯಲ್ಲ ಸಹ್ಯಾದ್ರಿಯ ಸಾಲು,
ಹೊಮ್ಮಿದೆ ಸಲಹುವ
ಅಮ್ಮನೆದೆ ಊಡಲೆಮಗೆ ಹಾಲು|
ಬರಿನೆರೆ ನುಗ್ಗುವ
ನೀರಲ್ಲ ಕೃಷ್ಣ ಕಾವೇರಿ ತುಂಗಾ
ಧಮನಿ ಧಮನಿಯಲಿ ಹರಿವ
ಚೇತನ, ಕಣ್ಣ ಬೆಳಕು ನಮಗೆ||೧||
ಪಂಪ
ಕುಮಾರವ್ಯಾಸರೆಂದರೆ ಅಲ್ಲ ಕವಿಗಳು ಮಾತ್ರ
ಇಂದೂ ಕನ್ನಡ ಕಾವ್ಯ
ಮಾಲೆಗೆ ಅವರೇ ಅಂತಃಸೂತ್ರ|
ಶಿಲ್ಪ ಕಲೆಯ ಬರಿ ಬಲೆಯಲ್ಲ ಹಳೇಬೀಡು ಬೇಲೂರು
ನಮ್ಮ ಬೇರನ್ನು ತೋರುತ್ತಿದೆ,
ಅಲ್ಲೇ ನಮ್ಮ ತಲೆಮಾರು|| ೨||
...................................................................................
ಕನ್ನಡ ರಾಜ್ಯೋತ್ಸವ ಗೀತೆಗಳು
No comments:
Post a Comment