Aug 7, 2025

ಸರ್ಪಾಪಸರ್ಪ ಭದ್ರಂ ತೇ | ಸರ್ಪ ಭಯ ನಿವಾರಣೆಗೆ ಶ್ಲೋಕ with meaning in kannada - shloka

 CLICK HERE FOR EXPLANATION FOR THIS SHLOKA

सर्पापसर्प भद्रं ते गच्छ सर्प महाविष।

जनमेजययज्ञान्तॆ आस्तीकवचनं स्मर॥

ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ।

ಜನಮೇಜಯ ಯಜ್ಞಾಂತೇ ಆಸ್ತೀಕ ವಚನಂ ಸ್ಮರ॥

ಮಹಾವಿಷವುಳ್ಳ ಮಹಾಸರ್ಪವೇ , ಅತ್ತ ಸರಿ. ಇಲ್ಲಿಂದ ಹೊರಟು ಹೋಗು. ನಿನಗೆ ಮಂಗಳವಾಗಲಿ. ಜನಮೇಜಯನು ಮಾಡಿದ ಸರ್ಪ ಯಾಗದ ಅಂತ್ಯದಲ್ಲಿ ಮಹಾಮಹಿಮನಾದ ಆಸ್ತೀಕನು ನಿನ್ನ ಪೂರ್ವಜರನ್ನು ಕುರಿತು ಏನು ಹೇಳಿದ್ದನೆಂಬುದನ್ನು ಸ್ಮರಿಸು.

                                                 -------ಮಹಾಭಾರತ-ಆದಿಪರ್ವದ ಆಸ್ತೀಕ ಪರ್ವವೆಂಬ ಉಪಪರ್ವ

ಆಸ್ತೀಕಸ್ಯ ವಚ:  ಶ್ರುತ್ವಾ ಯ:ಸರ್ಪೋ ನ ನಿವರ್ತತೇ।

ಶತಧಾ ಭಿದ್ಯತೇ ಮೂರ್ಧ್ನೀ ಶಿಂಶವೃಕ್ಷಫಲಂ ಯಥಾ॥

ಆಸ್ತೀಕನು ಹೇಳಿದ ಮಾತುಗಳನ್ನು ಜ್ಞಾಪಕಕ್ಕೆ ತಂದಮೇಲೂ ಯಾವ ಸರ್ಪವು ತನ್ನ ಪಾಡಿಗೆ ತಾನು ಹೊರಟು ಹೋಗುವುದಿಲ್ಲವೋ ಅಂತಹ ಸರ್ಪದ ತಲೆಯು ಶಿಂಶವೃಕ್ಷದ ಫಲದಂತೆ ನೂರಾರು ಹೋಳಾಗುತ್ತದೆ.

……………………………………………………………………………

ಜರತ್ಕಾರೋಜರತ್ಕಾರ್ವಾಂ ಸಮುತ್ಪನ್ನೋ ಮಹಾಶಯಾ:।

ಆಸ್ತೀಕ ಸತ್ಯಸಂಧೋ ಮಾಂ ಪನ್ನಗೆಭ್ಯೋSಭಿರಕ್ಷತು॥

ಜರತ್ಕಾರುವಿನಿಂದ ಜರತ್ಕಾರುವಿನಲ್ಲಿ ಸಮುತ್ಪನ್ನನಾದ ,ಮಹಾಶಯನಾದ ಸತ್ಯಸಂಧನಾದ ಆಸ್ತೀಕನು ಹಾವುಗಳಿಂದ ನನ್ನನ್ನು ಸಂರಕ್ಷಿಸಲಿ.

-ಸಂಧ್ಯಾವಂದನೆಯ ಉಪಸ್ಥಾನದಲ್ಲಿ ಹೇಳುವ ಮಂತ್ರ

…………………………………………………………………………


No comments:

Post a Comment