ರಚನೆ:
ಡಿ ವಿ ಗುಂಡಪ್ಪ (ಅಂತ:ಪುರ ಗೀತೆಗಳು)
ಏನೀ ಮಹಾನಂದವೇ ಓ
ಭಾಮಿನೀ
ಏನೀ ಸಂಭ್ರಮದಂದವೇ
ಬಲು ಚೆಂದವೇ।
ಏನೀವೃತಾಮೋದ ಎನೀ
ಮುರಜನಾದ
ಏನೀ ಜೀವೋನ್ಮಾದ ಏನೀ
ವಿನೋದ॥
ಢಕ್ಕೆಯ ಶಿರ ಕೆತ್ತಿ
ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ
ತಕಝೆಣುರೆನ್ನಿಸಿ।
ಕುಕ್ಕುತೆ ಚರಣವ
ಕುಲುಕುತೆ ಕಾಯವ
ಸೊಕ್ಕಿದ ಕುಣಿತವ
ಕುಣಿವೆ ನೀನೆಲೆ ಬಾಲೆ॥1||
ಆರು ನಿನ್ನಯ
ಹೃದಗಾರದೆ ನರ್ತಿಸಿ
ಮಾರ ಶೂರತೆಯ
ಪ್ರಕಾಶಿಸುತಿರ್ಪನ್।
ಸ್ಮೇರ ವದನ ನಮ್ಮ
ಚೆನ್ನಕೇಶವರಾಯ
ಓರೆಗಣ್ಣಿಂ ಸನ್ನೆ
ತೋರುತಲಿಹನೇನೆ॥2||
..........................................................................................................
No comments:
Post a Comment