ಹಾಡಲು ಕಲಿಯಿರಿ(CLICK HERE TO LEARN THIS SONG)
ಶಂಕರ
ಶಶಿಧರ ಗಜಚರ್ಮಾಂಬರ ಗಂಗಾಧರ ಹರನೆ
ಸುಂದರ
ಸ್ಮರಹರ ಗೌರಿ ಮನೋಹರ ಜಯ
ಪರಮೇಶ್ವರನೇ
ಜಯ ಜಯ ಶಂಕರನೇ
ಜಯ ವಿಶ್ವೇಶ್ವರನೇ ||
ಈಶ ಗಿರೀಶ ಮಹೇಶ ಉಮೇಶ ಜಯ
ವಿಶ್ವೇಶ್ವರನೇ
ಶೂಲಿ
ಕಪರ್ದಿ ತ್ರಿನೇತ್ರ ತ್ರಯಂಬಕ ಜಯ ಮೃತ್ಯುಂಜಯನೇ
ಜಯ ಮೃತ್ಯುಂಜಯನೇ|
ಭಕುತಿಗೆ
ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ
ವರಗಳ ಆ ಕ್ಷಣ ನೀಡುವ
ಸಾಂಬಸದಾಶಿವನೆ|
ಜಯ ಜಯ ಶಂಕರನೇ ಜಯ
ವಿಶ್ವೇಶ್ವರನೇ ||
ಋಷಿಗಳ
ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ
ರಕ್ಷಿಸೆ ವಿಷವನೆ ಕುಡಿದ ಕರುಣಾಸಾಗರನೇ, ಕುಡಿದ ಕರುಣಾಸಾಗರನೇ|
ಶಂಕರ
ಶಶಿಧರ ಗಜಚರ್ಮಾಂಬರ ಗಂಗಾಧರ ಹರನೆ
ಸುಂದರ
ಸ್ಮರಹರ ಗೌರಿ ಮನೋಹರ ಜಯ
ಪರಮೇಶ್ವರನೇ
ಜಯ ಜಯ ಶಂಕರನೇ
ಜಯ ವಿಶ್ವೇಶ್ವರನೇ ||
Also see:
ನೀಡು ಶಿವ ನೀಡದಿರು ಶಿವ(NEEDU SHIVA NEEDADIRU SHIVA) SONG LYRICS IN KANNADA
No comments:
Post a Comment